ಆ್ಯಪ್ನಗರ

ಅರಿವಿನ ಸಂಕೇತ ಜ್ಞಾನ ಕಾರ್ತಿಕೋತ್ಸವ

ಗದಗ: ಬಹಿರಂಗದ ಕತ್ತಲೆ ಕಳೆಯುವ ದೀಪ ಕೇವಲ ಸಾಂಕೇತಿಕವಾಗಿದೆ. ಆದರೆ ಅಂತರಂಗದ ಕತ್ತಲೆ ಕಳೆದು ಅಂತರ್ಯದ ಬೆಳಕನ್ನು ಅರಿಯುವ ಮೂಲಕ ನನ್ನನ್ನು ನಾನು ಅರಿಯುವುದು ಕಾರ್ತಿಕೋತ್ಸವದ ಉದ್ದೇಶ. ಅದು ಅರಿವಿನ ಸಂಕೇತದ ಜ್ಞಾನ ಕಾರ್ತಿಕೋತ್ಸವವಾಗಿದೆ ಎಂದು ಪ್ರೊ.ಅಕ್ಕಮಹಾದೇವಿ ಹಿರೇಮಠ ಅಭಿಪ್ರಾಯಪಟ್ಟರು.

Vijaya Karnataka 29 Nov 2019, 5:00 am
ಗದಗ: ಬಹಿರಂಗದ ಕತ್ತಲೆ ಕಳೆಯುವ ದೀಪ ಕೇವಲ ಸಾಂಕೇತಿಕವಾಗಿದೆ. ಆದರೆ ಅಂತರಂಗದ ಕತ್ತಲೆ ಕಳೆದು ಅಂತರ್ಯದ ಬೆಳಕನ್ನು ಅರಿಯುವ ಮೂಲಕ ನನ್ನನ್ನು ನಾನು ಅರಿಯುವುದು ಕಾರ್ತಿಕೋತ್ಸವದ ಉದ್ದೇಶ. ಅದು ಅರಿವಿನ ಸಂಕೇತದ ಜ್ಞಾನ ಕಾರ್ತಿಕೋತ್ಸವವಾಗಿದೆ ಎಂದು ಪ್ರೊ.ಅಕ್ಕಮಹಾದೇವಿ ಹಿರೇಮಠ ಅಭಿಪ್ರಾಯಪಟ್ಟರು.
Vijaya Karnataka Web cognitive signal knowledge kartikotsava
ಅರಿವಿನ ಸಂಕೇತ ಜ್ಞಾನ ಕಾರ್ತಿಕೋತ್ಸವ


ಜಗದ್ಗುರು ಪಂಚಾಚಾರ್ಯ ಅಮೃತವಾಹಿನಿ ಟ್ರಸ್ಟ್‌ನಿಂದ ಆಯೋಜಿಸಿದ್ದ ಅಮೃತವಾಹಿನಿ-70ರ ಕಾರ್ಯಕ್ರಮಲ್ಲಿಜ್ಞಾನ ಕಾರ್ತಿಕೋತ್ಸವ ಎಂಬ ವಿಷಯದ ಮೇಲೆ ಅವರು ಮಾತನಾಡಿದರು.

ಅಶಾಂತಿ, ಅನ್ಯಾಯ, ಅಜ್ಞಾನ ಜತೆಗೆ ಅರಿಷಡ್‌ ವರ್ಗಗಳೆಂಬ ಅನಿಷ್ಠ ಕತ್ತಲೆಯನ್ನು ಜ್ಞಾನದ ಬೆಳಕಿನಿಂದ ಹೋಗಲಾಡಿಸಿ ಅಲ್ಲಿಶಾಂತಿ, ನ್ಯಾಯ, ಸುಖ, ನೆಮ್ಮದಿ, ಸಮಾನತೆ ಬೆಳಗಿಸುವುದರ ಸಂಕೇತವಾಗಿ ದೀಪ ಹಚ್ಚುವ ಕಾರ್ತಿಕೋತ್ಸವ ಆಚರಿಸುತ್ತೇವೆ. ಅದರ ನಿಮಿತ್ತವಾಗಿ ಪೂಜ್ಯರ, ವಿದ್ವಾಂಸರ ಉಪದೇಶಾಮೃತಗಳನ್ನು ಏರ್ಪಡಿಸಿ ಅವರಿಂದ ಜ್ಞಾನದ ಜ್ಯೋತಿ ಬೆಳಗಿಸಿ ಅವರ ಹಿತನುಡಿಗಳನ್ನು ನಮ್ಮ ಜೀವನದಲ್ಲಿಅಳವಡಿಸಿಕೊಂಡು ಅರವಿನಿಂದ ನಾವು ಅಭಿವೃದ್ಧಿ ಹೊಂದಬಹುದಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಹೂಲಿ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೆ ಜ್ಞಾನದ ಅವಶ್ಯಕತೆ ಇದೆ. ಅದು ಗುರು ಸಾನ್ನಿಧ್ಯದಿಂದ, ಗುರುಮುಖೇನ ಸಿಗುವುದು. ಮೀನಿಗೆ ನೀರಿನ ಅವಶ್ಯಕತೆ ಹೇಗೂ ಹಾಗೆ ಮನುಷ್ಯನಿಗೆ ಜ್ಞಾನದ ಅವಶ್ಯ. ಜ್ಞಾನ ಅಂದರೆ ಕೇವಲ ಅಕ್ಷರ ಜ್ಞಾನವಲ್ಲ. ನಮ್ಮನ್ನು ನಾವು ಅರಿಯುವ, ಅಂತರಂಗವನ್ನು ತಿಳಿದುಕೊಳ್ಳುವ ಜ್ಞಾನ. ಅಂತರಂಗದ ಕತ್ತಲೆ ಓಡಿಸಿ, ಬೆಳಕು ಚಲ್ಲುವುದು ಜ್ಞಾನ. ಅದರ ಸಂಕೇತವಾಗಿರುವ ಕಾರ್ತಿಕ ಮಾಸ ದೀಪಗಳ ಮಾಸವಾಗಿದೆ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಮಾಡಿ ಡಾಕ್ಟರೇಟ್‌ ಪದವಿ ಪಡೆದ ಡಾ.ಆನಂದಸಾ ಹಬೀಬ ಅವರನ್ನು ಸನ್ಮಾನಿಸಲಾಯಿತು.

ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ನೃತ್ಯ ಸಿರಿ ಡ್ಯಾನ್ಸ್‌ ಅಕಾಡೆಮಿಯ ರಶ್ಮಿ ಅರಸಿದ್ದಿ ಮತ್ತು ಸಂಗಡಿಗರು ಹಾಗೂ ಮಕ್ಕಳ ಭರತನಾಟ್ಯ ನೆರೆದವರ ಚಪ್ಪಾಳಿ ಗಿಟ್ಟಿಸಿತು.

ಸಿದ್ದವೀರಸ್ವಾಮಿ ವೇದಘೋಷ ಮಾಡಿದರು. ನಾಗರತ್ನ ಹುಬಳಿಮಠ ಸಂಗಡಿಗರು ಪ್ರಾರ್ಥಿಸಿದರು. ಅಧ್ಯಕ್ಷ ಮಲ್ಲಿಕಾರ್ಜುನ ಶಿಗ್ಲಿಸ್ವಾಗತಿಸಿದರು. ಉಮಾಪತಿ ಭೂಸನೂರಮಠ ನಿರೂಪಿಸಿದರು.

ಚಂದ್ರು ಬಾಳಿಹಳ್ಳಿಮಠ, ವಿನಾಯಕ ಅಬ್ಬಿಗೇರಿ, ಸೋಮಣ್ಣ ಮಲ್ಲಾಡದ, ಅನಿಲ ಅಬ್ಬಿಗೇರಿ, ವಿಜಯಕುಮಾರ ಹಿರೇಮಠ, ಪ್ರಕಾಶ ಬೇಲಿ, ಶರಣಯ್ಯ ಜುಕ್ತಿಮಠ, ವಿ. ಎಲ್‌. ಪಾಟೀಲ, ಡಾ. ಜಿ. ಬಿ. ಹಿರೇಮಠ, ವೀರಣ್ಣ ಧನ್ನೂರ ಹಿರೇಮಠ, ಅನ್ನಪೂರ್ಣ ಮಾಳೆಕೊಪ್ಪಮಠ, ನಂದಾ ಬಾಳಿಹಳ್ಳಿಮಠ, ಸುಶೀಲಾ ಕಟ್ಟಿಮನಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ