ಆ್ಯಪ್ನಗರ

ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಮುಖ್ಯ

ಮುಂಡರಗಿ: ವಿದ್ಯಾರ್ಥಿಗಳು ಕ್ರೀಡಾಸಕ್ತಿ ಜತೆಗೆ ಸ್ಪರ್ಧಾ ಮನೋಭಾವ ಮತ್ತು ಕ್ರೀಡಾ ಸ್ಪೂರ್ತಿ ಹೊಂದಬೇಕು. ಸೋಲು ಗೆಲುವು ಸಹಜವಾಗಿದ್ದು ಕ್ರೀಡೆಯಲ್ಲಿಪಾಲ್ಗೊಳ್ಳುವುದು ಮುಖ್ಯ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ ಹೇಳಿದರು.

Vijaya Karnataka 11 Sep 2019, 5:00 am
ಮುಂಡರಗಿ: ವಿದ್ಯಾರ್ಥಿಗಳು ಕ್ರೀಡಾಸಕ್ತಿ ಜತೆಗೆ ಸ್ಪರ್ಧಾ ಮನೋಭಾವ ಮತ್ತು ಕ್ರೀಡಾ ಸ್ಪೂರ್ತಿ ಹೊಂದಬೇಕು. ಸೋಲು ಗೆಲುವು ಸಹಜವಾಗಿದ್ದು ಕ್ರೀಡೆಯಲ್ಲಿಪಾಲ್ಗೊಳ್ಳುವುದು ಮುಖ್ಯ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ ಹೇಳಿದರು.
Vijaya Karnataka Web competitive attitude is important in students
ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಮುಖ್ಯ


ಇಲ್ಲಿಯ ಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿಭಾಗದ ಖೋ ಖೋ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಪುರಸಭೆ ಸದಸ್ಯೆ ಕವಿತಾ ಉಳ್ಳಾಗಡ್ಡಿ ಮಾತನಾಡಿ, ಮನುಷ್ಯನ ಜೀವನದಲ್ಲಿಕ್ರೀಡೆ ಅತಿ ಮುಖ್ಯ. ಸದೃಢ ದೇಹ ಮತ್ತು ಉತ್ತಮ ಮನಸ್ಸಿಗೆ ಕ್ರೀಡೆ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿಶಿಕ್ಷಣದ ಜತೆಗೆ ಕ್ರೀಡೆಯಲ್ಲಿಹೆಚ್ಚು ಆಸಕ್ತಿ ಹೊಂದಬೇಕು ಎಂದರು.

ಎಸ್‌ಡಿಎಂಸಿ ಸದಸ್ಯ ಮಾರುತಿ ಕವಲೂರ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ರಾಮು ಭಜಂತ್ರಿ ಕ್ರೀಡಾಧ್ವಜಾರೋಹಣ ನೆರವೇರಿಸಿದರು. ಪುರಸಭೆ ಸದಸ್ಯರಾದ ಸುಮಾ ಬಳ್ಳಾರಿ, ಶಿವಪ್ಪ ಚಿಕ್ಕಣ್ಣವರ, ಪವನ ಮೇಟಿ, ಸಂತೋಷ ಹಿರೇಮನಿ, ರಾಜೇಬಕ್ಷಿ ಬೆಟಗೇರಿ, ದೈಹಿಕ ಶಿಕ್ಷಣಾಧಿಕಾರಿ ಎಸ್‌.ಎನ್‌. ಅಂಗಡಿ, ಎಸ್‌.ಡಿ.ಬಸ್ಸೇಗೌಡ್ರ, ಅಂದಪ್ಪ ಉಳ್ಳಾಗಡ್ಡಿ, ಎಲ್‌.ಎಚ್‌.ಎಣ್ಣಿ, ಎಸ್‌.ಎಫ್‌. ಹಡಪದ ಇತರರು ಉಪಸ್ಥಿತರಿದ್ದರು.ವಿಶ್ವನಾಥ ಉಳ್ಳಾಗಡ್ಡಿ ,ಮೃತ್ಯುಂಜಯ ಪೂಜಾರ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ