ಆ್ಯಪ್ನಗರ

ಡೆಡ್‌ ಸಿಗ್ನಲ್‌..ಟ್ರಾಫಿಕ್‌ ಕಿರಿಕಿರಿ..!

ಗಜೇಂದ್ರಗಡ : ಶರವೇಗದಲ್ಲಿ ಬೆಳೆಯುತ್ತಿರುವ ಜಿಲ್ಲೆಯ ಮುಖ್ಯ ವಾಣಿಜ್ಯ ನಗರಿ ಖ್ಯಾತಿಯ ಪಟ್ಟಣ ತಾಲೂಕು ಕೇಂದ್ರ ಘೋಷಣೆಯಾಗಿ ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ಜನಸಂಖ್ಯೆ ಬೆಳೆದಂತೆ ಸೌಕರ‍್ಯದ ಕೊರತೆ ಇದೆ. ವಾಹನಗಳ ದಟ್ಟಣೆ ಮಿತಿಮೀರಿದೆ. ಸಂಚಾರಿ ನಿಯಮ ಗಾಳಿಗೆ ತೂರಿದ ಪರಿಣಾಮ ಹದಗೆಟ್ಟ ಸಂಚಾರಿ ವ್ಯವಸ್ಥೆ ಅಧೋಗತಿಯತ್ತ ಸಾಗಿದೆ.

Vijaya Karnataka 28 May 2019, 5:00 am
ಗಜೇಂದ್ರಗಡ : ಶರವೇಗದಲ್ಲಿ ಬೆಳೆಯುತ್ತಿರುವ ಜಿಲ್ಲೆಯ ಮುಖ್ಯ ವಾಣಿಜ್ಯ ನಗರಿ ಖ್ಯಾತಿಯ ಪಟ್ಟಣ ತಾಲೂಕು ಕೇಂದ್ರ ಘೋಷಣೆಯಾಗಿ ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ಜನಸಂಖ್ಯೆ ಬೆಳೆದಂತೆ ಸೌಕರ‍್ಯದ ಕೊರತೆ ಇದೆ. ವಾಹನಗಳ ದಟ್ಟಣೆ ಮಿತಿಮೀರಿದೆ. ಸಂಚಾರಿ ನಿಯಮ ಗಾಳಿಗೆ ತೂರಿದ ಪರಿಣಾಮ ಹದಗೆಟ್ಟ ಸಂಚಾರಿ ವ್ಯವಸ್ಥೆ ಅಧೋಗತಿಯತ್ತ ಸಾಗಿದೆ.
Vijaya Karnataka Web GDG-27GJD1
ಗಜೇಂದ್ರಗಡ ಕುಷ್ಟಗಿ ರಸ್ತೆಯಲ್ಲಿ ವಾಹನಗಳ ದಟ್ಟಣೆ.


ಕಠಿಣ ಕ್ರಮ ಅಗತ್ಯ:

ರೋಣ ರಸ್ತೆಯ ಎಪಿಎಂಸಿ, ಕುಷ್ಟಗಿ ರಸ್ತೆಯ ಮಾಳಗಿ ಆಸ್ಪತ್ರೆ ಬಳಿ ವಾಹನ ತಡೆದು ನಿಲ್ಲಿಸುವ ವ್ಯವಸ್ಥೆ ಮಾಡಿದ್ದರಿಂದ ಪ್ರಯಾಣಿಕರು ಕೆಲ ದಿನ ತೊಂದರೆ ಅನುಭವಿಸಿದರೂ ಸುಗಮ ಸಂಚಾರಕ್ಕೆ ಅನುಕೂಲವಾಗಿತ್ತು. ಈಗ ಅಂತಹ ಕ್ರಮಗಳು ಸಡಿಲುಗೊಂಡು ಮತ್ತೆ ರಸ್ತೆ ಮಧ್ಯೆದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುವ ಬಸ್ಸುಗಳು, ಖಾಸಗಿ ವಾಹನಗಳಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದ್ದು, ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ.

ರಸ್ತೆ ದಾಟಲು ಮೀನ ಮೇಷ:

ದ್ವಿ ಚಕ್ರವಾಹನ, ಸೈಕಲ್‌, ಲಾರಿ, ಅಟೋರಿಕ್ಷಾ, ಎತ್ತಿನಗಾಡಿ, ತಳ್ಳುವಗಾಡಿ, ಟ್ರ್ಯಾಕ್ಟರ್‌ ಹೀಗೆ ಎಲ್ಲ ರೀತಿಯ ವಾಹನಗಳ ಚಾಲಕರು ಮೈಮೇಲೆ ಕಬರಿಲ್ಲದಂತೆ ಸಂಚರಿಸುತ್ತಿರುವುದು ಪಾದಚಾರಿಗಳು ರಸ್ತೆ ದಾಟಲು ಮೀನಮೇಷ ಎಣಿಸಬೇಕಾಗಿದೆ. ಮಾರುಕಟ್ಟೆ ಪ್ರದೇಶ ಜೋಡುರಸ್ತೆಯಲ್ಲಿ ಏಕಮುಖ ಸಂಚಾರವಿದ್ದರೂ ಅದನ್ನು ಯಾವುದೇ ವಾಹನ ಸವಾರರು ಪಾಲಿಸದಿರುವುದರಿಂದ ಹಲವಾರು ಅವಘಡಗಳು ಸಂಭವಿಸಿದ್ದರೂ ಕೇಳುವವರಿಲ್ಲದಂತಾಗಿದೆ.

ಟಾಪ್‌ ಸರ್ವಿಸ್‌ ತಪ್ಪುವದೆಂದು ?

ಪಟ್ಟಣದಿಂದ ಗುಡೂರಗೆ ತೆರಳುವ ಖಾಸಗಿ ವಾಹನದಲ್ಲಿ ಪ್ರಯಾಣಿಕರು ಜೀವದ ಹಂಗು ತೊರೆದು ಟಾಪ್‌ ಮೇಲೆ ಕುಳಿತು ಪ್ರಯಾಣಿಸುವುದು ಸಾಮಾನ್ಯವಾಗಿದೆ. ಗ್ರಾಮೀಣರು ಜೀವ ಕೈಯಲ್ಲಿ ಹಿಡಿದು ಟಂ ಟಂ, ಟೆಂಪೋಟ್ರ್ಯಾಕ್ಸಗಳಲ್ಲಿ ಸಂಚರಿಸುವ ದುಸ್ಥಿತಿಗೆ ಪರಿಹಾರ ದೊರಕಿಸಿಕೊಡುವರಾರ‍ಯರು ? ಇಲಾಖೆ ಅಧಿಕಾರಿಗಳು ಎಲ್ಲಿದ್ದಾರೆ ? ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಮಾರ್ಗಸೂಚಿ ಫಲಕಗಳೇ ಇಲ್ಲ:

ಪಟ್ಟಣದ ವಿವಿಧ ಬಡಾವಣೆಗಳ ಶಾಲೆ-ಕಾಲೇಜು ರಸ್ತೆಗಳಲ್ಲಿ ಬೈಕ್‌ ಸವಾರರು ಎಗ್ಗಿಲ್ಲದ ವೇಗದಲ್ಲಿ ಸವಾರಿ ಮಾಡುತ್ತಿರುವುದರಿಂದ ಚಿಕ್ಕ ಮಕ್ಕಳು, ವಿದ್ಯಾರ್ಥಿಗಳು ನಡೆದಾಡುವುದು ದುಸ್ತರವಾಗಿದೆ. ಇಲ್ಲಿಯ ವರ್ತುಲ ರಸ್ತೆ ಇನ್ನಿತರ ಕಡೆ ಹುಡಕಿದರೆ ಎಲ್ಲಿಯೂ ಮಾರ್ಗ ಸೂಚಿ ಫಲಕಗಳೇ ಇಲ್ಲ. ಹೀಗಾಗಿ ಪರ ಊರುಗಳ ಪ್ರಯಾಣಿಕರ ಪರದಾಟ ಸಾಮಾನ್ಯವಾಗಿದೆ.

ಟ್ರಾಫಿಕ್‌ ಸಿಗ್ನಲ್‌ ನೆಪಕ್ಕೆ ಮಾತ್ರ:

ಪೊಲೀಸ್‌ ಇಲಾಖೆ ಕಾಲಕಾಲೇಶ್ವರ ವೃತ್ತದಲ್ಲಿ ಟ್ರಾಫಿಕ್‌ ಸಿಗ್ನಲ್‌ ಅಳವಡಿಸಿದ್ದು ಜನರ ಪ್ರಶಂಸೆಗೆ ಪಾತ್ರವಾಗಿತ್ತು. ಆದರೆ ಟ್ರಾಫಿಕ್‌ ಸಿಗ್ನಲ್‌ ಕಾರ್ಯ ಸದ್ಯ ಸ್ಥಗಿತವಾಗಿರುವುದು ಜನತೆಗೆ ಬೇಸರ ಮೂಡಿಸಿದೆ.

ಹೆಚ್ಚುತ್ತಿರುವ ಅವಘಡಗಳು :

ಪಟ್ಟಣದ ಮುಖ್ಯ ಜನನಿಬಿಡ ಪ್ರದೇಶ ಶ್ರೀ ಕಾಲಕಾಲೇಶ್ವರ ವೃತ್ತದಿಂದ ರೋಣ ರಸ್ತೆ, ಕುಷ್ಟಗಿ ರಸ್ತೆ ಹಾಗೂ ಬಸ್‌ ನಿಲ್ದಾಣವರೆಗೆ ಅಳವಡಿಸಿರುವ ಟ್ರಾಫಿಕ್‌ ಸಿಗ್ನಲ್‌ ಕಾರ್ಯ ನಿರ್ವಹಿಸುತ್ತಿಲ್ಲಾ. ಹೀಗಾಗಿ ರಸ್ತೆಗಳಲ್ಲಿ ಮಿತಿಮೀರಿದ ವೇಗದಲ್ಲಿ ಸಂಚರಿಸುವ ವಾಹನಗಳಿಗೆ ಅಡೆತಡೆ ಇಲ್ಲದಂತಾಗಿದೆ.

ಸಿಸಿ ಕ್ಯಾಮೆರಾ ಅಳವಡಿಕೆಗೆ ಆಗ್ರಹ:

ಕಾಲಕಾಲೇಶ್ವರ ವೃತ್ತದಲ್ಲಿರುವ ಟ್ರಾಫಿಕ್‌ ಸಿಗ್ನಲ್‌ಗೆ ಸಿಸಿ ಕ್ಯಾಮೆರಾ ಅಳವಡಿಸಲು ಹಣಕಾಸಿನ ನೆರವು ನೀಡಲು ಪೊಲೀಸ್‌ ಇಲಾಖೆ ಪುರಸಭೆಗೆ ವಿನಂತಿಸಿದೆ. ಈ ಬೇಡಿಕೆ ಈಡೇರಿಸಲು ಪುರಸಭೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ