ಆ್ಯಪ್ನಗರ

ಹಸ್ತಾದಿಂದ ದಶಕದ ಬರ ದೂರ

​ಗಜೇಂದ್ರಗಡ: ನಾಲ್ಕು ದಿನದಿಂದ ತಾಲೂಕಿನಾದ್ಯಂತ ಭರ್ಜರಿ ಮಳೆಯಾಗಿದ್ದರಿಂದ ದಶಕದ ಬರ ನೀಗುವಂತಾಗಿದ್ದು, ಕೃಷಿಕರ ಮೊಗದಲ್ಲಿಮಂದಹಾಸ ಮೂಡಿಸಿದೆ. ಅವಿಭಜಿತ ರೋಣ ಮತ್ತು ಗಜೇಂದ್ರಗಡ ತಾಲೂಕು ಹತ್ತು ವರ್ಷದಿಂದಲೂ ಬರ ಎದುರಿಸುತ್ತಿದೆ. ಇದರಿಂದ ಜನ, ಜಾನುವಾರುಗಳು ತೊಂದರೆ

Vijaya Karnataka 12 Oct 2019, 5:00 am
ರಾಘವೇಂದ್ರ ಕುಲಕರ್ಣಿ
Vijaya Karnataka Web 12GJD1_25
ಗಜೇಂದ್ರಗಡದಲ್ಲಿಅಪಾರ ಮಳೆಯಿಂದ ಗುಡ್ಡದ ಬಳಿಯ ಕೆರೆಯಲ್ಲಿಮಳೆ ನೀರು ಸಂಗ್ರಹವಾಗಿದೆ.

ಗಜೇಂದ್ರಗಡ: ನಾಲ್ಕು ದಿನದಿಂದ ತಾಲೂಕಿನಾದ್ಯಂತ ಭರ್ಜರಿ ಮಳೆಯಾಗಿದ್ದರಿಂದ ದಶಕದ ಬರ ನೀಗುವಂತಾಗಿದ್ದು, ಕೃಷಿಕರ ಮೊಗದಲ್ಲಿಮಂದಹಾಸ ಮೂಡಿಸಿದೆ.
ಅವಿಭಜಿತ ರೋಣ ಮತ್ತು ಗಜೇಂದ್ರಗಡ ತಾಲೂಕು ಹತ್ತು ವರ್ಷದಿಂದಲೂ ಬರ ಎದುರಿಸುತ್ತಿದೆ. ಇದರಿಂದ ಜನ, ಜಾನುವಾರುಗಳು ತೊಂದರೆ ಅನುಭವಿಸುವಂತಾಯಿತು. ಪ್ರಸ್ತುತ ಹಿಂಗಾರು ಹಂಗಾಮಿನ ಹಸ್ತಾ ನಕ್ಷತ್ರದ ಮಳೆ ಕೃಪೆ ತೋರಿದ ಪರಿಣಾಮ ಬರದ ವಾತಾವರಣ ಚಿತ್ರಣವನ್ನೇ ಬದಲಾಯಿಸಿದೆ. ಬರಡಾದ ಭೂಮಿಯಲ್ಲಿಬೆಳೆಗಳ ಹಸಿರಿನಿಂದ ಕಂಗೊಳಿಸುವುದನ್ನು ಕಂಡು ರೈತನ ಮನಸ್ಸಿಗೆ ಮುದ ನೀಡುವಂತಾಗಿದೆ.

ಬೇಸಿಗೆ ಬಿರು ಬಿಸಿಲಿಗೆ ಜನ ಕಂಗೆಟ್ಟಿದ್ದರು. ಬೆಟ್ಟಗುಡ್ಡಗಳು ಬರಡಾಗಿದ್ದವು. ಈಗ ಮಳೆ ನೀರಿನಿಂದ ತೋಯ್ದು ಸವೃದ್ಧಿಯೊಂದಿಗೆ ಪುನಶ್ಚೇತನ ಪಡೆದಿವೆ.

ಮನೆಗಳಿಗೆ ನುಗಿದ ನೀರು :
ಧಾರಾಕಾರವಾಗಿ ಆರ್ಭಟಿಸಿದ ಮಳೆಯಿಂದ ನೇಕಾರ ಕಾಲೊನಿ, ತಗ್ಗು ಪ್ರದೇಶದಲ್ಲಿರುವ ಕುಷ್ಟಗಿ ರಸ್ತೆ ಜನತಾ ಪ್ಲಾಟ್‌, ಜಿ.ಎಸ್‌. ಪಾಟೀಲ ವಾಂಬೆ ಮನೆಯೊಳಗೆ ನೀರು ಹೊಕ್ಕು ಜಲಾವೃತವಾಗಿದ್ದರಿಂದ ಅಲ್ಲಿನ ಕುಟುಂಬದವರು ಸಂಕಷ್ಟ ಎದುರಿಸಿದರು. ಅರ್ಭಟದ ಮಳೆಗೆ ಮಣ್ಣಿನ ಮನೆಗಳು, ಲಂಬಾಣಿ ತಾಂಡಾ, ವಾಣಿ ಪೇಟೆ, ಕೊರವರ ಓಣಿ, ನಿಡಗುಂದಿ ಗ್ರಾಮದಲ್ಲಿಕೆಲ ಮನೆಗಳು ಕುಸಿದಿವೆ.

ತುಂಬಿದ ಹಳ್ಳಗಳು:
ಗದಗ ರಸ್ತೆಯ ಕೊಡಗಾನೂರ ಕ್ರಾಸ್‌ ಬಳಿಯ ಕೆಳ ಸೇತುವೆ, ಸೂಡಿ-ಕಾತರಾಳ, ಯಲಬುರ್ಗಾ ರಸ್ತೆ ಉಣಚಗೇರಿ ಹಳ್ಳಗಳು ತುಂಬಿ ಹರಿದಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಯಿತು.

ಕಾಲಕಾಲೇಶ್ವರ, ರಾಜೂರ, ಬೈರಾಪುರ, ಗೌಡಗೇರಿ, ಕುಂಟೋಜಿ, ಮ್ಯಾಕಲಝರಿ, ಗೋಗೇರಿ, ಮಾಟರಂಗಿ, ರಾಮಾಪುರ, ಪುರ್ತಗೇರಿ, ಕೊಡಗಾನೂರ, ವೀರಾಪುರ, ಚಿಲ್‌ಝರಿ, ಜಿಗೇರಿ, ದಿಂಡೂರ, ಲಕ್ಕಕಟ್ಟಿ, ಕಲ್ಲಿಗನೂರ, ಮುಶಿಗೇರಿ, ಮತ್ತಿತರ ಗ್ರಾಮಗಳಲ್ಲಿ ಮನೆಗಳು ಹಾನಿಗೊಳಗಾಗಿರುವುದು ವರದಿಯಾಗಿದೆ.

ಹಲವು ಮನೆಗಳಿಗೆ ಧಕ್ಕೆ :
ಪಟ್ಟಣದ ಅಡೇಕಾರ ಓಣಿ, ಚಲವಾದಿಯವರ ಓಣಿ, ಹರಿಜನ ಕೇರಿ, ತಾಂಡಾ, ನಾಲಬಂದ ಓಣಿ, ಶಿವಾಜಿ ಪೇಟೆ, ಮರದವರ ಓಣಿ, ಕೊಳ್ಳಿ ವೃತ್ತ, ನೇಕಾರ ಕಾಲೊನಿ, ಹಿರೇಬಜಾರ, ಸಿಂಹಾಸನ ಪೇಟೆ ಮತ್ತಿತರ ಬಡಾ ವಣೆಗಳ ರಸ್ತೆಗಳು ಹೊಂಡಗಳಾಗಿ ಪರಿವರ್ತನೆ ಸ್ವರೂಪ ಪಡೆದು ಮಳೆ ನೀರು ಹರಿದಿದೆ. ಇದರಿಂದ ರಸ್ತೆ ಅಕ್ಕಪಕ್ಕದ ನೂರಾರು ಮನೆಗಳು ಧಕ್ಕೆಗೊಳಗಾಗಿವೆ. ಐವತ್ತಕ್ಕೂ ಹೆಚ್ಚಿನ ಮನೆಗಳ ಮಣ್ಣಿನ ಛಾವಣಿ ನೆಲಕ್ಕುರಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ