ಆ್ಯಪ್ನಗರ

ಕಾಂಕ್ರಿಟ್‌ ಪೈಪ್‌ ಅಳವಡಿಕೆ: ಸಂಚಾರ ಸುಗಮ

ನರಗುಂದ: ಭರ್ತಿಯಾಗಿ ಅಪಾಯದ ಸ್ಥಿತಿಗೆ ತಲುಪಿದ್ದ ಐತಿಹಾಸಿಕ ಪಡುವಗೊಂಡ ಕೆರೆಯಿಂದ ನೀರು ಹೊರಬಿಡಲಾಗುತ್ತಿದ್ದು, ನೀರು ಹರಿದು ಹೋಗಲು ಹರಿ ತೋಡಿದ್ದರಿಂದ ಜನರಿಗೆ ಮತ್ತು ಶೌಚಾಲಯಕ್ಕೆ ಹೋಗಲು ದಾರಿಯಿಲ್ಲದೆ ಪರದಾಡುತ್ತಿರುವುದನ್ನು ಕಂಡ ಪುರಸಭೆ ಅಧಿಕಾರಿಗಳು ಕಾಂಕ್ರಿಟ್‌ ಪೈಪ್‌ ಅಳವಡಿಸಿ ಸಂಚಾರಕ್ಕೆ ಕ್ರಮ ಕೈಗೊಂಡಿದ್ದಾರೆ.

Vijaya Karnataka 25 Sep 2019, 5:00 am
ನರಗುಂದ: ಭರ್ತಿಯಾಗಿ ಅಪಾಯದ ಸ್ಥಿತಿಗೆ ತಲುಪಿದ್ದ ಐತಿಹಾಸಿಕ ಪಡುವಗೊಂಡ ಕೆರೆಯಿಂದ ನೀರು ಹೊರಬಿಡಲಾಗುತ್ತಿದ್ದು, ನೀರು ಹರಿದು ಹೋಗಲು ಹರಿ ತೋಡಿದ್ದರಿಂದ ಜನರಿಗೆ ಮತ್ತು ಶೌಚಾಲಯಕ್ಕೆ ಹೋಗಲು ದಾರಿಯಿಲ್ಲದೆ ಪರದಾಡುತ್ತಿರುವುದನ್ನು ಕಂಡ ಪುರಸಭೆ ಅಧಿಕಾರಿಗಳು ಕಾಂಕ್ರಿಟ್‌ ಪೈಪ್‌ ಅಳವಡಿಸಿ ಸಂಚಾರಕ್ಕೆ ಕ್ರಮ ಕೈಗೊಂಡಿದ್ದಾರೆ.
Vijaya Karnataka Web 24NRD1_25
ನರಗುಂದ ಕುರಬಗೇರಿ ಓಣಿ ಶೌಚಾಲಯಕ್ಕೆ ಹೋಗುವ ದಾರಿ ಪೈಪ್‌ ಅಳವಡಿಸುತ್ತಿರುವುದು.


ಜನರಿಗೆ ತೊಂದರೆಯಾಗಿರುವ ಕುರಿತು ವಿಜಯ ಕರ್ನಾಟಕದಲ್ಲಿಮಂಗಳವಾರ 'ಭರ್ತಿಯಾದ ನೀರು ಹೊರಕ್ಕೆ' ಕುರಿತು ಸುದ್ದಿಗೆ ಸ್ಪಂದಿಸಿದ ಅಧಿಕಾರಿಗಳು ಮೂರು ಕಡೆ ಪೈಪ್‌ಗಳನ್ನು ಅಳವಡಿಸಿ ಜನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ಬೆಳಗ್ಗೆ ಪುರಸಭೆ ಅಭಿಯಂತರ ಬಿ.ಎ.ನದಾಫ್‌ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಕುರಬಗೇರಿ ಜನ ತಮ್ಮ ಅಳಲು ತೋಡಿಕೊಂಡರು. ಕೆರೆ ನೀರು ಹರಿಬಿಟ್ಟಿದ್ದು ಒಳ್ಳೆಯದು ಆದರೆ ಜೆಸಿಬಿಯಿಂದ ಹರಿ ತೋಡಿ ಹಾಗೆ ಬಿಟ್ಟರೆ ದಾಟಿ ಹೋಗುವುದು ಹೇಗೆ? ಕೆರೆ ನೀರು ಮನೆ ಸುತ್ತುವರಿದು ತೊಂದರೆಯಾಗಿದೆ ಕೂಡಲೇ ಒಂದೆ ಕಡೆ ನೀರು ಹರಿದು ಹೋಗುವಂತೆ ಕ್ರಮ ಕೈಗೊಳ್ಳಿ, ಮಹಿಳೆಯರು ಮಕ್ಕಳು ಸಂಚಾರಕ್ಕೆ ದಾರಿ ಮಾಡಿಕೊಂಡಿ ಎಂದು ಮನವಿ ಮಾಡಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ