ಆ್ಯಪ್ನಗರ

ಮುಂಳಗುಂದದಲ್ಲಿ ಕಾಂಗ್ರೆಸ್‌ ಪ್ರತಿಭಟನೆ

ಮುಳಗುಂದ: ಮಾಜಿ ಸಚಿವ ಡಿ.ಕೆ.ಶಿವಕುಮಾರ ಅಧಿಕಾರಿ ಬಂಧಿಸಿರುವುದನ್ನು ಪಟ್ಟಣದ ಯುವ ಕಾಂಗ್ರೇಸ್‌ ಘಟಕದ ಕಾರ್ಯಕರ್ತರು,ಬೆಂಬಲಿಗರು ಪಪಂ ಎದುರು ರಸ್ತೆ ಮಧ್ಯ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

Vijaya Karnataka 5 Sep 2019, 5:00 am
ಮುಳಗುಂದ: ಮಾಜಿ ಸಚಿವ ಡಿ.ಕೆ.ಶಿವಕುಮಾರ ಅಧಿಕಾರಿ ಬಂಧಿಸಿರುವುದನ್ನು ಪಟ್ಟಣದ ಯುವ ಕಾಂಗ್ರೇಸ್‌ ಘಟಕದ ಕಾರ್ಯಕರ್ತರು,ಬೆಂಬಲಿಗರು ಪಪಂ ಎದುರು ರಸ್ತೆ ಮಧ್ಯ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
Vijaya Karnataka Web congress protests in mulagunda
ಮುಂಳಗುಂದದಲ್ಲಿ ಕಾಂಗ್ರೆಸ್‌ ಪ್ರತಿಭಟನೆ


ಪಪಂ ಸದಸ್ಯ ಬಸವರಾಜ ಹಾರೋಗೇರಿ ಮಾತನಾಡಿ, ಪ್ರಧಾನಿ ಮೋದಿ,ಅಮಿತ್‌ ಶಾ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಇಡಿ,ಐಟಿ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ದೇಶದಲ್ಲಿತಾವೇ ಅಧಿಕಾರ ನಡೆಸಬೇಕು ಎಂಬ ದುರುದ್ದೇಶ ಹೊಂದಿದ್ದಾರೆ ಎಂದು ಆರೋಪಿಸಿದರು.

ಮುಳಗುಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಸುಂಕಾಪೂರ,ಷಣ್ಮುಖಪ್ಪ ಬಡ್ನಿ ಮಾತನಾಡಿದರು.ಮುಳಗುಂದ ಯುವ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ ಶಿರಹಟ್ಟಿ, ಉಪಾಧ್ಯಕ್ಷ ಖಲಂದರ ಗಾಡಿ, ಬಿ.ವಿ.ಸುಂಕಾಪೂರ,ನಾಗರಾಜ ದೇಶಪಾಂಡೆ,ಮಹಾಂತೇಶ ನೀಲಗುಂದ,ವಿಜಯ ನೀಲಗುಂದ, ಬಸವರಾಜ ಹಾರೋಗೇರಿ,ದಾವುದ ಜಮಾಲ,ರಾಹುಲ್‌ ಹುಲಿ, ಸುಭಾಷ ದೊಡ್ಡಮನಿ, ಹನುಮಂತಪ್ಪ ಮ್ಯಾಗೇರಿ, ಖಾನಸಾಬ ಲಾಡಂನವರ,ಅಲ್ಲಾಭಕ್ಷಿ ಹೊಂಬಳ, ಇಂತಿಯಾಜ ಶಿದ್ದಿ ಮೊದಲಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ