ಆ್ಯಪ್ನಗರ

ಲಿಖಿತ ದೂರು ಸಲ್ಲಿಸಲು ಡಿಸಿ ಸೂಚನೆ

ಗದಗ: ಖಾಸಗಿ ಟಿವಿಗಳಲ್ಲಿಪ್ರಸಾರವಾಗುವ ಸುದ್ದಿ ಅಥವಾ ಜಾಹಿರಾತು ಜನರ, ಕುಟುಂಬದ, ಸಮಾಜದ ಶಾಂತಿ ಕದಡುವಂತಿರಬಾರದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು. ಮಂಗಳವಾರ ಜಿಲ್ಲಾಮಟ್ಟದ ಕೇಬಲ್‌ ಟಿವಿ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Vijaya Karnataka 26 Feb 2020, 5:00 am
ಗದಗ: ಖಾಸಗಿ ಟಿವಿಗಳಲ್ಲಿಪ್ರಸಾರವಾಗುವ ಸುದ್ದಿ ಅಥವಾ ಜಾಹಿರಾತು ಜನರ, ಕುಟುಂಬದ, ಸಮಾಜದ ಶಾಂತಿ ಕದಡುವಂತಿರಬಾರದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು. ಮಂಗಳವಾರ ಜಿಲ್ಲಾಮಟ್ಟದ ಕೇಬಲ್‌ ಟಿವಿ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Vijaya Karnataka Web dc notice to file a written complaint
ಲಿಖಿತ ದೂರು ಸಲ್ಲಿಸಲು ಡಿಸಿ ಸೂಚನೆ


ಯಾವುದೇ ವರ್ಗದ ಭಾಷಿಕರ, ಧರ್ಮ, ಜನರ ನೆಮ್ಮದಿ ಕದಡುವ ಕಾರ್ಯಕ್ರಮ ಕೇಬಲ್‌ ಅಥವಾ ಖಾಸಗಿ ಟಿವಿಗಳು ಬಿತ್ತರಿಸುವುದನ್ನು ಕೇಬಲ್‌ ಟಿವಿ ನಿರ್ವಹಣಾ ಕಾಯ್ದೆ 1995ರ ರೀತ್ಯ ನಿಷೇಧಿಸಲಾಗಿದೆ. ಚಾನಲ್‌ದಲ್ಲಿಬರುವ ಸುದ್ದಿಗಳು ಪ್ರಚೋದನಕಾರಿಯಾಗಬಾರದು. ಗ್ರಾಹಕರು ಅಥವಾ ಸಾರ್ವಜನಿಕರು ಕೇಬಲ್‌ ಟಿವಿ ಸೇವೆಗೆ ಸಂಬಂಧಿಸಿದ ದೂರು ಲಿಖಿತವಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ದೂರು ಸಲ್ಲಿಸಬಹುದು.

ಜಿಲ್ಲಾಮಟ್ಟದ ಕೇಬಲ್‌ ಟಿವಿ ನಿರ್ವಹಣಾ ಸಮಿತಿ ರಚನೆ ಹಾಗೂ ಕುಂದುಕೊರತೆ ದಾಖಲಿಸುವ ಕುರಿತು ನಿಗದಿತ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್‌ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿಮಾಹಿತಿ ನೀಡಲು ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಮಟ್ಟದ ಕೇಬಲ್‌ ಟಿವಿ ನಿರ್ವಹಣಾ ಸಮಿತಿ ಸಭೆಯಲ್ಲಿ ಸಿಪಿಐ ಆರ್‌.ಎಫ್‌. ದೇಸಾಯಿ, ಬಾಲಾಜಿ ಖಾದಿ ಗ್ರಾಮೊದ್ಯೋಗ ಕೈಗಾರಿಕಾ ಸಂಘದ ಅಧೀಕ್ಷಕ ಎಚ್‌.ಜಿ.ಹಿರೇಗೌಡರ, ಸೇವಾ ಭಾರತಿ ಟ್ರಸ್ಟ್‌ ವಿಶೇಷಚೇತನರ ವಿಶೇಷ ಶಾಲೆಯ ಸಿ.ಬಿ. ಚನ್ನಪ್ಪನವರ, ಪ್ರಾಧ್ಯಾಪಕ ಸುರೇಶ ಎಚ್‌.ಎಸ್‌, ಪ್ರಧಾನ ಅಂಚೆ ಕಚೇರಿ ಪಾಲಕ ಸುಭಾಸ ಜಿ.ಎಂ ಹಾಗೂ ಸಮಿತಿ ಸದಸ್ಯರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ