ಆ್ಯಪ್ನಗರ

ಶಾಮಿಯಾನ ಉದ್ಯೋಗಿಗಳಿಗೆ ಹಾನಿ

ಲಕ್ಕುಂಡಿ: ಕಳೆದ ಶನಿವಾರ ಮತ್ತು ಭಾನುವಾರ ಗದಗ ನಗರಸಭೆಯು 54 ವಕಾರ ಸಾಲುಗಳನ್ನು ತೆರವು ಗೊಳಿಸಿದ್ದರಿಂದ ಹಲವು ವರ್ಷಗಳಿಂದ ಶಾಮಿಯಾನ ಉದ್ಯೋಗ ನಿರ್ವಹಣೆ ಮಾಡಿಕೊಂಡು ಬಂದಿದ್ದ 26 ಶಾಮಿಯಾನ ಉದ್ಯೋಗಿಗಳಿಗೆ ಲಕ್ಷಾಂತರ ಹಾನಿಯಾಗಿದೆ ಎಂದು ಗದಗ ಜಿಲ್ಲಾ ಶಾಮಿಯಾನ ಸಪ್ಲಾಯರ್ಸ್‌ ಸಂಘದ ಮಾಜಿ ಕಾರ್ಯದರ್ಶಿ ಸಂಗಮೇಶ ತಿಮ್ಮಾಪೂರ ಕಳವಳ ವ್ಯಕ್ತಪಡಿಸಿದ್ದಾರೆ.

Vijaya Karnataka 18 Jul 2019, 5:00 am
ಲಕ್ಕುಂಡಿ: ಕಳೆದ ಶನಿವಾರ ಮತ್ತು ಭಾನುವಾರ ಗದಗ ನಗರಸಭೆಯು 54 ವಕಾರ ಸಾಲುಗಳನ್ನು ತೆರವು ಗೊಳಿಸಿದ್ದರಿಂದ ಹಲವು ವರ್ಷಗಳಿಂದ ಶಾಮಿಯಾನ ಉದ್ಯೋಗ ನಿರ್ವಹಣೆ ಮಾಡಿಕೊಂಡು ಬಂದಿದ್ದ 26 ಶಾಮಿಯಾನ ಉದ್ಯೋಗಿಗಳಿಗೆ ಲಕ್ಷಾಂತರ ಹಾನಿಯಾಗಿದೆ ಎಂದು ಗದಗ ಜಿಲ್ಲಾ ಶಾಮಿಯಾನ ಸಪ್ಲಾಯರ್ಸ್‌ ಸಂಘದ ಮಾಜಿ ಕಾರ್ಯದರ್ಶಿ ಸಂಗಮೇಶ ತಿಮ್ಮಾಪೂರ ಕಳವಳ ವ್ಯಕ್ತಪಡಿಸಿದ್ದಾರೆ.
Vijaya Karnataka Web damage to shamiana employees
ಶಾಮಿಯಾನ ಉದ್ಯೋಗಿಗಳಿಗೆ ಹಾನಿ


ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಗದಗ ನಗರಸಭೆಯ ದುರಾಡಳಿತದಿಂದಲೊ ಅಥವಾ ಬಾಡಿಗೆ ನೀಡಿದ ಮಾಲೀಕರ ಬೇಜವಾಬ್ದಾರಿತನದಿಂದಲೋ ಇಂದು ಶಾಮಿಯಾನ ಮಾಲೀಕರ ಬದುಕು ಬೀದಿಗೆ ಬಂದಿದೆ. ಜಿಸಿಬಿಯಿಂದ ವಕಾರ ಸಾಲಿನಲ್ಲಿ ಇದ್ದ ಶಾಮಿಯಾನ ಅಂಗಡಿಗಳಲಿದ್ದ ನೂರಾರು ಸಾಮಿಗ್ರಿಗಳು ಹಾನಿಯಾಗಿವೆ. ಅವರ ಮುಂದಿನ ದುಡಿಮೆಗೆ ತೊಂದರೆಯಾಗಿದೆ. ಈಗ ತರಾತುರಿಯಲ್ಲಿ ಜಾಗ ಸಿಗದೆ ಪರದಾಡುತ್ತಿದ್ದಾರೆ. ಆದ್ದರಿಂದ ಸರಕಾರವು ಬಾಡಿಗೆ ಕೊಟ್ಟ ಮಾಲೀಕರಿಂದ ಶಾಮಿಯಾನ ಉದ್ಯೋಗಿಗಳ ನಷ್ಟ ತುಂಬಿಸಿಕೊಡಬೇಕೆಂದು ಸಂಗಮೇಶ ತಿಮ್ಮಾಪೂರ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ