ಆ್ಯಪ್ನಗರ

ಗುರು-ಹಿರಿಯರನ್ನು ಗೌರವಿಸುವ ಸಂಸ್ಕೃತಿ ಬೆಳೆಸಿ

ಲಕ್ಷ್ಮೇಶ್ವರ : ಅನೇಕ ಮಹನೀಯರು ತ್ಯಾಗ, ಬಲಿದಾನ ಹಾಗೂ ಹೋರಾಟ ಮಾಡಿರುವ ಪ್ರತಿಫಲವಾಗಿ ನಮಗೆ ಸ್ವಾತಂತ್ರ್ಯ ದೊರೆತಿದೆ ಎಂದು ತಹಸೀಲ್ದಾರ ಭ್ರಮರಾಂಬಿಕಾ ಗುಬ್ಬಿಶೆಟ್ಟಿ ಹೇಳಿದರು.

Vijaya Karnataka 16 Aug 2019, 5:13 pm
ಲಕ್ಷ್ಮೇಶ್ವರ : ಅನೇಕ ಮಹನೀಯರು ತ್ಯಾಗ, ಬಲಿದಾನ ಹಾಗೂ ಹೋರಾಟ ಮಾಡಿರುವ ಪ್ರತಿಫಲವಾಗಿ ನಮಗೆ ಸ್ವಾತಂತ್ರ್ಯ ದೊರೆತಿದೆ ಎಂದು ತಹಸೀಲ್ದಾರ ಭ್ರಮರಾಂಬಿಕಾ ಗುಬ್ಬಿಶೆಟ್ಟಿ ಹೇಳಿದರು.
Vijaya Karnataka Web GDG-15LXR02


ಪಟ್ಟಣದ ಉಮಾ ವಿದ್ಯಾಲಯ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಮದ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಮಕ್ಕಳಲ್ಲಿ ದೇಶಭಕ್ತಿ ತುಂಬಿ ಗುರು-ಹಿರಿಯರನ್ನು ಗೌರವಿಸುವ ಸಂಸ್ಕೃತಿ ಬೆಳೆಸಬೇಕು. ಅವರಿಗೆ ಉತ್ತಮ ಶಿಕ್ಷ ಣ ನೀಡಿ ಸತ್ಪ್ರಜೆಗಳನ್ನಾಗಿ ಬೆಳೆಸಬೇಕು. ದೇಶ ಕಾಯುವ ಸೈನಿಕ ಹಾಗೂ ರೈತ ದೇಶದ ಬೆನ್ನೆಲುಬಾಗಿದ್ದು, ಅವರನ್ನು ಗೌರವದಿಂದ ಕಾಣಬೇಕು ಎಂದರು.

ಧ್ವಜಾರೋಹಣ ಮುಗಿದ ಮೇಲೆ ಪಿಎಸ್‌ಐ ವಿಶ್ವನಾಥ ಚೌಗಲೆ ನೇತೃತ್ವದಲ್ಲಿ ಹಾಗೂ ಪಟ್ಟಣದ ಶಾಲಾ-ಕಾಲೇಜು, ಎನ್‌.ಸಿ.ಸಿ ವಿದ್ಯಾರ್ಥಿಗಳಿಂದ ಪರೇಡ್‌ ನಡೆಯಿತು.

ಪಶು ವೈದ್ಯಾಧಿಕಾರಿ ಎಂ.ಎನ್‌.ಹವಳದ ಅಧ್ಯಕ್ಷ ತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಜಿ.ಆರ್‌.ಕೊಪ್ಪದ, ಪಿಎಸ್‌ಐ ವಿಶ್ವನಾಥ ಚೌಗಲೆ, ಎಂ.ಡಿ.ದಾಸಪ್ಪನವರ, ಎನ್‌.ಎ.ಲಕ್ಕುಂಡಿ, ಸುಬ್ಬರಾವ್‌ಭಟ್‌, ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟಿ, ಬಸವರಾಜ ಭೋವಿ, ಜಯಶ್ರೀ ಹೊಸಮನಿ, ರಾಜು ಕುಂಬಿ, ಮಹೇಶ ಹೊಗೆಸೊಪ್ಪಿನ, ಬಸವರಾಜ ಓದುನವರ, ಯಲ್ಲವ್ವ ದುರಗಣ್ಣವರ, ಶಾಲಾ-ಕಾಲೇಜು ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ