ಮುಂಡರಗಿ : ಹಲವು ವರ್ಷಗಳ ಹಿಂದೆ ಮಾಡಿಸಿದ್ದ ಆಧಾರ್ ಕಾರ್ಡ್ಗಳು ಈಗ ಅಪಡೇಟ್ ಆಗಬೇಕಾಗಿದೆ. ಕೆಲವರು ಅಪಡೇಟ್ ಮಾಡಿಸದ ಕಾರಣ ಮತ್ತು ವಿದ್ಯಾರ್ಥಿಗಳಿಗಂತೂ ಕಡ್ಡಾಯವಾಗಿ ಅಪಡೇಟ್ ಆಗಿರಲೇಬೇಕು. ಹೀಗಾಗಿ ಜೂನ್ನಲ್ಲಿ ಶಾಲೆ ಆರಂಭದ ಈ ದಿನಗಳಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಹೊಸದಾಗಿ ಆಧಾರ್ ಕಾರ್ಡ್ ಮಾಡಿಸಲು, ತಿದ್ದುಪಡಿಗೆ ತಹಸೀಲ್ದಾರ ಕಚೇರಿಗೆ ಮುಗಿಬಿದ್ದಿದ್ದಾರೆ.
ಆದರೆ ಆಧಾರ್ ಕಾರ್ಡ್ ಮಾಡಿಸಿಕೊಡಲು ಸರಕಾರದಿಂದ ಏಜೆನ್ಸಿ ಪಡೆದವರು ಸಮರ್ಪಕ ಕಾರ್ಯನಿರ್ವಹಿಸದ ಕಾರಣ ಈಗ ತಹಸೀಲ್ದಾರ ಕಚೇರಿ ಗಿಜಿ ಗಿಜಿ ಎನ್ನುತ್ತಿದೆ. ಆಧಾರ್ ತಿದ್ದುಪಡಿ ಅಪಡೇಟ್ಗೆ ಒಂದು ದಿನ ಮೊದಲೇ ಸರದಿಯಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಲವು ಕಾಲೇಜುಗಳಲ್ಲಿ ಪ್ರವೇಶ ಕೊನೆ ದಿನಾಂಕ ಹತ್ತಿರ ಬರುತ್ತಿದ್ದು ಪ್ರವೇಶ ದೊರೆಯಲಾರದ ಆತಂಕ ಇನ್ನೊಂದೆಡೆ ವಿವಿಧ ಯೋಜನೆ ಪಡೆಯಲು ಅಪಡೇಟ್ ಇಲ್ಲದ ಆಧಾರ್ ಕಾರ್ಡ್ನಿಂದ ಸೌಲಭ್ಯಗಳಿಂದ ವಂಚಿತವಾಗುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಪ್ಪಿಸಿಕೊಳ್ಳಲು ಸಾರ್ವಜನಿಕರು ಎಷ್ಟೆ ಪ್ರಯತ್ನ ಮಾಡಿ ಆಧಾರ್ ಕಾರ್ಡ್ಗೆ ಸರದಿಯಲ್ಲಿ ನಿಂತರೂ ಪ್ರಯೋಜನಕ್ಕೆ ಬಾರದಂತಾಗಿದೆ. ಕಾರಣ ಆನ್ಲೈನ್ನಲ್ಲಿಯೇ ಅಪಡೇಟ್ ಮಾಡುವುದರಿಂದ ಇಂಟರ್ನೆಟ್ ಸರ್ವರ್ ಸಮಸ್ಯೆ ಜತೆಗೆ ಮುಖ್ಯವಾಗಿ ಆಧಾರ್ ಕಾರ್ಡ್ ಮಾಡುವ ತಿದ್ದುಪಡಿಯ ಕಂಪ್ಯೂಟರ್ ಮೇಲಿಂದ ಮೇಲೆ ಕೈಕೊಡುತ್ತಿರುವುದರಿಂದ ತಾಲೂಕಿನ ಸಾರ್ವಜನಿಕರು ರೋಸಿ ಹೋಗಿದ್ದಾರೆ.
ಸರಕಾರಿ ಏಜೆನ್ಸಿಗಳಿಗೆ ಗುತ್ತಿಗೆ ನೀಡಿದ ಕಾರಣ ಯಾರೂ ಕೇಳದ ಪರಿಸ್ಥಿತಿ ಉಂಟಾಗಿದೆ. ಆಧಾರ್ ಕಾರ್ಡ್ನಲ್ಲಿ ಏನಾದರೂ ತಿದ್ದುಪಡಿ ಮಾಡಿಸಿದರೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಪದೇ ಪದೇ ತಪ್ಪುಗಳಾಗುತ್ತಿವೆ. ವಯಸ್ಸಿನ ತಿದ್ದುಪಡಿಯಲ್ಲಿ ಇಸ್ವಿ ಮಾತ್ರ ನಮೂದು ಮಾಡಲಾಗುತ್ತದೆ. ಅದರ ಬದಲಾಗಿ ಜನ್ಮದಿನಾಂಕ, ತಿಂಗಳು ಅಪಡೇಟ್ ಮಾಡದ ಕಾರಣ ಪುನಃ ತಿದ್ದುಪಡಿಗೆ ಬರಬೇಕಾಗುತ್ತದೆ. ಇಂತಹ ಸಣ್ಣ ಪುಟ್ಟ ದೋಷ ಮಾಡುವುದರಿಂದ ಸಾರ್ವಜನಿಕರು ಅದರಲ್ಲಿಯೂ ಮಹಿಳೆಯರು ಚಿಕ್ಕ ಮಕ್ಕಳನ್ನು ಬಿಟ್ಟು ಸರದಿಯಲ್ಲಿ ಕಾಯುವಂತಾಗಿದೆ. ಮೊದಲು ಪುರಸಭೆಯಲ್ಲಿ ಮತ್ತು ಎಸ್ಬಿಐ ಬ್ಯಾಂಕಿನಲ್ಲಿ ಆಧಾರ್ ಕಾರ್ಡ್ ವ್ಯವಸ್ಥೆ ಇತ್ತು. ಸಧ್ಯ ಸ್ಥಗಿತಗೊಂಡಿದೆ. ಈ ಬಗ್ಗೆ ತಹಸೀಲ್ದಾರರ ಬಳಿ ಸಾರ್ವಜನಿಕರು ತಮಗಾಗುತ್ತಿರುವ ತೊಂದರೆ ಹೇಳಿಕೊಂಡಿದ್ದಾರೆ.
ತಹಸೀಲ್ದಾರ ಕಚೇರಿ ಸೇರಿದಂತೆ ಕೆವಿಜಿ ಬ್ಯಾಂಕ್ನಲ್ಲಿ ಆಧಾರ್ ಮಾಡಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ. ತಾಂತ್ರಿಕ ದೋಷದಿಂದ ಎರಡು ದಿನಗಳಿಂದ ತೊಂದರೆಯಾಗಿದೆ. ಸಂಬಂಧಪಟ್ಟ ಏಜೆನ್ಸಿಗೆ ತಿಳಿಸಲಾಗಿದೆ. ಬುಧವಾರ ತಹಸೀಲ್ದಾರ ಕಚೇರಿಯಲ್ಲಿ ಆಧಾರ್ ಕಾರ್ಯ ಆರಂಭಗೊಂಡಿದೆ. ದಿನಕ್ಕೆ 200 ಜನರು ಬರುವ ಹಿನ್ನೆಲೆಯಲ್ಲಿ ನಿಯಂತ್ರಣ ಮಾಡಲು ಸಾಧ್ಯವಾಗುವುದಿಲ್ಲ. ಆದರೂ ಸುವ್ಯವಸ್ಥೆಯಿಂದ ಮಾಡಲು ಆದೇಶಿಸಲಾಗಿದೆ ಎಂದು ತಹಸೀಲ್ದಾರ ನಾಯಕ ತಿಳಿಸಿದ್ದಾರೆ.
ಹೆಚ್ಚುವರಿ 4 ಕೇಂದ್ರಕ್ಕೆ ಪ್ರಸ್ತಾವನೆ:
ಆಧಾರ್ ಕಾರ್ಡ್ ಮಾಡಿಸುವುದು ಮತ್ತು ತಿದ್ದುಪಡಿ ಅಪಡೇಟ್ ಮಾಡಲು ವಾಸ್ತವವಾಗಿ ಆಯಾ ಗ್ರಾಪಂ ನಲ್ಲಿ ಸರಕಾರ ವ್ಯವಸ್ಥೆ ಮಾಡಬೇಕಾಗಿತ್ತು. ಸರ್ವರ್, ಕಂಪ್ಯೂಟರ್ ವ್ಯವಸ್ಥೆ, ಆಪರೇಟರ್ ಕೊರತೆ ಹೀಗೆ ಸರಿಯಾಗಿ ನಿರ್ವಹಣೆ ಇಲ್ಲದ ಕಾರಣ ತಹಸೀಲ್ದಾರ ಕಚೇರಿ, ಕೆವಿಜಿ ಬ್ಯಾಂಕ್ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಇವು ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ತಹಸೀಲ್ದಾರರು ಇನ್ನು ನಾಲ್ಕು ಕೇಂದ್ರಗಳ ಅವಶ್ಯಕತೆ ಕುರಿತು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಕಳಿಸಿದ್ದಾರೆ. ಪಟ್ಟಣದ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ, ಪುರಸಭೆ ಮುಖ್ಯಾಧಿಕಾರಿ ಕಚೇರಿ, ಶಿಕ್ಷ ಣ ಇಲಾಖೆಯಲ್ಲಿ(ಬಿಇಒ ಕಚೇರಿ), ಕೃಷಿ ಇಲಾಖೆಯಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಅಪಡೇಟ್ ಮಾಡುವ ಕೇಂದ್ರಗಳು ಕಾರ್ಯನಿರ್ವಹಿಸಿದರೆ ಮಾತ್ರ ಸಾರ್ವಜನಿಕರ ಓಡಾಟ ಮತ್ತು ತೊಂದರೆ ತಪ್ಪುತ್ತದೆ. ಈ ಬಗ್ಗೆ ತಾಲೂಕು ಆಡಳಿತ ಅನೇಕ ಬಾರಿ ಗಮನ ತಂದರೂ ಜಿಲ್ಲಾಡಳಿತ ಮೌನ ವಹಿಸಿದೆ.
ಆದರೆ ಆಧಾರ್ ಕಾರ್ಡ್ ಮಾಡಿಸಿಕೊಡಲು ಸರಕಾರದಿಂದ ಏಜೆನ್ಸಿ ಪಡೆದವರು ಸಮರ್ಪಕ ಕಾರ್ಯನಿರ್ವಹಿಸದ ಕಾರಣ ಈಗ ತಹಸೀಲ್ದಾರ ಕಚೇರಿ ಗಿಜಿ ಗಿಜಿ ಎನ್ನುತ್ತಿದೆ. ಆಧಾರ್ ತಿದ್ದುಪಡಿ ಅಪಡೇಟ್ಗೆ ಒಂದು ದಿನ ಮೊದಲೇ ಸರದಿಯಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಲವು ಕಾಲೇಜುಗಳಲ್ಲಿ ಪ್ರವೇಶ ಕೊನೆ ದಿನಾಂಕ ಹತ್ತಿರ ಬರುತ್ತಿದ್ದು ಪ್ರವೇಶ ದೊರೆಯಲಾರದ ಆತಂಕ ಇನ್ನೊಂದೆಡೆ ವಿವಿಧ ಯೋಜನೆ ಪಡೆಯಲು ಅಪಡೇಟ್ ಇಲ್ಲದ ಆಧಾರ್ ಕಾರ್ಡ್ನಿಂದ ಸೌಲಭ್ಯಗಳಿಂದ ವಂಚಿತವಾಗುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಪ್ಪಿಸಿಕೊಳ್ಳಲು ಸಾರ್ವಜನಿಕರು ಎಷ್ಟೆ ಪ್ರಯತ್ನ ಮಾಡಿ ಆಧಾರ್ ಕಾರ್ಡ್ಗೆ ಸರದಿಯಲ್ಲಿ ನಿಂತರೂ ಪ್ರಯೋಜನಕ್ಕೆ ಬಾರದಂತಾಗಿದೆ. ಕಾರಣ ಆನ್ಲೈನ್ನಲ್ಲಿಯೇ ಅಪಡೇಟ್ ಮಾಡುವುದರಿಂದ ಇಂಟರ್ನೆಟ್ ಸರ್ವರ್ ಸಮಸ್ಯೆ ಜತೆಗೆ ಮುಖ್ಯವಾಗಿ ಆಧಾರ್ ಕಾರ್ಡ್ ಮಾಡುವ ತಿದ್ದುಪಡಿಯ ಕಂಪ್ಯೂಟರ್ ಮೇಲಿಂದ ಮೇಲೆ ಕೈಕೊಡುತ್ತಿರುವುದರಿಂದ ತಾಲೂಕಿನ ಸಾರ್ವಜನಿಕರು ರೋಸಿ ಹೋಗಿದ್ದಾರೆ.
ಸರಕಾರಿ ಏಜೆನ್ಸಿಗಳಿಗೆ ಗುತ್ತಿಗೆ ನೀಡಿದ ಕಾರಣ ಯಾರೂ ಕೇಳದ ಪರಿಸ್ಥಿತಿ ಉಂಟಾಗಿದೆ. ಆಧಾರ್ ಕಾರ್ಡ್ನಲ್ಲಿ ಏನಾದರೂ ತಿದ್ದುಪಡಿ ಮಾಡಿಸಿದರೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಪದೇ ಪದೇ ತಪ್ಪುಗಳಾಗುತ್ತಿವೆ. ವಯಸ್ಸಿನ ತಿದ್ದುಪಡಿಯಲ್ಲಿ ಇಸ್ವಿ ಮಾತ್ರ ನಮೂದು ಮಾಡಲಾಗುತ್ತದೆ. ಅದರ ಬದಲಾಗಿ ಜನ್ಮದಿನಾಂಕ, ತಿಂಗಳು ಅಪಡೇಟ್ ಮಾಡದ ಕಾರಣ ಪುನಃ ತಿದ್ದುಪಡಿಗೆ ಬರಬೇಕಾಗುತ್ತದೆ. ಇಂತಹ ಸಣ್ಣ ಪುಟ್ಟ ದೋಷ ಮಾಡುವುದರಿಂದ ಸಾರ್ವಜನಿಕರು ಅದರಲ್ಲಿಯೂ ಮಹಿಳೆಯರು ಚಿಕ್ಕ ಮಕ್ಕಳನ್ನು ಬಿಟ್ಟು ಸರದಿಯಲ್ಲಿ ಕಾಯುವಂತಾಗಿದೆ. ಮೊದಲು ಪುರಸಭೆಯಲ್ಲಿ ಮತ್ತು ಎಸ್ಬಿಐ ಬ್ಯಾಂಕಿನಲ್ಲಿ ಆಧಾರ್ ಕಾರ್ಡ್ ವ್ಯವಸ್ಥೆ ಇತ್ತು. ಸಧ್ಯ ಸ್ಥಗಿತಗೊಂಡಿದೆ. ಈ ಬಗ್ಗೆ ತಹಸೀಲ್ದಾರರ ಬಳಿ ಸಾರ್ವಜನಿಕರು ತಮಗಾಗುತ್ತಿರುವ ತೊಂದರೆ ಹೇಳಿಕೊಂಡಿದ್ದಾರೆ.
ತಹಸೀಲ್ದಾರ ಕಚೇರಿ ಸೇರಿದಂತೆ ಕೆವಿಜಿ ಬ್ಯಾಂಕ್ನಲ್ಲಿ ಆಧಾರ್ ಮಾಡಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ. ತಾಂತ್ರಿಕ ದೋಷದಿಂದ ಎರಡು ದಿನಗಳಿಂದ ತೊಂದರೆಯಾಗಿದೆ. ಸಂಬಂಧಪಟ್ಟ ಏಜೆನ್ಸಿಗೆ ತಿಳಿಸಲಾಗಿದೆ. ಬುಧವಾರ ತಹಸೀಲ್ದಾರ ಕಚೇರಿಯಲ್ಲಿ ಆಧಾರ್ ಕಾರ್ಯ ಆರಂಭಗೊಂಡಿದೆ. ದಿನಕ್ಕೆ 200 ಜನರು ಬರುವ ಹಿನ್ನೆಲೆಯಲ್ಲಿ ನಿಯಂತ್ರಣ ಮಾಡಲು ಸಾಧ್ಯವಾಗುವುದಿಲ್ಲ. ಆದರೂ ಸುವ್ಯವಸ್ಥೆಯಿಂದ ಮಾಡಲು ಆದೇಶಿಸಲಾಗಿದೆ ಎಂದು ತಹಸೀಲ್ದಾರ ನಾಯಕ ತಿಳಿಸಿದ್ದಾರೆ.
ಹೆಚ್ಚುವರಿ 4 ಕೇಂದ್ರಕ್ಕೆ ಪ್ರಸ್ತಾವನೆ:
ಆಧಾರ್ ಕಾರ್ಡ್ ಮಾಡಿಸುವುದು ಮತ್ತು ತಿದ್ದುಪಡಿ ಅಪಡೇಟ್ ಮಾಡಲು ವಾಸ್ತವವಾಗಿ ಆಯಾ ಗ್ರಾಪಂ ನಲ್ಲಿ ಸರಕಾರ ವ್ಯವಸ್ಥೆ ಮಾಡಬೇಕಾಗಿತ್ತು. ಸರ್ವರ್, ಕಂಪ್ಯೂಟರ್ ವ್ಯವಸ್ಥೆ, ಆಪರೇಟರ್ ಕೊರತೆ ಹೀಗೆ ಸರಿಯಾಗಿ ನಿರ್ವಹಣೆ ಇಲ್ಲದ ಕಾರಣ ತಹಸೀಲ್ದಾರ ಕಚೇರಿ, ಕೆವಿಜಿ ಬ್ಯಾಂಕ್ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಇವು ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ತಹಸೀಲ್ದಾರರು ಇನ್ನು ನಾಲ್ಕು ಕೇಂದ್ರಗಳ ಅವಶ್ಯಕತೆ ಕುರಿತು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಕಳಿಸಿದ್ದಾರೆ. ಪಟ್ಟಣದ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ, ಪುರಸಭೆ ಮುಖ್ಯಾಧಿಕಾರಿ ಕಚೇರಿ, ಶಿಕ್ಷ ಣ ಇಲಾಖೆಯಲ್ಲಿ(ಬಿಇಒ ಕಚೇರಿ), ಕೃಷಿ ಇಲಾಖೆಯಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಅಪಡೇಟ್ ಮಾಡುವ ಕೇಂದ್ರಗಳು ಕಾರ್ಯನಿರ್ವಹಿಸಿದರೆ ಮಾತ್ರ ಸಾರ್ವಜನಿಕರ ಓಡಾಟ ಮತ್ತು ತೊಂದರೆ ತಪ್ಪುತ್ತದೆ. ಈ ಬಗ್ಗೆ ತಾಲೂಕು ಆಡಳಿತ ಅನೇಕ ಬಾರಿ ಗಮನ ತಂದರೂ ಜಿಲ್ಲಾಡಳಿತ ಮೌನ ವಹಿಸಿದೆ.