ಆ್ಯಪ್ನಗರ

ಬೀದಿಗೆ ಬಂತು ನೇಕಾರರ ಬದುಕು

​ಗದಗ: ಕೊರೊನಾ ನೇಕಾರರ ಬದುಕನ್ನು ಬಲಿ ಪಡೆಯುತ್ತಿದೆ. ಲಾಕ್‌ಡೌನ್‌ ಆದಾಗಿನಿಂದ ನೇಕಾರರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಉತ್ತರ ಕರ್ನಾಟಕ ಭಾಗದಲ್ಲಿಬೆಳಗಾವಿ, ಬಾಗಲಕೋಟ ಹೊರತುಪಡಿಸಿ ಅತಿ ಹೆಚ್ಚು ನೇಕಾರರು ಗದಗ ಜಿಲ್ಲೆಯಲ್ಲಿದ್ದಾರೆ. ಸುಮಾರು 6 ಸಾವಿರ ವಿದ್ಯುತ್‌ ಮಗ್ಗಗಳು, 1 ಸಾವಿರಕ್ಕೂ

Vijaya Karnataka 25 Apr 2020, 5:00 am
ಸಲೀಮ್‌ ಬಳಬಟ್ಟಿ
Vijaya Karnataka Web 24SALIM1_25
ಬೆಟಗೇರಿಯಲ್ಲಿಸದ್ದು ನಿಲ್ಲಿಸಿದ ವಿದ್ಯುತ್‌ ಮಗ್ಗಗಳು

ಗದಗ: ಕೊರೊನಾ ನೇಕಾರರ ಬದುಕನ್ನು ಬಲಿ ಪಡೆಯುತ್ತಿದೆ. ಲಾಕ್‌ಡೌನ್‌ ಆದಾಗಿನಿಂದ ನೇಕಾರರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಉತ್ತರ ಕರ್ನಾಟಕ ಭಾಗದಲ್ಲಿಬೆಳಗಾವಿ, ಬಾಗಲಕೋಟ ಹೊರತುಪಡಿಸಿ ಅತಿ ಹೆಚ್ಚು ನೇಕಾರರು ಗದಗ ಜಿಲ್ಲೆಯಲ್ಲಿದ್ದಾರೆ. ಸುಮಾರು 6 ಸಾವಿರ ವಿದ್ಯುತ್‌ ಮಗ್ಗಗಳು, 1 ಸಾವಿರಕ್ಕೂ ಹೆಚ್ಚು ಕೈಮಗ್ಗಗಳು ಕಾರ್ಯ ನಿರ್ವಹಿಸುತ್ತಿವೆ. 7 ಸಾವಿರಕ್ಕೂ ಹೆಚ್ಚು ಜನ ನೇಕಾರಿಕೆಯಲ್ಲಿತೊಡಗಿದ್ದಾರೆ. 20 ಸಾವಿರ ಜನ ನೇಕಾರಿಕೆ ಆಶ್ರಯಿಸಿದ್ದಾರೆ.

ಲಾಕ್‌ಡೌನ್‌ನಿಂದ ಬಟ್ಟೆ ಅಂಗಡಿಗಳು ಬಂದ್‌ ಆಗಿದ್ದರಿಂದ ಕೈಮಗ್ಗ ಉತ್ಪನ್ನಗಳಿಗೆ ಬೇಡಿಕೆ ಇಲ್ಲದ ಕಾರಣ ಮಗ್ಗಗಳ ಮಾಲೀಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಎಲ್ಲಿದೆ ವಿನಾಯಿತಿ?
ಲಾಕ್‌ಡೌನ್‌ ನಡುವೆಯೂ ಸರಕಾರ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಷರತ್ತುಬದ್ಧ ಅನುಮತಿ ನೀಡಿವೆ. ಕೈಮಗ್ಗ ಮತ್ತು ವಿದ್ಯುತ್‌ ಮಗ್ಗಗಳಲ್ಲಿಕಾರ್ಮಿಕರು ಸಹಜವಾಗಿಯೇ 5 ರಿಂದ 6 ಅಡಿ ಅಂತರದಲ್ಲಿಕಾರ್ಯ ನಿರ್ವಹಿಸುತ್ತಾರೆ. ಹೀಗಾಗಿದ್ದರೂ ಕೈಮಗ್ಗ, ವಿದ್ಯುತ್‌ ಮಗ್ಗ ಆರಂಭಕ್ಕೆ ಪೊಲೀಸರು ಅಡೆತಡೆ ಮಾಡುತ್ತಿದ್ದಾರೆ.

ಉದ್ಯೋಗ ಹಾಳಾಗಿದೆ :
ಗದಗ ಜಿಲ್ಲೆಯ ನೇಕಾರರು ಹೆಚ್ಚಾಗಿ ಇಲಕಲ್‌ ಸೀರೆ, ರೇಷ್ಮೆ ಸೀರೆ ನೇಯುತ್ತಾರೆ. ಇಲ್ಲಿನ ಉತ್ಪನ್ನಗಳು ಮಹಾರಾಷ್ಟ್ರದ ಸೊಲ್ಲಾಪುರ, ಪುಣೆ, ಕೊಲ್ಲಾಪುರಕ್ಕೆ ಹೋಗುತ್ತವೆ. ಮದುವೆ ಸೀಸನ್‌ನಲ್ಲಿಇಲ್ಲಿನ ಉತ್ಪನ್ನಗಳಿಗೆ ಬೇಡಿಕೆ ದುಪ್ಪಟ್ಟಾಗುತ್ತದೆ.

ಅವಕಾಶ ಕೊಡಿ :
ಲಾಕ್‌ಡೌನ್‌ ಮಧ್ಯೆಯೂ ಬೆಳಗ್ಗೆ 6 ರಿಂದ 10 ಗಂಟೆ ಕೈಮಗ್ಗ, ವಿದ್ಯುತ್‌ ಮಗ್ಗಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಕೆಲವೇ ದಿನಗಳಲ್ಲಿಲಾಕ್‌ಡೌನ್‌ ಮತ್ತಷ್ಟು ಬಿಗಿಗೊಳಿಸಿದ್ದರಿಂದ ನೇಕಾರಿಗೆ ಸಂಪೂರ್ಣ ಬಂದ್‌ ಆಗಿದೆ. ಇದರಿಂದ ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ. ಜಿಲ್ಲಾಧಿಕಾರಿಗಳು ನೇಕಾರಿಕೆ ನಡೆಸಲು ಅವಕಾಶ ಕೊಡಬೇಕು ಎಂಬುದು ನೇಕಾರರ ಆಗ್ರಹ.

2 ಸಾವಿರ ಪರಿಹಾರ ಕೊಡಿ
ಕಟ್ಟಡ ಕಾರ್ಮಿಕರಿಗೆ ಪ್ರತಿ ತಿಂಗಳು 2 ಸಾವಿರ ರೂ. ಪರಿಹಾರ ಧನ ಕೊಡುತ್ತಿದೆ. ಅದೇ ರೀತಿ ಸಂಕಷ್ಟದಲ್ಲಿರುವ ನೇಕಾರರಿಗೂ ಪ್ರತಿ ತಿಂಗಳು 2 ಸಾವಿರ ರೂ. ಸಹಾಯ ಧನ ಕೊಡಬೇಕು ಎಂದು ಜಿಲ್ಲಾನೇಕಾರರ ಸಂಘದ ಅಧ್ಯಕ್ಷ ಅಶೋಕ ಬಣ್ಣದ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ