ಆ್ಯಪ್ನಗರ

ಬಾಲ್ಯವಿವಾಹ ತಡೆಗೆ ಸಹಕಾರ ಅಗತ್ಯ

ಗದಗ: ಪ್ರತಿಯೊಬ್ಬರ ಜೀವನದಲ್ಲೂ ವಿದ್ಯಾಭ್ಯಾಸ ಬಹುಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳಿಗೆ ಬಾಲ್ಯವಿವಾಹದಂತ ಅನಿಷ್ಟ ಪದ್ಧತಿಯಲ್ಲಿ ಸಿಲುಕಿಸದೇ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷ ಣಾಧಿಕಾರಿ ಭಾರತಿ ಶೆಟ್ಟರ ಹೇಳಿದರು.

Vijaya Karnataka 26 Jul 2019, 5:00 am
ಗದಗ: ಪ್ರತಿಯೊಬ್ಬರ ಜೀವನದಲ್ಲೂ ವಿದ್ಯಾಭ್ಯಾಸ ಬಹುಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳಿಗೆ ಬಾಲ್ಯವಿವಾಹದಂತ ಅನಿಷ್ಟ ಪದ್ಧತಿಯಲ್ಲಿ ಸಿಲುಕಿಸದೇ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷ ಣಾಧಿಕಾರಿ ಭಾರತಿ ಶೆಟ್ಟರ ಹೇಳಿದರು.
Vijaya Karnataka Web cooperation is essential for child marriage
ಬಾಲ್ಯವಿವಾಹ ತಡೆಗೆ ಸಹಕಾರ ಅಗತ್ಯ


ಗುರುವಾರ ನಗರದ ಬಾಲಕರ ಬಾಲಮಂದಿರದಲ್ಲಿ ಜಿಲ್ಲಾ ಮಕ್ಕಳ ರಕ್ಷ ಣಾ ಘಟಕ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 2012 ರ ನಂತರ ಬಾಲ್ಯ ವಿವಾಹ ತಡೆಗಟ್ಟಿ ರಕ್ಷ ಣೆ ಮಾಡಿದ ಬಾಲಕಿಯರು ಹಾಗೂ ಪಾಲಕರೊಂದಿಗೆ ನಡೆದ ಸಮಿತಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಹಿಂದಿನಿಂದಲೂ ರೂಢಿಯಲ್ಲಿರುವಂತೆ ಚಿಕ್ಕವಯಸ್ಸಿನಲ್ಲೇ ಮದುವೆ ಮಾಡುವ ಘಟನೆಗಳು ಇಂದು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿವೆ. ಆದರೆ, ತಿಳಿವಳಿಕೆ ಕೊರತೆಯಿಂದ ಇನ್ನೂ ಈ ರೀತಿ ಘಟನೆಗಳು ನಡೆಯುತ್ತಿವೆ. ಇದನ್ನು ತಡೆಗಟ್ಟುವ ಹಾಗೂ ಮಕ್ಕಳಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಮಕ್ಕಳ ರಕ್ಷ ಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ಕಾರ್ಯ ನಿರ್ವಹಿಸುತ್ತಿದ್ದು, ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಬಾಲ್ಯ ವಿವಾಹ ನಡೆಯುತ್ತಿರುವುದು ತಿಳಿದುಬಂದಲ್ಲಿ ಅಧಿಕಾರಿಗಳ ಗಮನಕ್ಕೆ ಅಥವಾ ಮಕ್ಕಳ ಸಹಾಯವಾಣಿ-1098 ಗೆ ವಿಷಯ ತಿಳಿಸಬೇಕು ಎಂದ ಅವರು, ಪಾಲಕರು ಮಕ್ಕಳಿಗೆ ಗಂಡಿಗೆ 21 ಹಾಗೂ ಹೆಣ್ಣಿಗೆ 18 ವರ್ಷ ತಿಂಬಿದ ನಂತರವೇ ಮದುವೆ ಮಾಡಬೇಕು, ಇದರೊಂದಿಗೆ ವಿವಾಹ ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಬೇಕು ಎಂದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಖಾಜಿಮುನ್ನಿ ನಾಯ್ಕರ ಮಾತನಾಡಿ, ಬಾಲ್ಯವಿವಾಹದಂತ ಅನಿಷ್ಟ ಪದ್ಧತಿ ಹೋಗಲಾಡಿಸುವ ನಿಟ್ಟಿನಲ್ಲಿ ಕೇವಲ ಅಧಿಕಾರಿಗಳಷ್ಟೇ ಅಲ್ಲದೇ ಸಮಾಜದ ಪ್ರತಿಯೊಬ್ಬ ನಾಗರಿಕನ ಪಾತ್ರ ಬಹುಮುಖ್ಯವಾಗಿದೆ ಎಂದರು.

ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ಬಾಲ್ಯವಿವಾಹದಿಂದ ಪಾರಾದ ನೂರಾರು ಮಹಿಳೆಯರು ಹಾಗೂ ಪಾಲಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಮಂಜುನಾಥ ಬಮ್ಮನಕಟ್ಟಿ, ಅನ್ನಪೂರ್ಣ ಗಾಣಿಗೇರ, ಸಿ.ಎಸ್‌. ಬೊಮ್ಮನಹಳ್ಳಿ, ಬಾಲಮಂದಿರದ ಅಧೀಕ್ಷ ಕಿ ಶೈಲಾ ಕುರಟ್ಟಿ, ರಕ್ಷ ಣಾ ಘಟಕದ ಸಿಬ್ಬಂದಿ ಆರ್‌.ಎಸ್‌. ಕಳ್ಳಿಮನಿ, ಅನುಪಮಾ ಹಿರೇಗೌಡ್ರ, ರೂಪಾ ಉಪ್ಪಿನ, ಪ್ರವೀಣಕುಮಾರ ಬೆಟಗೇರಿ, ಎಂ.ಎಫ್‌. ಹೊಸಳ್ಳಿ, ಬಿ.ಬಿ. ಮಲ್ಲನಗೌಡ್ರ, ಸವಿತಾ ಹರ್ತಿ, ವಜ್ರೇಶ್ವರಿ ಧರ್ಮದಾಸ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ