ಗದಗ: ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಮಹಾರಾಷ್ಟ್ರಕ್ಕೆ ನೀರು ಹರಿಸುವ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಕೇವಲ ಚುನಾವಣೆ ಗಿಮಿಕ್. ನದಿ ನೀರಿನ ವಿವಾದವಿದ್ದಾಗ ಇಂಥ ಹೇಳಿಕೆ ನೀಡುವುದರಿಂದ ಭವಿಷ್ಯದಲ್ಲಿಹಕ್ಕು ಸಾಧನೆಗೆ ಅವಕಾಶವಾಗುತ್ತದೆ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ನೀರಿಲ್ಲದ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಇಂಥ ಹೇಳಿಕೆ ನೀಡಿರುವುದು ಸರಿಯಲ್ಲ. ಚುನಾವಣೆ ಸ್ಟಂಟ್ಗಾಗಿ ಮುಖ್ಯಮಂತ್ರಿ ಇಂಥ ಹೇಳಿಕೆ ನೀಡಿದ್ದರೆ ಕೂಡಲೇ ಅವರು ತಮ್ಮ ಹೇಳಿಕೆ ವಾಪಸ್ ಪಡೆದು, ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 15 ದಿನಗಳ ಒಳಗಾಗಿಯೇ ಮಹದಾಯಿ ನೀರು ಹರಿಸುವುದಾಗಿ ಹೇಳಿಕೆ ನೀಡಿದ್ದ ಯಡಿಯೂರಪ್ಪ ಅವರು, ಐತೀರ್ಪು ಅನುಷ್ಠಾನಕ್ಕೆ ಮುಂದಾಗದೆ ಕೇವಲ ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರೆ. ನೀರಿನ ವಿಷಯದಲ್ಲಿಕೇವಲ ಭಾಷಣಗಳಿಂದ ಜನರನ್ನು ಖುಷಿಯಾಗಿಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, 15 ದಿನದಲ್ಲಿನೀರು ನೀರು ತರುವ ಬಗ್ಗೆ ಮಾತನಾಡುವವರು ಬಾಟಲಿಯಲ್ಲಿತರುತ್ತಾರ ಎಂದು ಖಾರವಾಗಿ ಪ್ರಶ್ನಿಸಿದರು.
ಹಸಿವಿನ ವಿಚಾರದಲ್ಲಿನಮ್ಮ ದೇಶವು ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾ ಅಷ್ಟೇ ಅಲ್ಲ, ಆಫ್ರಿಕನ್ ದೇಶಗಳಿಗಿಂತಲೂ ಹಿಂದಿದೆ. 127 ದೇಶಗಳಲ್ಲಿಭಾರತವು 102 ಸ್ಥಾನದಲ್ಲಿದೆ. ಹಸಿವು ಮುಕ್ತ ಭಾರತಕ್ಕಾಗಿ ಮೋದಿ ಸರಕಾರ ಕರ್ನಾಟಕ ಮಾದರಿ ಅನುಸರಿಸಿ, ಜ.26 ರೊಳಗೆ ದೇಶಾದ್ಯಂತ ಜಾರಿಗೊಳಿಸಬೇಕು. ಹಸಿವು ಮುಕ್ತ ರಾಜ್ಯಕ್ಕಾಗಿ ಈ ಹಿಂದೆ ಕಾಂಗ್ರೆಸ್ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಜಿಲ್ಲೆಯಲ್ಲೂಸಹ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯ, ಇಂದಿರಾ ಕ್ಯಾಂಟಿನ್ನಿಂದ ಸಾಕಷ್ಟು ಬಡ ಜನರಿಗೆ ಹಸಿವು ಮುಕ್ತ ಮಾಡಲು ಸಾಧ್ಯವಾಗಿದೆ ಎಂದರು.
ಜಿಪಂ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ನಗರಸಭೆ ಮಾಜಿ ಸದಸ್ಯ ಅನಿಲ ಗರಗ ಇದ್ದರು.
ಉದ್ಯೋಗ ಕಡಿತ ,ಕೇಂದ್ರ ಚಿಂತನೆ ನಡೆಸಲಿ :
ಪ್ರಧಾನಿ ಮೋದಿ ಅವರು ಚುನಾವಣೆ ಪ್ರಚಾರದ ಸಂದರ್ಭದಲ್ಲಿ2 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಉದ್ಯೋಗ ಸೃಷ್ಟಿ ಇರಲಿ, ಉದ್ಯೋಗ ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ಸಾಕಷ್ಟು ಆಟೋಮೊಬೈಲ್ಗಳು ಕಂಪನಿಗಳು ಅವನತಿಯತ್ತ ಸಾಗುತ್ತಿವೆ. ಹಲವಾರು ದೊಡ್ಡ ದೊಡ್ಡ ಕಂಪನಿಗಳು ಸಹ ಸಾವಿರಾರು ಉದ್ಯೋಗಗಳನ್ನು ಕಡಿತ ಮಾಡುತ್ತಿವೆ. ಇನ್ನಾದರೂ ಕೇಂದ್ರ ಸರಕಾರ ಉದ್ಯೋಗ ಕಲ್ಪಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದು ಶಾಸಕ ಪಾಟೀಲ ಆಗ್ರಹಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ನೀರಿಲ್ಲದ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಇಂಥ ಹೇಳಿಕೆ ನೀಡಿರುವುದು ಸರಿಯಲ್ಲ. ಚುನಾವಣೆ ಸ್ಟಂಟ್ಗಾಗಿ ಮುಖ್ಯಮಂತ್ರಿ ಇಂಥ ಹೇಳಿಕೆ ನೀಡಿದ್ದರೆ ಕೂಡಲೇ ಅವರು ತಮ್ಮ ಹೇಳಿಕೆ ವಾಪಸ್ ಪಡೆದು, ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 15 ದಿನಗಳ ಒಳಗಾಗಿಯೇ ಮಹದಾಯಿ ನೀರು ಹರಿಸುವುದಾಗಿ ಹೇಳಿಕೆ ನೀಡಿದ್ದ ಯಡಿಯೂರಪ್ಪ ಅವರು, ಐತೀರ್ಪು ಅನುಷ್ಠಾನಕ್ಕೆ ಮುಂದಾಗದೆ ಕೇವಲ ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರೆ. ನೀರಿನ ವಿಷಯದಲ್ಲಿಕೇವಲ ಭಾಷಣಗಳಿಂದ ಜನರನ್ನು ಖುಷಿಯಾಗಿಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, 15 ದಿನದಲ್ಲಿನೀರು ನೀರು ತರುವ ಬಗ್ಗೆ ಮಾತನಾಡುವವರು ಬಾಟಲಿಯಲ್ಲಿತರುತ್ತಾರ ಎಂದು ಖಾರವಾಗಿ ಪ್ರಶ್ನಿಸಿದರು.
ಹಸಿವಿನ ವಿಚಾರದಲ್ಲಿನಮ್ಮ ದೇಶವು ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾ ಅಷ್ಟೇ ಅಲ್ಲ, ಆಫ್ರಿಕನ್ ದೇಶಗಳಿಗಿಂತಲೂ ಹಿಂದಿದೆ. 127 ದೇಶಗಳಲ್ಲಿಭಾರತವು 102 ಸ್ಥಾನದಲ್ಲಿದೆ. ಹಸಿವು ಮುಕ್ತ ಭಾರತಕ್ಕಾಗಿ ಮೋದಿ ಸರಕಾರ ಕರ್ನಾಟಕ ಮಾದರಿ ಅನುಸರಿಸಿ, ಜ.26 ರೊಳಗೆ ದೇಶಾದ್ಯಂತ ಜಾರಿಗೊಳಿಸಬೇಕು. ಹಸಿವು ಮುಕ್ತ ರಾಜ್ಯಕ್ಕಾಗಿ ಈ ಹಿಂದೆ ಕಾಂಗ್ರೆಸ್ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಜಿಲ್ಲೆಯಲ್ಲೂಸಹ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯ, ಇಂದಿರಾ ಕ್ಯಾಂಟಿನ್ನಿಂದ ಸಾಕಷ್ಟು ಬಡ ಜನರಿಗೆ ಹಸಿವು ಮುಕ್ತ ಮಾಡಲು ಸಾಧ್ಯವಾಗಿದೆ ಎಂದರು.
ಜಿಪಂ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ನಗರಸಭೆ ಮಾಜಿ ಸದಸ್ಯ ಅನಿಲ ಗರಗ ಇದ್ದರು.
ಉದ್ಯೋಗ ಕಡಿತ ,ಕೇಂದ್ರ ಚಿಂತನೆ ನಡೆಸಲಿ :
ಪ್ರಧಾನಿ ಮೋದಿ ಅವರು ಚುನಾವಣೆ ಪ್ರಚಾರದ ಸಂದರ್ಭದಲ್ಲಿ2 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಉದ್ಯೋಗ ಸೃಷ್ಟಿ ಇರಲಿ, ಉದ್ಯೋಗ ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ಸಾಕಷ್ಟು ಆಟೋಮೊಬೈಲ್ಗಳು ಕಂಪನಿಗಳು ಅವನತಿಯತ್ತ ಸಾಗುತ್ತಿವೆ. ಹಲವಾರು ದೊಡ್ಡ ದೊಡ್ಡ ಕಂಪನಿಗಳು ಸಹ ಸಾವಿರಾರು ಉದ್ಯೋಗಗಳನ್ನು ಕಡಿತ ಮಾಡುತ್ತಿವೆ. ಇನ್ನಾದರೂ ಕೇಂದ್ರ ಸರಕಾರ ಉದ್ಯೋಗ ಕಲ್ಪಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದು ಶಾಸಕ ಪಾಟೀಲ ಆಗ್ರಹಿಸಿದರು.