ಆ್ಯಪ್ನಗರ

3ನೇ ವಾರ್ಡ್‌ಗೆ ಸ್ವಚ್ಛ ಭಾರತ ಟ್ರೋಫಿ

ರೋಣ: ತಾಲೂಕಿನ ಅಬ್ಬಿಗೇರಿ ಗ್ರಾಮದ ಅನ್ನದಾನ ವಿಜಯ ಪ್ರೌಢ ಶಾಲೆ ಆವರಣದಲ್ಲಿಗ್ರಾ ಪಂ ಸಹಯೋಗದಲ್ಲಿಜರುಗಿದ ಫಿಟ್‌ ಇಂಡಿಯಾ ಸಪ್ತಾಹ ಅಂಗವಾಗಿ ನಡೆದ ಸ್ವಚ್ಛ ಭಾರತ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯಲ್ಲಿವಾರ್ಡ್‌ ನಂ.3ರ ಆಟಗಾರರು ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

Vijaya Karnataka 23 Dec 2019, 5:38 pm
ರೋಣ: ತಾಲೂಕಿನ ಅಬ್ಬಿಗೇರಿ ಗ್ರಾಮದ ಅನ್ನದಾನ ವಿಜಯ ಪ್ರೌಢ ಶಾಲೆ ಆವರಣದಲ್ಲಿಗ್ರಾ ಪಂ ಸಹಯೋಗದಲ್ಲಿಜರುಗಿದ ಫಿಟ್‌ ಇಂಡಿಯಾ ಸಪ್ತಾಹ ಅಂಗವಾಗಿ ನಡೆದ ಸ್ವಚ್ಛ ಭಾರತ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯಲ್ಲಿವಾರ್ಡ್‌ ನಂ.3ರ ಆಟಗಾರರು ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.
Vijaya Karnataka Web clean india trophy for 3rd ward
3ನೇ ವಾರ್ಡ್‌ಗೆ ಸ್ವಚ್ಛ ಭಾರತ ಟ್ರೋಫಿ


ಪ್ರಥಮ ಬಹುಮಾನಕ್ಕಾಗಿ ವಾರ್ಡ್‌ ನಂ. 3 ಮತ್ತು ವಾರ್ಡ್‌ ನಂ. 7ರೊಂದಿಗೆ ಫೈನಲ್‌ ಪಂದ್ಯ ನಡೆಯಿತು. ವಾರ್ಡ್‌ ನಂ. 7ರ ತಂಡ ಟಾಸ್‌ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಅವರು 4 ಓವರ್‌ನಲ್ಲಿ1 ವಿಕೆಟ್‌ ನಷ್ಟಕ್ಕೆ 53 ರನ್‌ ಗಳಿಸಿದರು. ನಂತರ ಬ್ಯಾಟಿಂಗ್‌ ಮಾಡಿದ ವಾರ್ಡ್‌ ನಂ. 3ರ ತಂಡವು 3.3 ಓವರ್‌ಗಳಲ್ಲಿ1 ವಿಕೆಟ್‌ ಕಳೆದುಕೊಂಡು 56 ರನ್‌ ಪಡೆಯುವ ಮೂಲಕ 5 ವಿಕೆಟ್‌ಗಳಿಂದ ವಿಜೇತರಾಗಿ ಸ್ವಚ್ಛ ಭಾರತ ಟ್ರೋಫಿ ಹಾಗೂ 5001 ರೂ.ಪಡೆಯಿತು.

ದ್ವಿತೀಯ ಬಹುಮಾನಕ್ಕಾಗಿ ವಾರ್ಡ್‌ ನಂ. 7 ಮತ್ತು ವಾರ್ಡ್‌ ನಂ. 4ರೊಂದಿಗೆ ವಿಜೇತರಾಗಿ ಫೈನಲ್‌ ಪ್ರವೇಶಿಸಿದರು. ಅದಕ್ಕೂ ಮೊದಲು ವಾರ್ಡ್‌ ನಂ. 4ರ ತಂಡ ಟಾಸ್‌ಗೆದ್ದು ಫಿಲ್ಡಿಂಗ್‌ ಆಯ್ಕೆ ಮಾಡಿಕೊಂಡರು. ವಾರ್ಡ್‌ ನಂ.7 ತಂಡ ಬ್ಯಾಟಿಂಗ್‌ನಲ್ಲಿ4 ಓವರ್‌ಗಳಲ್ಲಿಆಲೌಟ್‌ ಆಗಿ 36 ರನ್‌ ಗಳಿಸಿದರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್‌ ಮಾಡಿದ ವಾರ್ಡ್‌ ನಂ. 4ರ ತಂಡವು 4 ಓವರ್‌ಗಳಲ್ಲಿ34 ರನ್‌ ಗಳಿಸುವಷ್ಟರಲ್ಲಿಆಲೌಟ್‌ ಆದರು. ವಾರ್ಡ್‌ ನಂ. 7ರ ತಂಡವು ಪೈನಲ್‌ ಪ್ರವೇಶ ಮಾಡಿತು. ಫೈನಲ್‌ ಪಂದ್ಯಾದಲ್ಲಿವಾರ್ಡ್‌ ನಂ. 3ರರೊಂದಿಗೆ ಸೋತು ದ್ವಿತೀಯ ಬಹುಮಾನ 3001 ರೂ. ಹಾಗೂ ಟ್ರೋಫಿ ಪಡೆದುಕೊಂಡಿತು. ತೃತೀಯ ಬಹುಮಾನವನ್ನು ವಾರ್ಡ್‌ ನಂ. 4ರ ತಂಡವು ಟ್ರೋಫಿ ಹಾಗೂ 2001 ರೂ. ಬಹುಮಾನವನ್ನು ಪಡೆದುಕೊಂಡಿತು.

ಗ್ರಾ.ಪಂ ಸದಸ್ಯ ಶರಣಪ್ಪ ಗುಜಮಾಗಡಿ ಕ್ರಿಕೇಟ್‌ ಪಂದ್ಯಾವಳಿಯಲ್ಲಿಗೆದ್ದ ತಂಡಗಳಿಗೆ ಬಹುಮಾನಗಳನು ನೀಡಿ, ಯುವಕರು ಕೇವಲ ಕ್ರೀಡೆಗಳಲ್ಲಿಪಾಲ್ಗೊಳ್ಳುವುದರಿಂದ ಗ್ರಾಮವನ್ನು ಸ್ವಚ್ಛ ಹಾಗೂ ಸುದಂರವನ್ನಾಗಿಸಲು ಸಾಧ್ಯವಿಲ್ಲ. ಇದಕ್ಕಾಗಿ ಗ್ರಾಮದ ಪ್ರತಿಯೊಬ್ಬ ಯುವಕರು ನಿತ್ಯ ಗ್ರಾಮದ ನೈರ್ಮಲ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ತಾವು ಆಟ ಆಡುವ ಮೈದಾನವನ್ನು ಸ್ವಚ್ಛಗೊಳಿಸುವದರ ಜತೆಗೆ ಗ್ರಾಮವನ್ನು ಪ್ಲಾಸ್ಟಿಕ್‌ ಮುಕ್ತ ಹಾಗೂ ಕಸ ಮುಕ್ತ ಗ್ರಾಮವಾಗಿಸಲು ಪ್ರಮಾಣಿಕ ಪ್ರಯತ್ನ ಮಾಡಬೇಕು. ಈ ಕ್ರೀಡೆಯಲ್ಲಿಪಾಲ್ಗೊಂಡ ಯುವಕರು ಇದು ನಮ್ಮ ಗ್ರಾಮ ಎಂಬುವದನ್ನು ತಿಳಿದುಕೊಂಡು ಗ್ರಾಮದ ಅಭಿವೃದ್ಧಿಗೆ ಸಲಹೆ ಹಾಗೂ ಸೂಚನೆಗಳನ್ನು ನೀಡುವ ಮೂಲಕ ಗ್ರಾಮವನ್ನು ಸ್ವಚ್ಛಗೊಳಿಸುವುದಕ್ಕೆ ಮುಂದಾಗಬೇಕು ಎಂದರು.

ಗ್ರಾ.ಪಂ ಅಧ್ಯಕ್ಷ ಕಳಕಪ್ಪ ಬಿಲ್ಲ, ಉಪಾಧ್ಯಕ್ಷೆ ದೇವಕ್ಕ ಮಾರೆಪ್ಪನವರ, ಸುರೇಶ ನಾಯ್ಕರ, ಬಸವರಾಜ ತಳವಾರ, ಭೀಮಶಿ ಮಲ್ಲಾಪೂರ, ಮಹಾದೇವಪ್ಪ ಕಂಬಳಿ, ಹನಮಂತಪ್ಪ ದ್ವಾಸಲ್‌, ಲಕ್ಷತ್ರ್ಮಣ ಐಹೊಳ್ಳಿ, ಸುರೇಸ ಶಿದ್ನೇಕೊಪ್ಪ, ಯಲ್ಲಪ್ಪ ಹಿರೇಮನಿ, ಮಹಾದೇವಪ್ಪ ಯಾಳಗಿ, ಪಿಡಿಒ ಶಿವನಗೌಡ ಮೆಣಸಗಿ, ಗ್ರಾ.ಪಂ ಸಿಬ್ಬಂದಿ ವಿರೇಶ ಮ್ಯಾಗೇರಿ ಸೇರಿದಂತೆ ಇತರರಿದ್ದರು. ಉಪನ್ಯಾಸಕ ಬಸವರಾಜ ಪಲ್ಲೇದ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ