ಆ್ಯಪ್ನಗರ

ವಿಷ್ಣು ಅಭಿಮಾನಿಯಿಂದ ಕೊರೊನಾ ಜಾಗೃತಿ

ಗಜೇಂದ್ರಗಡ: ಜಗತ್ತಿಗೆ ಕಂಠಕವಾಗಿ ಕಾಡುತ್ತಿರುವ ಕೋವಿಡ್‌-19 ನಿಂದ ನಾವೆಲ್ಲರೂ ಬಚಾವಾಗಲು ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಿನಿಂದ ಆಚರಿಸವ ಮೂಲಕ ಕೊರೊನಾ ವೈರಸ್‌ ವಿರುದ್ಧ ನಮ್ಮ ಹೋರಾಟಕ್ಕೆ ಜಯ ಸಿಗಲಿದೆ ಎಂದು ಜ್ಯೂ. ವಿಷ್ಣು ದಾದಾ ಅಭಿಮಾನಿ ಹೇಳಿದರು.

Vijaya Karnataka 29 Oct 2020, 5:00 am
ಗಜೇಂದ್ರಗಡ: ಜಗತ್ತಿಗೆ ಕಂಠಕವಾಗಿ ಕಾಡುತ್ತಿರುವ ಕೋವಿಡ್‌-19 ನಿಂದ ನಾವೆಲ್ಲರೂ ಬಚಾವಾಗಲು ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಿನಿಂದ ಆಚರಿಸವ ಮೂಲಕ ಕೊರೊನಾ ವೈರಸ್‌ ವಿರುದ್ಧ ನಮ್ಮ ಹೋರಾಟಕ್ಕೆ ಜಯ ಸಿಗಲಿದೆ ಎಂದು ಜ್ಯೂ. ವಿಷ್ಣು ದಾದಾ ಅಭಿಮಾನಿ ಹೇಳಿದರು.
Vijaya Karnataka Web 054827GJD-1_25
ಬೈಕ್‌ ಮೂಲಕ ಕೊರೊನಾ ಹಾಗೂ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ನಡೆಸಿದ ಜೂ. ವಿಷ್ಣುದಾದಾ ಅಭಿಮಾನಿಯನ್ನು ಗಜೇಂದ್ರಗಡದಲ್ಲಿಡಾ. ವಿಷ್ಣು ಅಭಿಮಾನಿಗಳ ಸಂಘದಿಂದ ಸನ್ಮಾನಿಸಲಾಯಿತು.


ಇಲ್ಲಿನ ಶಿವಾಜಿಪೇಟೆಯ ವಿಷ್ಣುವರ್ಧನ ವೃತ್ತದಲ್ಲಿಮಂಗಳವಾರ ವಿಷ್ಣು ಅಭಿಮಾನಿ ಬಳಗದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕೊರೊನಾ ಜಾಗೃತಿ ಹಾಗೂ ರಸ್ತೆ ಸಂಚಾರ ನಿಯಮ ಪಾಲಿಸುವಂತೆ ಜನತೆಯಲ್ಲಿಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಕೊರೊನಾ ವೈರಸ್‌ ಬಗ್ಗೆ ಭಯಬೇಡ. ಹಾಗಂತ ಯಾರೂ ನಿಷ್ಕಾಳಜಿ ವಹಿಸದೇ ಜಾಗೃತವಾಗಿರಬೇಕು. ಸರಕಾರ ಮತ್ತು ಆರೋಗ್ಯ ಇಲಾಖೆಯ ನೀಡುವ ನಿಯಮ ಪಾಲಿಸಬೇಕು ಎಂದರು. ಕರ್ನಾಟಕ ಅಭಿವೃದ್ಧಿ ವೇದಿಕೆ ರಾಜ್ಯಾಧ್ಯಕ್ಷ ವಿನಾಯಕ ಜರತಾರಿ ಮಾತನಾಡಿದರು.

ಪರಶುರಾಮ ಹಾಳಕೇರಿ, ಜಿಲ್ಲಾನಿ ಖಾಜಿ, ಮುದ್ದು ಕಂದಗಲ, ರಾಘು ಕೆ. ಪರಶು ಬಡಿಗೇರ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ