ಆ್ಯಪ್ನಗರ

ಈರುಳ್ಳಿ ರಫ್ತು ನಿಷೇಧಕ್ಕೆ ಖಂಡನೆ

ರೋಣ : ಕೇಂದ್ರ ಸರಕಾರ ಈರುಳ್ಳಿಗೆ ರಫ್ತು ನಿಷೇಧಿಸಿರುವುದು ಸೂಕ್ತ ಕ್ರಮವಲ್ಲ. ಇದರಿಂದ ಬೆಲೆ ಇಳಿಕೆಯಾಗುವುದಿಲ್ಲ, ಬೆಳೆಗಾರರಿಗೆ ತೊಂದರೆಯಾಗುತ್ತದೆ ಎಂದು ತಾಪಂ ಸದಸ್ಯ ವಿದ್ಯಾಧರ ದೊಡ್ಡಮನಿ ಹೇಳಿದರು.

Vijaya Karnataka 2 Oct 2019, 4:31 pm
ರೋಣ : ಕೇಂದ್ರ ಸರಕಾರ ಈರುಳ್ಳಿಗೆ ರಫ್ತು ನಿಷೇಧಿಸಿರುವುದು ಸೂಕ್ತ ಕ್ರಮವಲ್ಲ. ಇದರಿಂದ ಬೆಲೆ ಇಳಿಕೆಯಾಗುವುದಿಲ್ಲ, ಬೆಳೆಗಾರರಿಗೆ ತೊಂದರೆಯಾಗುತ್ತದೆ ಎಂದು ತಾಪಂ ಸದಸ್ಯ ವಿದ್ಯಾಧರ ದೊಡ್ಡಮನಿ ಹೇಳಿದರು.
Vijaya Karnataka Web condemnation of ban on export of onions
ಈರುಳ್ಳಿ ರಫ್ತು ನಿಷೇಧಕ್ಕೆ ಖಂಡನೆ


ಈ ಕುರಿತು ಪ್ರತಿಕಾ ಪ್ರಕಟಣೆ ನೀಡಿರುವ ಅವರು, ಕೇಂದ್ರ ಸರಕಾರದ ಈ ನಿರ್ಧಾರ ರೈತರಿಗೆ ಮಾರಕವಾಗಿದೆ. ದೇಶದಲ್ಲಿಯ ಈರುಳ್ಳಿ ಬೆಳೆ ಬೆಳೆಯುವುದಕ್ಕೆ ರಾಜ್ಯ ಎರಡನೇ ಸ್ಥಾನದಲ್ಲಿದ್ದು, ಅದರಲ್ಲಿವಿಶೇಷವಾಗಿ ಉತ್ತರ ಕರ್ನಾಟಕದಲ್ಲಿಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಈಗಾಗಲೇ ರಾಜ್ಯದ ಅನೇಕ ಜಿಲ್ಲೆಗಳಲ್ಲಿಪ್ರವಾಹದಿಂದ ಈರುಳ್ಳಿ ಹಾನಿಯಾಗಿದೆ. ಸತತವಾಗಿ ಮೂರ್ನಾಲ್ಕು ವರ್ಷಗಳಿಂದ ಬರಗಾಲ ಬಿದ್ದಿರುವುದರಿಂದ ರೈತರು ಈಗಗಾಲೇ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ರೈತರು ಸಾಲ ಮುಕ್ತರಾಗಲು ಒಳ್ಳೆಯ ಅವಕಾಶ ಒದಗಿ ಬಂದಿದೆ. ಕೇಂದ್ರ ಸರಕಾರ ರೈತ ವಿರೋಧಿ ನೀತಿ ಬಿಟ್ಟು, ಕೃಷಿ ಅಭಿವೃದ್ಧಿಗೆ ಪೂರಕ ಯೋಜನೆ ರೂಪಿಸಬೇಕು. ಕೇಂದ್ರ ಸರಕಾರ ಕೈಗೊಂಡಿರುವ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ