ಆ್ಯಪ್ನಗರ

ಗದಗ ಪೊಲೀಸರಿಗೂ ಬಂತು ಕೊರೊನಾ, ಶಹರ ಪೊಲೀಸ್‌ ಠಾಣೆ ಸೀಲ್‌ ಡೌನ್‌!

ಗದಗದಲ್ಲಿ ಪೊಲೀಸರಿಗೂ ಕೊರೊನಾ ವೈರಸ್ ಸೋಂಕು ತಗುಲಿದ್ದು, ನಗರದ ಶಹರ ಠಾಣೆ ಪೊಲೀಸರೊಬ್ಬರಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ಹೀಗಾಗಿ ಠಾಣೆ ಸೀಲ್‌ ಡೌನ್‌ ಆಗಿದೆ.

Vijaya Karnataka Web 16 Jul 2020, 5:19 pm
ಗದಗ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಪೊಲೀಸರಿಗೂ ವ್ಯಾಪಿಸಿದ್ದು, ಬುಧವಾರ ಪತ್ತೆಯಾದ ಸೋಂಕಿತರ ಪೈಕಿ ನಗರದ ಶಹರ ಠಾಣೆ ಪೊಲೀಸರೊಬ್ಬರಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ.
Vijaya Karnataka Web Sealdown


ಈ ಹಿನ್ನೆಲೆಯಲ್ಲಿ ಹಳೆ ಬಸ್‌ ನಿಲ್ದಾಣದ ಮುಂದಿನ ಶಹರ ಪೊಲೀಸ್‌ ಠಾಣೆಯಲ್ಲಿ ಸೀಲ್‌ ಡೌನ್‌ ಮಾಡಲಾಗಿದೆ. ಸೋಂಕಿತ ಪೊಲೀಸ್‌ ಕಾನ್ಸಟೆಬಲ್‌ ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ಪೇದೆಗಳನ್ನು ಗುರುತಿಸಿ ಆರೋಗ್ಯ ತಪಾಸಣೆ ಜತೆಗೆ ಹೋಂ ಕ್ವಾರಂಟೈನ್‌ ಮಾಡಲಾಗುತ್ತಿದೆ.

ಠಾಣೆ ಸೀಲ್‌ ಡೌನ್‌ ಮಾಡಿರುವ ಕಾರಣ ಶಹರ ಠಾಣೆ ಕಾರ್ಯ ನಿರ್ವಹಣೆಯನ್ನು ತಾತ್ಕಾಲಿಕವಾಗಿ ನಗರ ಸಂಚಾರಿ ಠಾಣೆಯಿಂದ ನಿರ್ವಹಿಸಲಾಗುತ್ತಿದೆ. ಮಹಿಳಾ ಮತ್ತು ಗೆಳತಿ ಪೊಲೀಸ್‌ ಠಾಣೆಯಲ್ಲಿಬೆಟಗೇರಿ ಬಡಾವಣೆ ಠಾಣೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ ಎನ್‌. ತಿಳಿಸಿದ್ದಾರೆ.

ಕಲಬುರಗಿ: ಸೆಂಟ್ರಲ್ ಜೈಲಿಗೆ ತಟ್ಟಿದ ಕೊರೊನಾ ಬಿಸಿ..! ಮತ್ತಿಬ್ಬರು ಕೈದಿಗಳಿಗೆ ಸೋಂಕು ದೃಢ

ಜಿಲ್ಲೆ ಲಾಕ್‌ಡೌನ್‌ ಮಾಡಲು ಮನವಿ
ಗದಗ: ಜಿಲ್ಲೆಯಾದ್ಯಂತ ಕೋವಿಡ್‌-19 ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುವುದರಿಂದ ಕೂಡಲೇ ಗದಗ ಜಿಲ್ಲೆಯನ್ನು ಸಂಪೂರ್ಣವಾಗಿ ಲಾಕ್‌ಡೌನ್‌ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಅಟೋ ಚಾಲಕರ ಮಾಲೀಕರ ಸಂಘ, ಜೈ ಭೀಮ ಅಟೋ ಚಾಲಕರ ಮಾಲೀಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಹೊರಗಿನಿಂದ ಚಿಕ್ಕಮಗಳೂರಿಗೆ ಬಂದ್ರೆ ತಮಟೆ ಬಡಿದು ಕ್ವಾರಂಟೈನ್‌ ಆಗೋ ಎಚ್ಚರಿಕೆ

ಜಿಲ್ಲೆಯಲ್ಲಿಇದುವರಿಗೂ 330 ಹೆಚ್ಚಿನ ಪ್ರಕರಣಗಳು ಹಾಗೂ 9 ಕ್ಕಿಂತ ಹೆಚ್ಚು ಸಾವನ್ನಪ್ಪಿರುವುದು ಇರುತ್ತದೆ. ಈಗಾಗಲೇ ಈ ಕೊರೊನಾ ಸಮುದಾಯಕ್ಕೆ ಹಬ್ಬಿರುವ ಆತಂಕ ಜನತೆಯಲ್ಲಿಭಯ ಹುಟ್ಟಿಸಿದೆ. ಪೌರ ಕಾರ್ಮಿಕರಿಗೂ ಬೀದಿ ಬದಿ ವ್ಯಾಪಾರಸ್ಥರಿಗೆ, ಕೆಎಸ್‌ಆರ್‌ಟಿಸಿ ಸಿಬ್ಬಂದಿ ವರ್ಗಕ್ಕೂ ಹಾಗೂ ವೈದ್ಯಕೀಯ ಸಿಬ್ಬಂದಿಗೂ ವ್ಯಾಪಿಸಿರುವುದು ಜಿಲ್ಲೆಯ ಜನತೆಯಲ್ಲಿದುಗುಡವನ್ನುಂಟುಮಾಡಿದೆ. ಆದ ಕಾರಣ ಪ್ರತಿನಿತ್ಯ ಸಾರಿಗೆ ಸೇವೆಯಲ್ಲಿನೂರಾರು ಜನರಿಗೆ ಸೇವೆ ನೀಡುತ್ತಿರುವ ಅಟೋ ಚಾಲಕರಿಗೆ, ಜೀವದ ಮೇಲೆ ಭಯ ಇದೆ. ಸರಕಾರದ ಯಾವುದೇ ಕ್ರಮಗಳಿಗೂ ಬಗ್ಗದ ಕೊರೊನಾ ನಿಯಂತ್ರಕ್ಕೆ ಬರಬೇಕಾದರೆ ಮತ್ತೆ ಲಾಕ್‌ಡೌನ್‌ ಮಾಡುವುದು ಅನಿವಾರ್ಯ. ಸರಕಾರಕ್ಕೆ ಒಂದು ಸಾವು ಒಂದು ಸಂಖ್ಯೆಯಾದರೆ ಕುಟುಂಬಕ್ಕೆ ಆಧಾರಸ್ಥಂಭವೇ ಕಳಚಿ ಬೀಳುತ್ತದೆ. ಜಿಲ್ಲಾಡಳಿತದ ಎಷ್ಟೇ ಕ್ರಮ ಕೈಗೊಂಡರು ನಿಯಂತ್ರಣಕ್ಕೆ ಬಾರದ ಈ ಕೊರೊನಾ ಈಗಾಗಲೇ ಇಲಾಖೆ ಸಿಬ್ಬಂದಿ ಕೊರೊನಾದಿಂದ ಸಾವನ್ನಪ್ಪಿರುವುದು ನಮ್ಮ ಜಿಲ್ಲೆಯಲ್ಲಿ ಪ್ರತ್ಯಕ್ಷ ಸಾಕ್ಷಿಯಾಗಿದೆ. ಆದ್ದರಿಂದ ಗದಗ ಡೇಂಜರ್‌ ಝೋನ್‌ನಲ್ಲಿಇರುವುದರಿಂದ ಕೂಡಲೇ ಲಾಕ್‌ಡೌನ್‌ ಮಾಡಬೇಕು ಎಂದು ಮನವಿ ಮೂಲಕ ಒತ್ತಾಯಿಸಲಾಯಿತು.

ಕೋವಿಡ್‌ ಕೇರ್‌ ಸೆಂಟರ್ ಆಗಲಿದೆ ಮೈಸೂರಿನ ಚಾಮುಂಡೇಶ್ವರಿ ಒಳಾಂಗಣ ಕ್ರೀಡಾಂಗಣ..!

ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎಲ್ಲಇಲಾಖೆ ಅಧಿಕಾರಿಗಳನ್ನೊಳಗೊಂಡು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಆದರೂ ಸಹ ಕೊರೊನಾ ಮಾತ್ರ ಕಡಿಮೆಯಾಗುತ್ತಿಲ್ಲ. ಹೀಗಾಗಿ ಮನಕುಲಕ್ಕೆ ಮಾರಕವಾಗಿ ಪ್ರತಿನಿತ್ಯ ಕೂಲಿ ಮಾಡುವ ಬಡವರನ್ನು ನಿರ್ದಾಕ್ಷಿಣ್ಯವಾಗಿ ಮಾನಸಿಕವಾಗಿ ಹಿಂಸೆ ಮಾಡುತ್ತಿದೆ. ಕೊರೊನಾ ವೈರಸ್‌ ಜಾಗೃತಿ ಹಾಗೂ ತಿಳುವಳಿಕೆ ನೀಡುವ ಕಾರ್ಯಕ್ರಮ ಹಾಗೂ ಅಂತರ ಜಿಲ್ಲಾಸಾರಿಗೆ ಸಂಚಾರವನ್ನು ಅತ್ಯಂತ ಶಿಸ್ತು ಬದ್ಧವಾಗಿ ಜಾರಿಗೊಳಿಸಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.

ಜಿಲ್ಲಾಅಟೋ ಚಾಲಕರು ಮತ್ತು ಮಾಲಕರ ಸಂಘದ ಅಧ್ಯಕ್ಷ ವಿಜಯ ಕಲ್ಮನಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಮನಗುಂಡಿ, ಚಾಲಕರು, ಮಾಲೀಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ