ಆ್ಯಪ್ನಗರ

ಕಿತ್ತು ಹೋದ ಡಾಂಬರ್‌ : ಕಾಣದ ದುರಸ್ತಿ

ನರಗುಂದ: ಹುಬ್ಬಳ್ಳಿ ವಿಜಯಪುರ ಹೆದ್ದಾರಿಗೆ ಹೊಂದಿರುವ ಎಪಿಎಂಸಿ ದ್ವಾರಬಾಗಿಲು ಮುಂದಿನ ಚೆನ್ನಮ್ಮ ಸರ್ಕಲ್‌ನಲ್ಲಿತಿಂಗಳಿಂದ ಗುಂಡಿ ಬಿದ್ದು ಮಳೆ ನೀರು ನಿಂತು ಅಪಾಯದ ಸ್ಥಿತಿ ನಿರ್ಮಾಣವಾದರೂ ಸಂಬಂಧ ಪಟ್ಟ ಅಧಿಕಾರಿಗಳು ನೋಡಿಯೂ ನೊಡದಂತೆ ಇದ್ದು ವಾಹನ ಸವಾರರು ಜೀವ ಕೈಯಲ್ಲಿಹಿಡಿದುಕೊಂಡು ಸಂಚರಿಸುವಂತಾಗಿದೆ.

Vijaya Karnataka 15 Jul 2020, 5:00 am
ನರಗುಂದ: ಹುಬ್ಬಳ್ಳಿ ವಿಜಯಪುರ ಹೆದ್ದಾರಿಗೆ ಹೊಂದಿರುವ ಎಪಿಎಂಸಿ ದ್ವಾರಬಾಗಿಲು ಮುಂದಿನ ಚೆನ್ನಮ್ಮ ಸರ್ಕಲ್‌ನಲ್ಲಿತಿಂಗಳಿಂದ ಗುಂಡಿ ಬಿದ್ದು ಮಳೆ ನೀರು ನಿಂತು ಅಪಾಯದ ಸ್ಥಿತಿ ನಿರ್ಮಾಣವಾದರೂ ಸಂಬಂಧ ಪಟ್ಟ ಅಧಿಕಾರಿಗಳು ನೋಡಿಯೂ ನೊಡದಂತೆ ಇದ್ದು ವಾಹನ ಸವಾರರು ಜೀವ ಕೈಯಲ್ಲಿಹಿಡಿದುಕೊಂಡು ಸಂಚರಿಸುವಂತಾಗಿದೆ.
Vijaya Karnataka Web 14NRD1A_25
ನರಗುಂದ ಹೆದ್ದಾರಿಗೆ ಹೊಂದಿರುವ ಎಪಿಎಂಸಿ ದ್ವಾರಬಾಗಿಲು ಮುಂದೆ ಬಿದ್ದ ಗುಂಡಿ.


ಬೆಳಗಾವಿ, ಗೋಕಾಕಕ್ಕೆ ತೆರಳುವ ಭಾರಿ ವಾಹನಗಳು ಗದಗ ಒಳ ರಸ್ತೆಯಿಂದ ನರಗುಂದ ಮೂಲಕ ಹಾದು ಹೊಗುತ್ತವೆ. ಚೆನ್ನಮ್ಮ ಸರ್ಕಲ್‌ಗೆ ಬಂದು ಹೆದ್ದಾರಿಗೆ ಸೇರುವ ಸಂದರ್ಭದಲ್ಲಿಸರ್ಕಲ್‌ನಲ್ಲಿನೀರು ತುಂಬಿದ ಗುಂಡಿಯ ಆಳ ಅರಿಯದೆ ಬೈಕ್‌ ಸವಾರರು ಬಿದ್ದು ಎದ್ದು ಹೋಗುವ ಸ್ಥಿತಿ ನಿರ್ಮಾಣವಾಗಿದ್ದರೂ ಅಧಿಕಾರಿಗಳು ದುರಸ್ತಿಗೆ ಮುಂದಾಗಿಲ್ಲ. ಇದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.

ಒಂದು ಕಡೆ ರಾಷ್ಟ್ರೀಯ ಹೆದ್ದಾರಿ ಅಪೂರ್ಣಗೊಂಡಿದ್ದು, ಹೆದ್ದಾರಿ ಅಕ್ಕಪಕ್ಕ ಪುಟ್‌ಪಾತ ಅಪೂರ್ಣಗೊಂಡಿದ್ದರಿಂದ ಮಳೆ ನೀರು ನಿಂತು ಅಪಾಯ ತಂದು ಒಡ್ಡಿದ್ದರೆ ಇನ್ನೊಂದು ಕಡೆ ಚೆನ್ನಮ್ಮ ಸರ್ಕಲ್‌ನಲ್ಲಿಭಾರಿ ವಾಹನಗಳ ಸಂಚಾರದಿಂದ ಡಾಂಬರ್‌ ಕಿತ್ತು ಮೇಲಿಂದ ಮೇಲೆ ಗುಂಡಿಗಳು ಬಿದ್ದು ಅಪಾಯಕ್ಕೆ ಕಾರಣವಾಗುತ್ತಿದೆ.

ಬಿದ್ದ ಗುಂಡಿ ಮುಚ್ಚಲು ಪುರಸಭೆ ಹಾಳು ಮಣ್ಣು ಹಾಕಿ ಕೈ ಬಿಟ್ಟಿದ್ದಾರೆ. ಮಣ್ಣಿನಲ್ಲಿಬಿದ್ದ ಭಾರಿ ಕಲ್ಲುಗಳು ವಾಹನ ಸವಾರರಿಗೆ ತೊಂದರೆ ಉಂಟಾಗಿದೆ. ಹೆದ್ದಾರಿ ನಿಗಮದ ಅಧಿಕಾರಿಗಳು, ಸಂಬಂಧ ಪಟ್ಟ ಅಧಿಕಾರಿಗಳು ಚೆನ್ನಮ್ಮ ಸರ್ಕಲ್‌ನಲ್ಲಿಬಿದ್ದ ಗುಂಡಿಗಳನ್ನು ಮುಚ್ಚಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು, ವಾಹನ ಸವಾರರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ