ಆ್ಯಪ್ನಗರ

ನಿಡಗುಂದಿಕೊಪ್ಪದಲ್ಲಿ 10ರಂದು ಪುಣ್ಯಸ್ಮರಣೋತ್ಸವ

ನರೇಗಲ್ಲ: ಸಮೀಪದ ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರ ಮಠದ ಲಿಂ. ಚನ್ನಬಸವ ಶಿವಯೋಗಿ ಮಹಾಸ್ವಾಮಿಗಳ 36ನೇ ಪುಣ್ಯ ಸ್ಮರಣೋತ್ಸವ ಹಾಗೂ ಲಿಂ. ಶ್ರೀ ಶಿವಬಸವ ಮಹಾಸ್ವಾಮಿಗಳ 4ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಜ.10ರಂದು ಜರುಗಲಿದೆ.

Vijaya Karnataka 10 Jan 2020, 5:00 am
ನರೇಗಲ್ಲ: ಸಮೀಪದ ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರ ಮಠದ ಲಿಂ. ಚನ್ನಬಸವ ಶಿವಯೋಗಿ ಮಹಾಸ್ವಾಮಿಗಳ 36ನೇ ಪುಣ್ಯ ಸ್ಮರಣೋತ್ಸವ ಹಾಗೂ ಲಿಂ. ಶ್ರೀ ಶಿವಬಸವ ಮಹಾಸ್ವಾಮಿಗಳ 4ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಜ.10ರಂದು ಜರುಗಲಿದೆ.
Vijaya Karnataka Web commemoration ceremony on the 10th of nidagundikoppa
ನಿಡಗುಂದಿಕೊಪ್ಪದಲ್ಲಿ 10ರಂದು ಪುಣ್ಯಸ್ಮರಣೋತ್ಸವ


ಬೆಳಗ್ಗೆ 6 ಗಂಟೆಗೆ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ ಪೂಜೆ, ಪೂರ್ಣಕುಂಭ ಮೆರವಣಿಗೆ ಹಾಗೂ ಮಧ್ಯಾನ್ನ 12 ಗಂಟೆಗೆ ಸಂಸ್ಮರಣಾ ಧಾರ್ಮಿಕ ಸಭೆ ನಡೆಯಲಿದೆ.

ಹಾಲಕೆರೆ ಸಂಸ್ಥಾನಮಠದ ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರ ಮಠದ ನಿಯೋಜಿತ ಉತ್ತರಾಧಿಕಾರಿ ಸಿದ್ದರಾಮ ದೇವರ ನೇತೃತ್ವದಲ್ಲಿಯಲಬುರ್ಗಾ ಶ್ರೀಧರ ಮುರಡಿಮಠದ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ದರೂರಿನ ಕೊಟ್ಟೂರು ದೇಶಿಕರು, ಕುರಗೋಡದ ಪರ್ವತ ದೇವರು, ಗದಗ ಚಂದ್ರಶೇಖರ ದೇವರು, ಬೂದಗುಂಪದ ವಿಜಯ ಪ್ರಭು ದೇವರು ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಜಿಪಂ ಉಪಾಧ್ಯಕ್ಷೆ ಮಲ್ಲಮ್ಮ ಬಿಚ್ಚೂರ, ಬಸವರಾಜ ಉಳ್ಳಗಡ್ಡಿ, ಬಸವರಾಜ ಬಿಂಗಿ, ಮಂಜುನಾಥ ಬೇಲೇರಿ ಪಾಲ್ಗೊಳ್ಳುವರು. ದ್ಯಾಮಣ್ಣ ಮಾಸ್ತರ ಬಡಿಗೇರ, ದೇವಪ್ಪ ಮಾಸ್ತರ ಬಳೂಟಗಿ ಹಾಗೂ ಕಳಕಮಲ್ಲಯ್ಯ ಅಣ್ಣಿಗೇರಿ ಸಂಗೀತಸೇವೆ ಸಲ್ಲಿಸುವರು. ನಂತರ ಅನ್ನಸಂತರ್ಪಣೆ ಜರುಗಲಿದೆ ಎಂದು ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರ ಮಠದ ಭಕ್ತಮಂಡಳಿ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ