ಆ್ಯಪ್ನಗರ

ಕೊರೊನಾ ಲಾಕ್ ಡೌನ್ ಎಫೆಕ್ಟ್: ಗದಗದಲ್ಲಿ ಮೆಣಸಿನಕಾಯಿ ಬೆಳೆ ನಾಶ ಮಾಡಿ ಕುರಿ ಮೇಯಿಸಿದ ರೈತ

ಕೊರೊನಾ ನಿಯಂತ್ರಣಕ್ಕೆ ಹೇರಿರುವ ಲಾಕ್ ಡೌನ್ ನಿಂದಾಗಿ ರೈತರು ತಾವು ಬೆಳೆದ ಬೆಳೆಗೆ ಸಕಾಲದಲ್ಲಿ ಔಷಧ ಸಿಗದೆ ಮತ್ತು ಫಸಲು ಮಾರಾಟ ವ್ಯವಸ್ಥೆ ಇಲ್ಲದೆ ಪರಿತಪಿಸುತ್ತಿದ್ದಾರೆ.

Vijaya Karnataka Web 19 May 2020, 7:28 am
ಗದಗ: ಹೊಲದಲ್ಲಿ ಬೆಳೆದ ಗಿಡ್ಡ ಮೆಣಸಿನಕಾಯಿಗೆ ತಗುಲಿದ ಮುರುಟು ರೋಗಕ್ಕೆ ಸಕಾಲದಲ್ಲಿ ಔಷಧ ಸಿಗದೆ ಮತ್ತು ಫಸಲು ಮಾರಾಟ ವ್ಯವಸ್ಥೆ ಇಲ್ಲದೆ ಕಂಗಾಲಾದ ರೈತರೊಬ್ಬರು ಮೆಣಸಿನಕಾಯಿಯನ್ನು ನಾಶಪಡಿಸಿದ್ದಾರೆ.
Vijaya Karnataka Web chilli


ರೈತ ಬಸವರಾಜ ಪರಪ್ಪ ಕುಂಬಾರ ತಮ್ಮ 2 ಎಕರೆ ಜಮೀನಿನಲ್ಲಿ ಗಿಡ್ಡಮೆಣಸಿನಕಾಯಿ ಬೆಳೆದಿದ್ದರು. ಲಾಕ್‌ಡೌನ್‌ ಸಮಸ್ಯೆಯಿಂದ ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗಲಿಲ್ಲ. ಅಲ್ಲದೇ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೂಕ್ತ ಔಷಧ ದೊರೆಯದೆ ಬೆಳೆಯನ್ನು ನಾಶಪಡಿಸಿ ಮೇಯಲು ಕುರಿ ಹಿಂಡು ಬಿಟ್ಟಿದ್ದಾರೆ.

ಈ ಬಗ್ಗೆ ರೋಣ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಂ. ತಾಂಬೂಟಿ ಪ್ರತಿಕ್ರಿಯಿಸಿ, ''ಲಾಕ್‌ಡೌನ್‌ನಿಂದ ತಾಲೂಕಿನ ರೈತರ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ತೊಂದರೆ ಅನುಭವಿಸಿದ್ದಾರೆ. ಇದಕ್ಕಾಗಿ ಕೋವಿಡ್‌-19 ಪರಿಹಾರ ಯೋಜನೆಯಡಿಯಲ್ಲಿ ರೈತರಿಗೆ ಪರಿಹಾರ ಒದಗಿಸಲಾಗುತ್ತದೆ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ