ಗಜೇಂದ್ರಗಡ : ಆರ್ಥಿಕ, ಸಾಮಾಜಿಕ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಎಲ್ಲ ಕ್ಷೇತ್ರದಲ್ಲಿ ಹಿಂದುಳಿದಿರುವ ಉಪ್ಪಾರ ಸಮುದಾಯದ ಜನತೆ ಶೈಕ್ಷ ಣಿಕವಾಗಿ ಪ್ರಬಲರಾದಾಗ ಸಮಾಜ ಅಭಿವೃದ್ಧಿಯಾಗಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಹೇಳಿದರು.
ಸಮೀಪದ ಮುಶಿಗೇರಿ ಗ್ರಾಮ ಭಗಿರಥ ಸಾಂಸ್ಕೃತಿಕ ಭವನದಲ್ಲಿ ಉಪ್ಪಾರ ಸಂಘದಿಂದ ಭಾನುವಾರ ಸಂಜೆ ನಡೆದ ರಾಜಋುಷಿ ಭಗೀರಥ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮುದಾಯ ಅಭಿವೃದ್ಧಿಗೆ ಸರಕಾರ ಉದ್ಧವಾಗಿದೆ. ಸಮಾಜದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ತಿಳಿಸಿದ ಸಚಿವರು, ಉಪ್ಪಾರ ಸಮಾಜ ಶಿಕ್ಷ ಣಕ್ಕೆ ಹೆಚ್ಚು ಮಹತ್ವ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಸಮಾಜ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಮುಂದಾಗಬೇಕು. ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾಸಿರಿ ಯೋಜನೆ ಅನುಕೂಲವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ತರಬೇತಿ ಪಡೆಯುವ ಯೋಜನೆ ಇದೆ. ಸರಕಾರದ ಸೌಕರ್ಯ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಿರಿ ಎಂದರು.
ಹೊಸದುರ್ಗಾ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ರಾಜ್ಯ ಹೆದ್ದಾರಿ ಅಭಿವೃದ್ಧಿ ಮುಖ್ಯ ಯೋಜನಾಧಿಕಾರಿ ಪ್ರಭಾಕರ್ ಚೀಣಿ ಮಾತನಾಡಿದರು. ಉಪ್ಪಾರ ಸಮಾಜ ಅಧ್ಯಕ್ಷ ಮಲ್ಲಪ್ಪ ಚಿಣಿ ಅಧ್ಯಕ್ಷ ತೆ ವಹಿಸಿದ್ದರು. ಶಿವಪ್ಪ ಚಿಣಿ, ವೆಂಕೋಬಾ, ಯಲ್ಲಪ್ಪ ಗದ್ದಿ, ಶಾಂತವ್ವಾ ನಾಯ್ಕರ್, ಯಮನೂರಪ್ಪ ಬಳೂಟಗಿ, ಮಲ್ಲಪ್ಪ ಗುಡೂರ, ಮಹೇಶ ಚಿಣಿ, ಮಲ್ಲಪ್ಪ ಕೊಡಕೇರಿ, ಶಶಿಧರ ಕೊಡಕೇರಿ, ಶರಣಪ್ಪ ಗಡಾದ, ಉದಯಕುಮಾರ ಕುಲಕರ್ಣಿ, ಬಸವರಾಜ ಡಗ್ಗಿ, ದೇವಪ್ಪ ತಳ್ಯಾಳ, ವೆಮಕಟೇಶ ಬ್ಯಾಡಗಿ, ಬಿ.ಬಿ. ಅಂಗಡಿ, ಸಂಗಪ್ಪ ವಾಜ್ಮಿ, ಚಂದ್ರಕಲಾ ಚೀಣಿ ಇನ್ನಿತರು ಉಪಸ್ಥಿತರಿದ್ದರು.
ಸಮೀಪದ ಮುಶಿಗೇರಿ ಗ್ರಾಮ ಭಗಿರಥ ಸಾಂಸ್ಕೃತಿಕ ಭವನದಲ್ಲಿ ಉಪ್ಪಾರ ಸಂಘದಿಂದ ಭಾನುವಾರ ಸಂಜೆ ನಡೆದ ರಾಜಋುಷಿ ಭಗೀರಥ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮುದಾಯ ಅಭಿವೃದ್ಧಿಗೆ ಸರಕಾರ ಉದ್ಧವಾಗಿದೆ. ಸಮಾಜದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ತಿಳಿಸಿದ ಸಚಿವರು, ಉಪ್ಪಾರ ಸಮಾಜ ಶಿಕ್ಷ ಣಕ್ಕೆ ಹೆಚ್ಚು ಮಹತ್ವ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಸಮಾಜ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಮುಂದಾಗಬೇಕು. ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾಸಿರಿ ಯೋಜನೆ ಅನುಕೂಲವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ತರಬೇತಿ ಪಡೆಯುವ ಯೋಜನೆ ಇದೆ. ಸರಕಾರದ ಸೌಕರ್ಯ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಿರಿ ಎಂದರು.
ಹೊಸದುರ್ಗಾ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ರಾಜ್ಯ ಹೆದ್ದಾರಿ ಅಭಿವೃದ್ಧಿ ಮುಖ್ಯ ಯೋಜನಾಧಿಕಾರಿ ಪ್ರಭಾಕರ್ ಚೀಣಿ ಮಾತನಾಡಿದರು. ಉಪ್ಪಾರ ಸಮಾಜ ಅಧ್ಯಕ್ಷ ಮಲ್ಲಪ್ಪ ಚಿಣಿ ಅಧ್ಯಕ್ಷ ತೆ ವಹಿಸಿದ್ದರು. ಶಿವಪ್ಪ ಚಿಣಿ, ವೆಂಕೋಬಾ, ಯಲ್ಲಪ್ಪ ಗದ್ದಿ, ಶಾಂತವ್ವಾ ನಾಯ್ಕರ್, ಯಮನೂರಪ್ಪ ಬಳೂಟಗಿ, ಮಲ್ಲಪ್ಪ ಗುಡೂರ, ಮಹೇಶ ಚಿಣಿ, ಮಲ್ಲಪ್ಪ ಕೊಡಕೇರಿ, ಶಶಿಧರ ಕೊಡಕೇರಿ, ಶರಣಪ್ಪ ಗಡಾದ, ಉದಯಕುಮಾರ ಕುಲಕರ್ಣಿ, ಬಸವರಾಜ ಡಗ್ಗಿ, ದೇವಪ್ಪ ತಳ್ಯಾಳ, ವೆಮಕಟೇಶ ಬ್ಯಾಡಗಿ, ಬಿ.ಬಿ. ಅಂಗಡಿ, ಸಂಗಪ್ಪ ವಾಜ್ಮಿ, ಚಂದ್ರಕಲಾ ಚೀಣಿ ಇನ್ನಿತರು ಉಪಸ್ಥಿತರಿದ್ದರು.