ಆ್ಯಪ್ನಗರ

ಸಮಾಜದ ಅಭಿವೃದ್ಧಿಗೆ ಸಹಕಾರ

ಗಜೇಂದ್ರಗಡ : ಆರ್ಥಿಕ, ಸಾಮಾಜಿಕ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಎಲ್ಲ ಕ್ಷೇತ್ರದಲ್ಲಿ ಹಿಂದುಳಿದಿರುವ ಉಪ್ಪಾರ ಸಮುದಾಯದ ಜನತೆ ಶೈಕ್ಷ ಣಿಕವಾಗಿ ಪ್ರಬಲರಾದಾಗ ಸಮಾಜ ಅಭಿವೃದ್ಧಿಯಾಗಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಹೇಳಿದರು.

Vijaya Karnataka 2 Jul 2019, 5:00 am
ಗಜೇಂದ್ರಗಡ : ಆರ್ಥಿಕ, ಸಾಮಾಜಿಕ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಎಲ್ಲ ಕ್ಷೇತ್ರದಲ್ಲಿ ಹಿಂದುಳಿದಿರುವ ಉಪ್ಪಾರ ಸಮುದಾಯದ ಜನತೆ ಶೈಕ್ಷ ಣಿಕವಾಗಿ ಪ್ರಬಲರಾದಾಗ ಸಮಾಜ ಅಭಿವೃದ್ಧಿಯಾಗಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಹೇಳಿದರು.
Vijaya Karnataka Web GDG-1GJD3A
ಗಜೇಂದ್ರಗಡ ಬಳಿಯ ಮುಶಿಗೇರಿ ಗ್ರಾಮದ ಮ ಭಗೀರಥ ಸಾಂಸ್ಕೃತಿಕ ಭವನದಲ್ಲಿ ಉಪ್ಪರ ಸಂಘದಿಂದ ನಡೆದ ರಾಜಋುಷಿ ಭಗೀರಥ ಜಯಂತ್ಯುತ್ಸವ ಸಮಾರಂಭವನ್ನು ಸಚಿವ ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು. ಹೊಸದುರ್ಗಾ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ, ಶಾಸಕ ಕಳಕಪ್ಪ ಬಂಡಿ ಮತ್ತಿತರರಿದ್ದರು.


ಸಮೀಪದ ಮುಶಿಗೇರಿ ಗ್ರಾಮ ಭಗಿರಥ ಸಾಂಸ್ಕೃತಿಕ ಭವನದಲ್ಲಿ ಉಪ್ಪಾರ ಸಂಘದಿಂದ ಭಾನುವಾರ ಸಂಜೆ ನಡೆದ ರಾಜಋುಷಿ ಭಗೀರಥ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮುದಾಯ ಅಭಿವೃದ್ಧಿಗೆ ಸರಕಾರ ಉದ್ಧವಾಗಿದೆ. ಸಮಾಜದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ತಿಳಿಸಿದ ಸಚಿವರು, ಉಪ್ಪಾರ ಸಮಾಜ ಶಿಕ್ಷ ಣಕ್ಕೆ ಹೆಚ್ಚು ಮಹತ್ವ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಸಮಾಜ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಮುಂದಾಗಬೇಕು. ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾಸಿರಿ ಯೋಜನೆ ಅನುಕೂಲವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ತರಬೇತಿ ಪಡೆಯುವ ಯೋಜನೆ ಇದೆ. ಸರಕಾರದ ಸೌಕರ‍್ಯ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಿರಿ ಎಂದರು.

ಹೊಸದುರ್ಗಾ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ರಾಜ್ಯ ಹೆದ್ದಾರಿ ಅಭಿವೃದ್ಧಿ ಮುಖ್ಯ ಯೋಜನಾಧಿಕಾರಿ ಪ್ರಭಾಕರ್‌ ಚೀಣಿ ಮಾತನಾಡಿದರು. ಉಪ್ಪಾರ ಸಮಾಜ ಅಧ್ಯಕ್ಷ ಮಲ್ಲಪ್ಪ ಚಿಣಿ ಅಧ್ಯಕ್ಷ ತೆ ವಹಿಸಿದ್ದರು. ಶಿವಪ್ಪ ಚಿಣಿ, ವೆಂಕೋಬಾ, ಯಲ್ಲಪ್ಪ ಗದ್ದಿ, ಶಾಂತವ್ವಾ ನಾಯ್ಕರ್‌, ಯಮನೂರಪ್ಪ ಬಳೂಟಗಿ, ಮಲ್ಲಪ್ಪ ಗುಡೂರ, ಮಹೇಶ ಚಿಣಿ, ಮಲ್ಲಪ್ಪ ಕೊಡಕೇರಿ, ಶಶಿಧರ ಕೊಡಕೇರಿ, ಶರಣಪ್ಪ ಗಡಾದ, ಉದಯಕುಮಾರ ಕುಲಕರ್ಣಿ, ಬಸವರಾಜ ಡಗ್ಗಿ, ದೇವಪ್ಪ ತಳ್ಯಾಳ, ವೆಮಕಟೇಶ ಬ್ಯಾಡಗಿ, ಬಿ.ಬಿ. ಅಂಗಡಿ, ಸಂಗಪ್ಪ ವಾಜ್ಮಿ, ಚಂದ್ರಕಲಾ ಚೀಣಿ ಇನ್ನಿತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ