ಆ್ಯಪ್ನಗರ

ಸ್ವಚ್ಚತೆ,ಆರೋಗ್ಯ ಅರಿವು ಮೂಡಿಸಿ: ಹರೀಶ

ರೋಣ : ಆರೋಗ್ಯ ಮತ್ತು ಸ್ವಚ್ಚತೆ, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ಬಳಕೆ ಮೊದಲಾದ ಮೂಲ ವಿಷಯ ಕುರಿತು ಗ್ರಾಮೀಣ ಕೂಟದ ಸದಸ್ಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿಯೊಂದು ಮನೆಗೂ ತೆರಳಿ ಕುಡಿಯುವ ನೀರಿನ ಬಳಕೆ ಮತ್ತು ಶೌಚಾಲಯದ ನಿರ್ಮಾಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸಾಮಾಜಿಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ನವ್ಯ ದಿಶಾ ಸಂಸ್ಥೆಯ ವಲಯ ವ್ಯವಸ್ಥಾಪಕ ಹರೀಶ ಹೇಳಿದರು

Vijaya Karnataka 4 Aug 2019, 5:00 am
ರೋಣ : ಆರೋಗ್ಯ ಮತ್ತು ಸ್ವಚ್ಚತೆ, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ಬಳಕೆ ಮೊದಲಾದ ಮೂಲ ವಿಷಯ ಕುರಿತು ಗ್ರಾಮೀಣ ಕೂಟದ ಸದಸ್ಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿಯೊಂದು ಮನೆಗೂ ತೆರಳಿ ಕುಡಿಯುವ ನೀರಿನ ಬಳಕೆ ಮತ್ತು ಶೌಚಾಲಯದ ನಿರ್ಮಾಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸಾಮಾಜಿಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ನವ್ಯ ದಿಶಾ ಸಂಸ್ಥೆಯ ವಲಯ ವ್ಯವಸ್ಥಾಪಕ ಹರೀಶ ಹೇಳಿದರು
Vijaya Karnataka Web GDG-3 RON 6A
ನವ್ಯದಿಶಾ ಸೇವಾ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು.


ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಗ್ರಾಮೀಣ ಕೂಟ ಕಿರು ಹಣಕಾಸು ಗುಂಪು ಮತ್ತು ನವ್ಯದಿಶಾ ಸೇವಾ ಸಂಸ್ಥೆ ಶನಿವಾರ ಆಯೋಜಿಸಿದ್ದ ಕುಡಿಯುವ ನೀರು, ಶೌಚಾಲಯ, ನೈರ್ಮಲ್ಯ ಹಾಗೂ ಹಣಕಾಸು ಸಾಕ್ಷ ರತೆ ಕುರಿತ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು

ಹಣಕಾಸಿನ ಸಾಕ್ಷ ರತೆ, ಆರೋಗ್ಯ, ಪೌಷ್ಠಿಕತೆ, ಏಡ್ಸ್‌ ಜಾಗೃತಿ, ವಿಮೆ, ಉಳಿತಾಯ, ನಿವೃತ್ತಿ ವೇತನ ಹಾಗೂ ಸರಕಾರದಿಂದ ಘೊಷಣೆಯಾದ ಸಾಮಾಜಿಕ ಸುರಕ್ಷಾ ಯೋಜನೆ ಕುರಿತು ಮಾಹಿತಿ ನೀಡಲಾಗುತ್ತಿದೆ. ದೇಶದ ಎಲ್ಲಾ ವರ್ಗದ ಜನರು ಶೌಚಾಲಯ ಬಳಸಿ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ ಎಂಬ ಶೀರ್ಷಿಕೆಯಡಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು

ಸಂಸ್ಥೆಯ ಅಭಿವೃದ್ದಿ ಅಧಿಕಾರಿ ರಾಘವೇಂದ್ರ ಕೊಪ್ಪಳ ಮಾತನಾಡಿದರು

ಇದೇ ಸಂದರ್ಭದಲ್ಲಿ ಸಂಸ್ಥೆ ವತಿಯಿಂದ ಬಯಲು ಮಲ ವಿಸರ್ಜನೆ ತಪ್ಪಿಸುವ ಪರಿಹಾರ ಮಾರ್ಗಗಳ ವಿವರಣೆ ಮತ್ತು ಚಿತ್ರ ಪ್ರದರ್ಶನ, ಶುದ್ಧ ಕುಡಿಯುವ ನೀರು ಹಾಗೂ ಕೈತೊಳೆಯುವ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ, ಆರ್ಥಿಕ ಸಾಕ್ಷ ರತೆ ಕುರಿತು ವಿಚಾರ ಮಂಡನೆ ಹಾಗೂ ಚಿತ್ರ ಪ್ರದರ್ಶನ, ಶೌಚಾಲಯ ಪ್ರಾಮುಖ್ಯತೆಯ ಅಭಿಯಾನ, ಶೌಚ ವಿಲೇವಾರಿ ಹಾಗೂ ಖರ್ಚು ರಹಿತ ಶೌಚಾಲಯ ನಿರ್ಮಾಣ ವಿಧಾನ, ನೈರ್ಮಲ್ಯ ವಿಚಾರವಾಗಿ ಸಮೂಹ ಜಾಗೃತಿ, ಸ್ವಚ್ಚ ಭಾರತ ಅಭಿಯಾನ, ನೀರು ಮತ್ತು ನೈರ್ಮಲ್ಯ ಕುರಿತು ಚಿತ್ರ ಪ್ರದರ್ಶನ, ನಾಟಕ ಬಿತ್ತರಿಸಲಾಯಿತು.

ಆರೋಗ್ಯ ಶಿಕ್ಷ ಣಾಧಿಕಾರಿ ಕೆ.ಎ.ಹಾದಿಮನಿ, ಡಾ.ಬಿ.ಆರ್‌.ಪಾಟೀಲ, ರೇಷ್ಮಾ ದೇಸಾಯಿ, ಬಸನಗೌಡ ಸಿ, ತಾಜುದ್ದಿನ್‌ ಎಚ್‌, ಸ್ವಾತಿ ಬೆಳಗಾಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪೋಟೋ ಃ 3 ರೋಣ 6 ರೋಣ ಸಾಯಿ ಕಲ್ಯಾಣ ಮಂಟಪದಲ್ಲಿ ಗ್ರಾಮೀಣ ಕೂಟ ಕಿರು ಹಣಕಾಸು ಗುಂಪು ಮತ್ತು ನವ್ಯದಿಶಾ ಸೇವಾ ಸಂಸ್ಥೆ ಆಯೋಜಿಸಿದ್ದ ಕುಡಿಯುವ ನೀರು,ಶೌಚಾಲಯ, ನೈರ್ಮಲ್ಯ ಹಾಗೂ ಹಣಕಾಸು ಸಾಕ್ಷ ರತೆ ಕುರಿತ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ