ಆ್ಯಪ್ನಗರ

ಕಪ್ಪತ್ತಗುಡ್ಡ ನಿರ್ಧಾರ ,ಸಿಎಂಗೆ ಅಭಿನಂದನೆ

ಗದಗ :ವನ್ಯಜೀವಿ ಮಂಡಳಿ ಸಭೆಯಲ್ಲಿಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮವೆಂದು ಮುಂದುವರಿಸಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಜ.ಡಾ. ತೋಂಟದ ಸಿದ್ಧರಾಮ ಶ್ರೀಗಳು ಅಭಿನಂದನೆ ಸಲ್ಲಿಸಿದ್ದಾರೆ.

Vijaya Karnataka 27 Sep 2019, 5:00 am
ಗದಗ: ವನ್ಯಜೀವಿ ಮಂಡಳಿ ಸಭೆಯಲ್ಲಿಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮವೆಂದು ಮುಂದುವರಿಸಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಜ.ಡಾ. ತೋಂಟದ ಸಿದ್ಧರಾಮ ಶ್ರೀಗಳು ಅಭಿನಂದನೆ ಸಲ್ಲಿಸಿದ್ದಾರೆ.
Vijaya Karnataka Web congratulations to the kapappadgudda decision cm
ಕಪ್ಪತ್ತಗುಡ್ಡ ನಿರ್ಧಾರ ,ಸಿಎಂಗೆ ಅಭಿನಂದನೆ


ಈ ಕುರಿತು ಪ್ರಕಟಣೆ ನೀಡಿರುವ ಅವರು,ಕಪ್ಪತ್ತಗುಡ್ಡದಲ್ಲಿಗಣಿಗಾರಿಕೆಗೆ ಅವಕಾಶ ಕೊಡಬಾರದೆಂದು ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿಬೃಹತ್‌ ಹೋರಾಟ ನಡೆದಿತ್ತು. ಅಂದರಿಂದ ದಕ್ಷಿಣ ಕೋರಿಯಾದ ಪೋಸ್ಕೋ ಕಂಪನಿ ಹಿಂದಕ್ಕೆ ಸರಿಯಿತು. ಸರಕಾರ ಈ ಕಪ್ಪತ್ತಗುಡ್ಡವನ್ನು ವನ್ಯಧಾಮ ಮಾಡಲು ಮುಂದಾದಾಗ ಬಲ್ದೋಟಾ ಮುಂತಾದ ಗಣಿಕಂಪನಿಗಳು ಗಣಿಗಾರಿಕೆ ಆಸೆಯಿಂದ ಅಡ್ಡಗಾಲು ಹಾಕಿದರು. ಲಿಂ. ತೋಂಟದ ಶ್ರೀಗಳು, ಪರಿಸರವಾದಿಗಳು, ಎಲ್ಲಪಕ್ಷದ ನಾಯಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತೆ ಹೋರಾಟ ಪ್ರಾರಂಭಿಸಿದಾಗ ಸರಕಾರ 80 ಸಾವಿರ ಎಕರೆ ಪ್ರದೇಶದಲ್ಲಿ50 ಸಾವಿರ ಎಕರೆ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಿತು. ಈ ಆದೇಶವನ್ನು ಗಣಿಗಾರಿಕೆ ಮಾಡುವ ಗಣಿ ಕಂಪನಿಗಳು ನ್ಯಾಯಾಲಯದಲ್ಲಿವಿರೋಧಿಸಿದರೂ ಸಫಲವಾಗಲಿಲ್ಲ.

ಹಿಂದಿನ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಎಚ್‌.ಡಿ. ಕುಮಾರಸ್ವಾಮಿ ಅವರು ಹಾಗೂ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರು 9-12019 ರಂದು ನಡೆದ 11 ನೇ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿಈ ಕಪ್ಪತ್ತಗುಡ್ಡದ ಬಗ್ಗೆ ವಿಶೇಷ ಕಾಳಜಿ ವಹಿಸಿ ಇದನ್ನು ವನ್ಯಧಾಮ ಎಂದು ತೀರ್ಮಾನಿಸಿದರು.

ಅದೇ ರೀತಿ ಇಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿಈ ವಿಷಯ ಪ್ರಸ್ತಾಪಕ್ಕೆ ಬಂದಾಗ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಈಗಾಗಲೇ ಈ ವಿಷಯ ಮುಗಿದ ಅಧ್ಯಾಯ. ವನ್ಯಧಾಮ ಅಂತಾ ಗೆಜೆಟ್‌ ಸಹ ಆಗಿದ್ದು ಈ ವಿಷಯದ ಚರ್ಚೆಗೆ ಅವಕಾಶ ಕೊಡದೆ ಹಿಂದಿನ ಸರಕಾರದ ವನ್ಯಜೀವಿ ಮಂಡಳಿ ಠರಾವ್‌ ದೃಢೀಕರಿಸಿದರು.

ಕಾರಣ ಕಪ್ಪತ್ತಗುಡ್ಡದ ರಕ್ಷಣೆಗಾಗಿ ಮಠಾಧೀಶರ, ಪಕ್ಷಾತೀತ ಮುಖಂಡರ, ಪರಿಸರವಾದಿಗಳ, ಶಾಲಾ-ಕಾಲೇಜು ವಿದ್ಯಾರ್ಥಿಗಳ ನಡೆಸಿದ ಹೋರಾಟಕ್ಕೆ ಬೆಲೆ ನೀಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಜಿಲ್ಲೆಯ ಎಲ್ಲನಾಯಕರನ್ನು ಶ್ರೀಗಳು ಅಭಿನಂದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ