ಮುಳಗುಂದ: ದೇಶದಲ್ಲಿ ಅತಿಸಾರ ಭೇದಿಯಿಂದ ಐದು ವರ್ಷದೊಳಗಿನ ಮಕ್ಕಳು ಮರಣ ಹೊಂದುತ್ತಿದ್ದು ಸರಕಾರ ಮಕ್ಕಳ ಸಾವು ನಿಯಂತ್ರಿಸಲು ಆರೋಗ್ಯ ಇಲಾಖೆಯಿಂದ ಪ್ರತಿವರ್ಷ ಮನೆ ಮನೆಗೆ ಓಆರ್ಎಸ್-ಜಿಂಕ್ ಮಾತ್ರೆ ವಿತರಿಸಲಾಗುತ್ತಿದೆ ಎಂದು ಕಣವಿ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಕಿ.ಪು.ಆ.ಸಹಾಯಕ ನವೀನ ಸಾವಂತ ಹೇಳಿದರು.
ಪಟ್ಟಣದ ಸಮೀಪದ ಹೊಸುರ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಓಆರ್ಎಸ್-ಜಿಂಕ್ ಮಾತ್ರೆ ವಿತರಿಸಿ ಅವರು ಮಾತನಾಡಿ, ಅತಿಸಾರ ಭೇದಿಗೆ ಶುಚಿತ್ವದ ಕೊರತೆ ಮತ್ತು ಬಯಲು ಮಲ ವಿಸರ್ಜನೆ ಕಾರಣವಾಗಿದೆ. ಕಲುಷಿತ ನೀರು, ಆಹಾರದಿಂದ ಸಾಂಕ್ರಾಮಿಕ ರೋಗಗಳು ಬರುತ್ತವೆ. ಎಲ್ಲರೂ ತಮ್ಮ ಸುತ್ತ-ಮುತ್ತಲಿನ ಪರಿಸರ ಬಗ್ಗೆ ಜಾಗೃತಿ ವಹಿಸಿಕೊಳ್ಳಬೇಕು. ಶೌಚಕ್ಕೆ ಹೋಗಿ ಬಂದ ನಂತರ ಕೈಗಳನ್ನು ಸಾಬುನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಓಆರ್ಎಸ್ ದ್ರಾವಣದಿಂದ ಅತಿಸಾರ ಭೇದಿ ನಿಯಂತ್ರಿಸಲು ಸಾಧ್ಯವಿದೆ ಎಂದು ಸಾರ್ವಜನಿಕರಿಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಕಣವಿ ಆರೋಗ್ಯ ಕೇಂದ್ರದ ಕಿರಿಯ ಪುರುಷ ಆರೋಗ್ಯ ಸಹಾಯಕ ನವೀನ ಸಾವಂತ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ರೇಖಾ ಗುಡಿಮನಿ, ಹೊಸುರ ಗ್ರಾಮದ ಆಶಾ ಕಾರ್ಯಕರ್ತೆ ಪ್ರೇಮಾ ಆದಿಯವರ ಮತ್ತು ಸಾರ್ವಜನಿಕರು ಇದ್ದರು,
ಪಟ್ಟಣದ ಸಮೀಪದ ಹೊಸುರ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಓಆರ್ಎಸ್-ಜಿಂಕ್ ಮಾತ್ರೆ ವಿತರಿಸಿ ಅವರು ಮಾತನಾಡಿ, ಅತಿಸಾರ ಭೇದಿಗೆ ಶುಚಿತ್ವದ ಕೊರತೆ ಮತ್ತು ಬಯಲು ಮಲ ವಿಸರ್ಜನೆ ಕಾರಣವಾಗಿದೆ. ಕಲುಷಿತ ನೀರು, ಆಹಾರದಿಂದ ಸಾಂಕ್ರಾಮಿಕ ರೋಗಗಳು ಬರುತ್ತವೆ. ಎಲ್ಲರೂ ತಮ್ಮ ಸುತ್ತ-ಮುತ್ತಲಿನ ಪರಿಸರ ಬಗ್ಗೆ ಜಾಗೃತಿ ವಹಿಸಿಕೊಳ್ಳಬೇಕು. ಶೌಚಕ್ಕೆ ಹೋಗಿ ಬಂದ ನಂತರ ಕೈಗಳನ್ನು ಸಾಬುನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಓಆರ್ಎಸ್ ದ್ರಾವಣದಿಂದ ಅತಿಸಾರ ಭೇದಿ ನಿಯಂತ್ರಿಸಲು ಸಾಧ್ಯವಿದೆ ಎಂದು ಸಾರ್ವಜನಿಕರಿಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಕಣವಿ ಆರೋಗ್ಯ ಕೇಂದ್ರದ ಕಿರಿಯ ಪುರುಷ ಆರೋಗ್ಯ ಸಹಾಯಕ ನವೀನ ಸಾವಂತ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ರೇಖಾ ಗುಡಿಮನಿ, ಹೊಸುರ ಗ್ರಾಮದ ಆಶಾ ಕಾರ್ಯಕರ್ತೆ ಪ್ರೇಮಾ ಆದಿಯವರ ಮತ್ತು ಸಾರ್ವಜನಿಕರು ಇದ್ದರು,