ಆ್ಯಪ್ನಗರ

ವಿದ್ಯಾರ್ಥಿಗಳಿಗೆ ನಾನಾ ಸ್ಪರ್ಧೆ

ಗದಗ: ಬೆಟಗೇರಿಯಲ್ಲಿಮಹತ್ಮಾ ಗಾಂಧೀಜಿ, ಲಾಲ ಬಹದ್ದೂರ ಶಾಸ್ತ್ರೀಜಿ ಜಯಂತಿ ಹಾಗೂ ಕರ್ನಾಟಕ ರಾಜ್ಯೋತ್ಸವವನ್ನು ಶಿಕ್ಷಣ ಇಲಾಖೆ, ಸಾರ್ವಜನಿಕರು ಹಾಗೂ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿಆಚರಿಸಲಾಗುತ್ತಿದೆ ಎಂದು ಬೆಟಗೇರಿ ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಗಣೇಶಸಿಂಗ್‌ ಬ್ಯಾಳಿ ಹೇಳಿದರು.

Vijaya Karnataka 12 Sep 2019, 5:00 am
ಗದಗ: ಬೆಟಗೇರಿಯಲ್ಲಿಮಹತ್ಮಾ ಗಾಂಧೀಜಿ, ಲಾಲ ಬಹದ್ದೂರ ಶಾಸ್ತ್ರೀಜಿ ಜಯಂತಿ ಹಾಗೂ ಕರ್ನಾಟಕ ರಾಜ್ಯೋತ್ಸವವನ್ನು ಶಿಕ್ಷಣ ಇಲಾಖೆ, ಸಾರ್ವಜನಿಕರು ಹಾಗೂ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿಆಚರಿಸಲಾಗುತ್ತಿದೆ ಎಂದು ಬೆಟಗೇರಿ ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಗಣೇಶಸಿಂಗ್‌ ಬ್ಯಾಳಿ ಹೇಳಿದರು.
Vijaya Karnataka Web competition for students
ವಿದ್ಯಾರ್ಥಿಗಳಿಗೆ ನಾನಾ ಸ್ಪರ್ಧೆ


ಬುಧವಾರ ಬೆಟಗೇರಿಯ ಬಾಸೆಲ್‌ ಮಿಷನ್‌ ಪ್ರೌಢಶಾಲೆಯಲ್ಲಿಸಾರ್ವಜನಿಕರು ಹಾಗೂ ಇಲ್ಲಿಯ ಎಲ್ಲಶಾಲಾ ಕಾಲೇಜುಗಳ ಮುಖ್ಯಸ್ಥರ ಸಭೆಯಲ್ಲಿಮಾತನಾಡಿ, ಗಾಂಧೀಜಿ, ಶಾಸ್ತ್ರೀಜಿ, ಹಾಗೂ ಕರ್ನಾಟಕ ರಾಜ್ಯೋತ್ಸವ ಕುರಿತು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿವಿಧ ಸ್ಪರ್ಧೆಗಳನ್ನು ಸೆ.18 ಹಾಗೂ 19 ರಂದು ಹಮ್ಮಿಕೊಳ್ಳಲಾಗಿದೆ. ಅ.2 ರಂದು ಟೆಂಗಿನಕಾಯಿ ಬಜಾರದಲ್ಲಿಪ್ರಾರ್ಥನಾ ಸಭೆ ಹಾಗೂ ನ.1 ರಂದು ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಸಂಜೆ ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.

ಬಾಸೆಲ್‌ ಮಿಷನ್‌ ಪ್ರೌಢಶಾಲೆ ಮುಖ್ಯಾಧ್ಯಾಪಕ ನಂದಿಕೇಶ್ವರ ಅಧ್ಯಕ್ಷತೆವಹಿಸಿ, ಬೆಟಗೇರಿಯಲ್ಲಿಈ ಸಮಿತಿ ರಚನಾತ್ಮಕ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿರುವುದು ಶ್ಲಾಘನೀಯವಾಗಿದೆ ಎಂದರು.

ಬಿ.ಬಿ. ಗಿಡ್ನಂದಿ, ಯಲ್ಲಪ್ಪ ಕಾಂಬಳೇಕರ, ಪ್ರೇಮನಾಥ ಬರದ್ವಾಡ, ಕೃಷ್ಣಾ ರಾಯಬಾಗಿ, ಅಶೋಕ ಅಂಗಡಿ, ಈರಣ್ಣ ಮುಳ್ಳಾಳ, ಭೋಜಪ್ಪ ಹೆಗ್ಗಡಿ, ಬಿ. ತಾರಾಸಿಂಗ್‌, ಎಸ್‌.ವಿ. ಸುಲಾಖೆ, ಬಿ.ವೈ. ಕರಬಸವಣ್ಣವರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ