ಆ್ಯಪ್ನಗರ

ರಂಗು ರಂಗಿನ ಹೋಳಿ

ಗಜೇಂದ್ರಗಡ : ಪಟ್ಟಣದಲ್ಲಿ ಬಿಸಿಲಿನ ಪ್ರಖರತೆ, ಬರ ಜತೆಗೆ ನೀರು ಅಭಾವ ಮಧ್ಯೆ ಶುಕ್ರವಾರ ಹೋಳಿ ಹಬ್ಬ ಪ್ರಯುಕ್ತ ಕಾಮಣ್ಣ ಸುಟ್ಟು ಪರಸ್ಪರ ಬಣ್ಣ ಎರಚಿ ಸೌಹಾರ್ದದಿಂದ ಹೋಳಿ ಆಚರಿಸಲಾಯಿತು.

Vijaya Karnataka 23 Mar 2019, 5:00 am
ಗಜೇಂದ್ರಗಡ : ಪಟ್ಟಣದಲ್ಲಿ ಬಿಸಿಲಿನ ಪ್ರಖರತೆ, ಬರ ಜತೆಗೆ ನೀರು ಅಭಾವ ಮಧ್ಯೆ ಶುಕ್ರವಾರ ಹೋಳಿ ಹಬ್ಬ ಪ್ರಯುಕ್ತ ಕಾಮಣ್ಣ ಸುಟ್ಟು ಪರಸ್ಪರ ಬಣ್ಣ ಎರಚಿ ಸೌಹಾರ್ದದಿಂದ ಹೋಳಿ ಆಚರಿಸಲಾಯಿತು.
Vijaya Karnataka Web GDG-22GJD1A

ಗಜೇಂದ್ರಗಡದಲ್ಲಿ ಶುಕ್ರವಾರ ಪರಸ್ಪರ ಬಣ್ಣ ಎರಚಿ ಸೌಹಾರ್ದದಿಂದ ಬಣ್ಣದಾಟ ಆಡಿದರು.


ಬೆಳಗ್ಗೆ ನಾನಾ ಬಡಾವಣೆಯಲ್ಲಿ ಸಾರ್ವಜನಿಕ ಪ್ರತಿಷ್ಠಾಪಿಸಿದ ರತಿ, ಕಾಮಣ್ಣರ ಪೂಜೆ ನೆರವೇರಿಸಿ, ಕಾಮದಹನ ಮಾಡಿದರು. ಯುವಕರು ಹಲಿಗೆ ಬಾರಿಸುತ್ತ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಹೆಚ್ಚಾಗಿ ನೇಕಾರ ಕುಟುಂಬದ ಮಹಿಳೆಯರು, ಮಕ್ಕಳು ಹಿರಿಯರು ಸೇರಿ ಹರ್ಷದಿಂದ ಓಕ ಳಿಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಓಣಿಯಲ್ಲಿ ಪಾರಂಪರಿಕವಾಗಿ ಪ್ರತಿಸ್ಠಾಪಿತ ಕಾಮಣ್ಣನ ಮೆರವಣಿಗೆ ನಡೆಯಿತು.

ಹೋಳಿ ಹಬ್ಬ ಆಚರಿಸದ ಗ್ರಾಮಸ್ಥರು:

ಸಮೀಪದ ಸುಕ್ಷೇತ್ರ ಕಾಲಕಾಲೇಶ್ವರ, ಬೈರಾಪುರ, ರಾಜೂರ, ಬೈರಾಪುರ ತಾಂಡಾ, ಲಕ್ಕಲಕಟ್ಟಿ, ದಿಂಡೂರ, ಗೋಗಾರಿ, ನಾಗೇಂದ್ರಗಡ, ಮುಶಿಗೇರಿ ಗ್ರಾಮಸ್ಥರು ಹೊಳಿ ಹಬ್ಬ ಆಚರಿಸಲಿಲ್ಲ.

ಆಚರಿಸಿದರೆ ಗ್ರಾಮಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ನಂಬಿಕೆಯಿಂದ ಇಂದಿಗೂ ಹೋಳಿ ಹಬ್ಬ ಆಚರಿಸದೇ ದೂರ ಉಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ