ಆ್ಯಪ್ನಗರ

ಜನಮನ ಸೆಳೆದ ಸಂಗೀತಳ ಸಂಗೀತ ಕಾರ್ಯಕ್ರಮ

ಗದಗ: ನಗರದ ಐಎಂಎ ಸಭಾಂಗಣದಲ್ಲಿಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿತಾಲೂಕಿನ ನಾಗಾವಿ ಗ್ರಾಮದ ಪ್ರತಿಭಾನ್ವಿತ ದೃಷ್ಟಿವಿಶೇಷ ಚೇತನ ಗಾಯಕಿ ಸಂಗೀತಾ ಭರಮಗೌಡರ ಅವರ ಹಾಡುಗಳು ಜನಮನ ಸೆಳೆದವು.

Vijaya Karnataka 14 Dec 2019, 5:00 am
ಗದಗ: ನಗರದ ಐಎಂಎ ಸಭಾಂಗಣದಲ್ಲಿಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿತಾಲೂಕಿನ ನಾಗಾವಿ ಗ್ರಾಮದ ಪ್ರತಿಭಾನ್ವಿತ ದೃಷ್ಟಿವಿಶೇಷ ಚೇತನ ಗಾಯಕಿ ಸಂಗೀತಾ ಭರಮಗೌಡರ ಅವರ ಹಾಡುಗಳು ಜನಮನ ಸೆಳೆದವು.
Vijaya Karnataka Web concerts music
ಜನಮನ ಸೆಳೆದ ಸಂಗೀತಳ ಸಂಗೀತ ಕಾರ್ಯಕ್ರಮ


ಐಎಂಎ ಪದಾಧಿಕಾರಿಗಳು ಸೇರಿದಂತೆ ಎಲ್ಲಸದಸ್ಯ ವೈದ್ಯರು ಮತ್ತು ಕುಟುಂಬ ವರ್ಗದವರು ಕಾರ್ಯಕ್ರಮದಲ್ಲಿಪಾಲ್ಗೋಂಡು ಗದಗ ಜಿಲ್ಲೆಯ ಹೆಮ್ಮೆಯ ಬಾಲಪ್ರತಿಭೆಯನ್ನು ಆತ್ಮೀಯವಾಗಿ ಸನ್ಮಾನಿಸಿ ಕಾಣಿಕೆ, ಪ್ರೋತ್ಸಾಹದ ನಗದು ಕಾಣಿಕೆ ನೀಡಿ ಅವಳಿಗೆ ಅಭಿನಂದಿಸಿದರು.

ಐಎಂಎ ಅಧ್ಯಕ್ಷೆ ಡಾ.ರಾಧಿಕಾ ಕುಲಕರ್ಣಿ ಮಾತನಾಡಿ, ರಾಜ್ಯ ಅಂತಾರಾಜ್ಯದ ಸಂಗೀತ ಪ್ರೀಯರ ಮನೆ-ಮನ ಗೆದ್ದ ಪ್ರತಿಭೆ. ಸಂಗೀತಳ ಸಂಗೀತ ಪಯಣ ಸರಿಗಮಪ 16ರ ಸಿಜನ್‌ದಲ್ಲಿಸಂಗೀತಾ ಸೆಮಿ ಫೈನಲ್‌ವರೆಗೂ ಸಾಗಿದ್ದರು ಎಂದರು.

ರಜನಿ ಜೋಶಿ, ಐಎಂಎ ಕಾರ್ಯದರ್ಶಿ ಡಾ. ಭರತಕುಮಾರ ಬಿಡಿನಹಾಳ, ಐಎಂಎ, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರ ಸಂಘದ ಪದಾಧಿಕಾರಿಗಳು, ಸರ್ವ ಸದಸ್ಯರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ