ಆ್ಯಪ್ನಗರ

ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ

ಕೊಣ್ಣೂರ: ಮಕ್ಕಳು ಅವರ ಬಾಲ್ಯದಲ್ಲಿಆಟವಾಡುವ ಕಲೆಯಲ್ಲಿಹೊಸತನವಾದ ಕಲೆಯನ್ನು ಕಂಡುಹಿಡಿಯಬಲ್ಲವಿಜ್ಞಾನಿಗಳಾಗಿರುತ್ತಾರೆ. ಆ ಕಲೆ ಬೆಳಕಿಗೆ ತರಲು ಶಿಕ್ಷಕರು ಶ್ರಮಿಸಬೇಕು ಎಂದು ಭೈರನಹಟ್ಟಿಯ ಶ್ರೀ ಶಾಂತಲಿಂಗ ಸ್ವಾಮಿಗಳು ಹೇಳಿದರು.

Vijaya Karnataka 12 Sep 2019, 5:00 am
ಕೊಣ್ಣೂರ: ಮಕ್ಕಳು ಅವರ ಬಾಲ್ಯದಲ್ಲಿಆಟವಾಡುವ ಕಲೆಯಲ್ಲಿಹೊಸತನವಾದ ಕಲೆಯನ್ನು ಕಂಡುಹಿಡಿಯಬಲ್ಲವಿಜ್ಞಾನಿಗಳಾಗಿರುತ್ತಾರೆ. ಆ ಕಲೆ ಬೆಳಕಿಗೆ ತರಲು ಶಿಕ್ಷಕರು ಶ್ರಮಿಸಬೇಕು ಎಂದು ಭೈರನಹಟ್ಟಿಯ ಶ್ರೀ ಶಾಂತಲಿಂಗ ಸ್ವಾಮಿಗಳು ಹೇಳಿದರು.
Vijaya Karnataka Web cluster level talent fountain
ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ


ಅವರು ಶಿರೋಳ ಎಸ್‌.ಎನ್‌.ಗಾಡಿ ಪ್ರಾಥಮಿಕ ಶಿಕ್ಷಣ ಸಂಸ್ಥೆಯಲ್ಲಿಸಾರ್ವಜನಿಕ ಶಿಕ್ಷಣ ಇಲಾಖೆ ಗದಗ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಲಯ ನರಗುಂದ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ ಆಶ್ರಯದಲ್ಲಿಹಮಿಕೊಂಡ ಶಿರೋಳ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿಮಾತನಾಡಿದ ಅವರು, ಮಕ್ಕಳು ಒಳ್ಳೆಯ ಶಿಕ್ಷಣದ ಜತೆಗೆ ಶ್ರಮಪಟ್ಟು ಅಭ್ಯಾಸ ಮಾಡಬೇಕು ಎಂದರು.

ಕ್ಷೇತ್ರ ಸಂಪನ್ಮೋಲ ಅಧಿಕಾರಿ ರವಿ ಕಟ್ಟಿಮನಿ ಮಾತನಾಡಿ, ಮಕ್ಕಳಿಗೆ 4 ಗೋಡೆಗಳ ಮಧ್ಯ ಶಿಕ್ಷಣ ನೀಡಿದರೆ ಸಾಲದು ಅದು ಗಾಳಿ ಬೆಳಕು ನೀರು ಪರಿಸರದಲ್ಲಿ ಮಗು ಬೆಳೆದಾಗ ಮಾತ್ರ ಮಗುವಿನಲ್ಲಿಹೊಸ ಕಲೆಗಳು ಸೃಷ್ಟಿಯಾಗತೊಡಗುತ್ತವೆ ಎಂದರು.26 ನಿರಾಶ್ರಿತ ಕುಟುಂಬಕ್ಕೆ ಎಸ್‌. ಎನ್‌.ಗಾಡಿ ಶಿಕ್ಷಣ ಸಂಸ್ಥೆಯಿಂದ 2000 ರೂ. ಚೆಕ್‌ವಿತರಿಸಲಾಯಿತು.

ಶಿರೋಳ ಗ್ರಾಪಂ ಉಪಾಧ್ಯಕ್ಷೆ ಶೇಖವ್ವ ಯಲಿಬಳ್ಳಿ,ಎಂ.ಎಸ್‌.ಯಾದವಾಡ,ಜಗದೀಶ ವಸ್ತ್ರದ,ಸೋಮಶೇಖರಯ್ಯ ವಸ್ತ್ರದ,ಶೇಖಣ್ಣ ಗಟ್ಟಿ,ಬಿ.ಜಿ.ಕರಕಿಕಟ್ಟಿ,ಮಹಾಬಲೇಶ ಕೊಡಬಳ್ಳಿ,ಮಲ್ಲಣ್ಣ ಜಾಬಣ್ಣವರ,ಡಿ.ವಾಯ್‌.ಶಾಂತಗೇರಿ,ಶಿವಾನಂದ ಸೊಪ್ಪಿನ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ