ಆ್ಯಪ್ನಗರ

ಕೆಎಎಸ್‌ ಆಕಾಂಕ್ಷಿಗಳಿಗೆ ಕೊರೊನಾ ರ‍್ಯಾಪಿಡ್‌ ಟೆಸ್ಟ್‌ ಫಜೀತಿ: ಆಯೋಗದ ಸೂಚನೆಯಿಂದ ಗೊಂದಲ

ಕೆಎಎಸ್‌ ಆಕಾಂಕ್ಷಿಗಳಿಗೆ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳಿಲ್ಲದಿದ್ದರೂ ವರದಿ ಪಾಸಿಟಿವ್‌ ಬಂದರೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗಲು ಕೆಪಿಎಸ್‌ಸಿ ಅವಕಾಶ ನೀಡುವ ಬಗ್ಗೆ ಸೂಚನೆಯಲ್ಲಿ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಇದು ಗೊಂದಲಕ್ಕೆ ಕಾರಣವಾಗಿದೆ.

Vijaya Karnataka Web 14 Aug 2020, 6:59 pm

ಹೈಲೈಟ್ಸ್‌:

  • ರ‍್ಯಾಪಿಡ್‌ ಟೆಸ್ಟ್‌ ನಂತರ ಆಯೋಗದ ವೈದ್ಯಕೀಯ ಪರೀಕ್ಷೆ
  • ಟೆಸ್ಟ್‌‌ನಲ್ಲಿ ಪಾಸಿಟಿವ್‌ ಬಂದರೆ ಮುಂದೇನು ಎಂಬ ಪ್ರಶ್ನೆ
  • ಆಯೋಗದ ಸೂಚನೆಯಲ್ಲಿ ಸ್ಪಷ್ಟತೆ ಇಲ್ಲ: ಆಕಾಂಕ್ಷಿಗಳು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web kpsc
ಕೆಎಎಸ್‌ ಆಕಾಂಕ್ಷಿಗಳಿಗೆ ಕೊರೊನಾ ರ‍್ಯಾಪಿಡ್‌ ಟೆಸ್ಟ್‌ ಫಜೀತಿ: ಆಯೋಗದ ಸೂಚನೆಯಿಂದ ಗೊಂದಲ
ಸಲೀಮ್‌ ಬಳಬಟ್ಟಿ
ಗದಗ:
ಗೆಜೆಡೆಟ್‌ ಪ್ರೊಬೇಷನರಿ ಹುದ್ದೆ ಭರ್ತಿ ಅಭ್ಯರ್ಥಿಗಳಿಗೆ ಲೋಕಸೇವಾ ಆಯೋಗ ವೈದ್ಯಕೀಯ ಪರೀಕ್ಷೆ ನಡೆಸುತ್ತಿದೆ. ಒಂದು ವೇಳೆ ಕೊರೊನಾ ಪಾಸಿಟಿವ್‌ ಬಂದರೆ ಪರೀಕ್ಷೆ ಎದುರಿಸಲು ಅವಕಾಶ ಇದೆಯೋ, ಇಲ್ಲವೊ ಎಂಬುದು ಯಕ್ಷಪ್ರಶ್ನೆಯಾಗಿದೆ.
ಆಯೋಗ ಇದೇ ಮೊದಲ ಬಾರಿಗೆ, ಲಿಖಿತ ಪರೀಕ್ಷೆಗೂ ಮುನ್ನ ಅಭ್ಯರ್ಥಿಗಳು ಕಡ್ಡಾಯವಾಗಿ ಕೊರೊನಾ ರ‍್ಯಾಪಿಡ್ ಟೆಸ್ಟ್‌ ಮಾಡಿಸಿಕೊಂಡು ಬರಬೇಕು ಎಂಬ ಸೂಚನೆ ನೀಡಿದೆ. ಈ ಟೆಸ್ಟ್‌ ಮಾಡಿಸಿಕೊಳ್ಳುವುದಕ್ಕೆ ಅಭ್ಯರ್ಥಿಗಳಿಗೆ ಅಭ್ಯಂತರವೇನೂ ಇಲ್ಲ. ಆದ್ರೆ, ಪಾಸಿಟಿವ್‌ ಬಂದರೆ ಆ ಅಭ್ಯರ್ಥಿ ಆಯೋಗ ನಡೆಸುವ ವೈದ್ಯಕೀಯ ಪರೀಕ್ಷೆಗೆ ಹಾಜರಾಗಬಹುದೇ? ಅಥವಾ ಚಿಕಿತ್ಸೆ ಪಡೆದು ಗುಣವಾದ ನಂತರ ಪ್ರತ್ಯೇಕ ಪರೀಕ್ಷೆಗೆ ಅವಕಾಶ ಇದೆಯೇ? ಈ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.

ಗೊಂದಲ ತಂದ ಸೂಚನೆ

ಅಂಧ/ದೃಷ್ಟಿ ವಿಕಲಚೇತನ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗುವ ಸಂಬಂಧ ಅವರ ಮೊಬೈಲ್‌ ನಂಬರ್‌, ಇಮೇಲ್‌ ಐಡಿ ಹಾಗೂ ಖಾಯಂ ವಿಳಾಸಕ್ಕೆ ದಿನಾಂಕ, ಸಮಯ ನಿಗದಿಪಡಿಸಿ ಸೂಚನಾ ಪತ್ರ ಕಳುಹಿಸಿದೆ. ಅಲ್ಲದೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗುವ ಹಿಂದಿನ ದಿನ ಕೊರೊನಾ ರ‍್ಯಾಪಿಡ್ ಟೆಸ್ವ್‌ಗೆ ಒಳಗಾಗಿರುವ ವರದಿಯೊಂದಿಗೆ ಪರೀಕ್ಷೆಗೆ ಹಾಜರಾಗಬೇಕು ಎಂದು ಸೂಚಿಸಿದೆ.

ಕೊರೊನಾ ಸೋಂಕಿತ ಕೆಪಿಎಸ್‌ಸಿ ಅಭ್ಯರ್ಥಿಗಳಿಗೆ ಆತಂಕ: ನೆಗೆಟಿವ್‌ ಬಂದರಷ್ಟೇ ಪರೀಕ್ಷೆಗೆ ಅವಕಾಶ!

ಹಾಗಿದ್ದರೆ ಟೆಸ್ವ್‌ನಲ್ಲಿ ಪಾಸಿಟಿವ್‌ ಬಂದಲ್ಲಿ ಆ ವರದಿಯೊಂದಿಗೆ ವೈದ್ಯಕೀಯ ಪರೀಕ್ಷೆ ಹಾಜರಾಗಲು ಅವಕಾಶವಿದೆಯೇ ಎಂದು ಅಭ್ಯರ್ಥಿಗಳು ಪ್ರಶ್ನಿಸುತ್ತಿದ್ದಾರೆ. ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳಿಲ್ಲದಿದ್ದರೂ ವರದಿ ಪಾಸಿಟಿವ್‌ ಬಂದರೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗಲು ಕೆಪಿಎಸ್‌ಸಿ ಅವಕಾಶ ನೀಡುವ ಬಗ್ಗೆ ಸೂಚನೆಯಲ್ಲಿ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಅಲ್ಲದೇ ಪಾಸಿಟಿವ್‌ ಬಂದ ತಕ್ಷಣ ಆಸ್ಪತ್ರೆ ಸಿಬ್ಬಂದಿಯು ಪರೀಕ್ಷೆಗೆ ಹೋಗಿ ಬರಲು ಅವಕಾಶ ಕೊಡುವುದಿಲ್ಲ. ಈ ಬಗ್ಗೆ ಕೆಪಿಎಸ್‌ಸಿ ಸ್ಪಷ್ಟ ನಿರ್ಧಾರ ಕೈಗೊಂಡು ಅಭ್ಯರ್ಥಿಗಳಿಗೆ ಅನ್ಯಾಯವಾಗುವುದನ್ನು ತಪ್ಪಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಅನುಮಾನ ತಂದ ನಡೆ

2017-18ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ 106 ಹುದ್ದೆಗಳ ನೇಮಕಾತಿಗೆ 2020ರ ಜನವರಿ 31, ಫೆಬ್ರವರಿ 24 ಮತ್ತು 25ರಂದು ಅಧಿಸೂಚನೆ ಹೊರಡಿಸಿತ್ತು. ಮಾರ್ಚ್ 17ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಅಧಿಸೂಚನೆಯಲ್ಲಿ ಲಿಖಿತ ಪರೀಕ್ಷೆಯ ನಂತರ ದಾಖಲಾತಿ ಪರಿಶೀಲನೆ, ವಿಕಲ ಚೇತನ ಮೀಸಲಾತಿ ಕೋರಿರುವ ಅರ್ಹ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಎಂದು ಕೆಪಿಎಸ್‌ಸಿ ತಿಳಿಸಿತ್ತು.

ಕೆಪಿಎಸ್‌ಸಿ ಪ್ರಥಮ ಅಧಿವೇಶನ ಇಲಾಖಾ ಪರೀಕ್ಷೆಗೆ ಪ್ರವೇಶ ಪತ್ರ ಪ್ರಕಟ

ಕಳೆದ ಜೂನ್‌ ಅಥವಾ ಜುಲೈನಲ್ಲಿ ಪರೀಕ್ಷೆ ನಡೆಸುವುದಾಗಿ ತಿಳಿಸಿತ್ತು. ಆದರೆ ಈಗ ಏಕಾಏಕಿ ಲಿಖಿತ ಪರೀಕ್ಷೆ ನಡೆಯುವ ಮುನ್ನವೇ ವೈದ್ಯಕೀಯ ಪರೀಕ್ಷೆ ನಡೆಸಲು ಮುಂದಾಗಿದೆ. ಇದರಿಂದ ಕೆಎಎಸ್‌ ಕನಸು ಕಂಡಿದ್ದ ಅಂಧ ಅಥವಾ ದೃಷ್ಟಿ ವಿಕಲಚೇತನ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಜೊತೆಗೆ ಈ ನಿರ್ಧಾರ ಹಲವು ಅನುಮಾನಗಳಿಗೂ ಕಾರಣವಾಗಿದೆ.

ಮೇಲ್‌, ಪೋನ್‌ಗೆ ಉತ್ತರಿಸುತ್ತಿಲ್ಲ

ರ‍್ಯಾಪಿಡ್ ಟೆಸ್ವ್‌ನಲ್ಲಿ ಪಾಸಿಟಿವ್‌ ಬಂದರೆ ಏನು ಮಾಡಬೇಕು ಎನ್ನುವುದಕ್ಕೆ ಯಾವುದೇ ಸ್ಪಷ್ಟ ನಿರ್ದೇಶನ ಇಲ್ಲ. ಈ ಬಗ್ಗೆ ಗೊಂದಲ ಪರಿಹರಿಸಿಕೊಳ್ಳಲು ಕೆಪಿಎಸ್‌ಸಿಗೆ ಇ-ಮೇಲ್‌, ಫೋನ್‌ ಮಾಡಿದರೂ ಸಮರ್ಪಕವಾಗಿ ಉತ್ತರಿಸುತ್ತಿಲ್ಲ ಎನ್ನುತ್ತಾರೆ ಅಭ್ಯರ್ಥಿಗಳು.

ನೇಮಕ ಪ್ರಕ್ರಿಯೆಗೆ ಕಾಲಮಿತಿಯೇ ಇಲ್ಲ, ಸರಕಾರದ ತಪ್ಪಿನಿಂದ ವಿಳಂಬ ಗತಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ