ಶತಮಾನೋತ್ಸವ ಆಚರಣೆಗೆ ನಿರ್ಧಾರ
ಲಕ್ಕುಂಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕೆಲವೇ ದಿನಗಳಲ್ಲಿಶತಮಾನೋತ್ಸವ ಆಚರಿಸಲಿದ್ದು ಈ ವರ್ಷದ ವಾರ್ಷಿಕ 1.62 ಕೋಟಿಯಷ್ಟು ವಹಿವಾಟು ನಡೆಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಬಿ ಕಲಕೇರಿ ಹೇಳಿದರು.
Vijaya Karnataka 25 Sep 2019, 5:00 am
ಲಕ್ಕುಂಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕೆಲವೇ ದಿನಗಳಲ್ಲಿಶತಮಾನೋತ್ಸವ ಆಚರಿಸಲಿದ್ದು ಈ ವರ್ಷದ ವಾರ್ಷಿಕ 1.62 ಕೋಟಿಯಷ್ಟು ವಹಿವಾಟು ನಡೆಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಬಿ ಕಲಕೇರಿ ಹೇಳಿದರು.
ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ. 2 ರ ವಾರ್ಷಿಕ ಸರ್ವ ಸಾಧಾರಣೆ ಸಭೆಯ ಅಧ್ಯಕ್ಷತೆ ವಹಿಸಿ 101 ನೇ ವಾರ್ಷಿಕ ವರದಿ ಓದುತ್ತ ಮಾತನಾಡಿದರು. 1.62 ಕೋಟಿ ರೂ. ವಹಿವಾಟಿನಲ್ಲಿ3.74 ಲಕ್ಷ ರೂ.ಗಳ ಲಾಭವನ್ನು ಸಂಘ ಪಡೆದುಕೊಂಡಿದ್ದು ಹಲವು ವರ್ಷಗಳಿಂದ ಸಾಲದಲ್ಲಿಯೇ ಇದ್ದ ಸಂಘ ಈಗ ಮುಕ್ತವಾಗಿದೆ. 445 ಸದಸ್ಯರನ್ನು ಹೊಂದಿದ ಸಂಘವು 42.25 ಲಕ್ಷ ರೂ. ಸಾಲ ನೀಡಲಾಗಿದೆ. ಸರಕಾರದ ಘೋಷಣೆಯಂತೆ 1 ಲಕ್ಷ ರೂ. ಸಾಲ ಮನ್ನಾ ಯೋಜನೆಯಲ್ಲಿ117 ಸದಸ್ಯರು ಇದರ ಲಾಭ ಪಡೆದಿದ್ದಾರೆ. ಒಟ್ಟು 49.63 ಲಕ್ಷ ರೂ. ಗಳ ಬೆಳೆ ಸಾಲ ಮನ್ನಾ ಆಗಿದ್ದು ಪ್ರಸ್ತುತ 32.10 ಲಕ್ಷ ರೂ.ಬೆಳೆ ಸಾಲ ವಿತರಣೆ ಮಾಡಲಾಗಿದೆ ಎಂದರು.
ಜಿಪಂ ಅಧ್ಯಕ್ಷ ಸಿದ್ದು ಪಾಟೀಲ ಸನ್ಮಾನ ಸ್ವೀಕರಿಸಿ, ತಮ್ಮೆಲ್ಲರ ಸಹಕಾರದಿಂದ ಜಿಪಂ ಅಧ್ಯಕ್ಷನಾಗಿ ಅಧಿಕಾರ ಪಡೆದುಕೊಂಡಿದ್ದೇನೆ. ರೈತರ ಮನೆತನದಲ್ಲಿಬೆಳೆದಿರುವ ನನಗೆ ರೈತರ ಅಭಿವೃದ್ಧಿಗೆ ಪೂರಕವಾಗಿರುವ ಸಹಕಾರ ಸಂಘಗಳ ಅಭಿವೃದ್ಧಿಗಾಗಿ ಸಹಕರಿಸುವುದಾಗಿ ಹೇಳಿದರು.
ಶತಮಾನೋತ್ಸವ ಆಚರಣೆ ಕುರಿತು ಚರ್ಚೆ ನಡೆಯಿತು.ಗ್ರಾಪಂ ಅಧ್ಯಕ್ಷ ಎಸ್.ಎಂ.ಬೂದಿಹಾಳ,ಸಂಘದ ಉಪಾಧ್ಯಕ್ಷ ಶಂಕ್ರಪ್ಪ ಪಾಪನಾಶಿ, ನಿರ್ದೆಶಕರಾದ ವೀರಪ್ಪ ಕಮತರ, ಮಲ್ಲನಗೌಡ ಪಾಟೀಲ, ಮಂಜುನಾಥ ಗದಗಿನ, ಮಾಣೇಕೇಶ್ವರ ಮುಸ್ಕಿನಬಾವಿ, ರುದ್ರಪ್ಪ ವಡ್ಡರ, ಮಂಜುನಾಥ ಕರಿಯಲ್ಲಪ್ಪನವರ, ಅನ್ನಪೂರ್ಣ ಹಡಗಲಿ, ನೀಲವ್ವ ರವದಿ, ಕೆಸಿಸಿ ಬ್ಯಾಂಕ್ ನೀರಿಕ್ಷಕ ಉಮೇಶ ಮುದಕಣ್ಣವರ ವೇದಿಕೆಯಲ್ಲಿದ್ದರು. ಮಂಜುನಾಥ ಗದಗಿನ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕ ಜಿ.ಬಿ.ಬೆಣಕಲ್ ನಿರೂಪಿಸಿದರು. ಅಜ್ಜಪ್ಪಗೌಡ ಪಾಟೀಲ ವಂದಿಸಿದರು.
ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ. 2 ರ ವಾರ್ಷಿಕ ಸರ್ವ ಸಾಧಾರಣೆ ಸಭೆಯ ಅಧ್ಯಕ್ಷತೆ ವಹಿಸಿ 101 ನೇ ವಾರ್ಷಿಕ ವರದಿ ಓದುತ್ತ ಮಾತನಾಡಿದರು. 1.62 ಕೋಟಿ ರೂ. ವಹಿವಾಟಿನಲ್ಲಿ3.74 ಲಕ್ಷ ರೂ.ಗಳ ಲಾಭವನ್ನು ಸಂಘ ಪಡೆದುಕೊಂಡಿದ್ದು ಹಲವು ವರ್ಷಗಳಿಂದ ಸಾಲದಲ್ಲಿಯೇ ಇದ್ದ ಸಂಘ ಈಗ ಮುಕ್ತವಾಗಿದೆ. 445 ಸದಸ್ಯರನ್ನು ಹೊಂದಿದ ಸಂಘವು 42.25 ಲಕ್ಷ ರೂ. ಸಾಲ ನೀಡಲಾಗಿದೆ. ಸರಕಾರದ ಘೋಷಣೆಯಂತೆ 1 ಲಕ್ಷ ರೂ. ಸಾಲ ಮನ್ನಾ ಯೋಜನೆಯಲ್ಲಿ117 ಸದಸ್ಯರು ಇದರ ಲಾಭ ಪಡೆದಿದ್ದಾರೆ. ಒಟ್ಟು 49.63 ಲಕ್ಷ ರೂ. ಗಳ ಬೆಳೆ ಸಾಲ ಮನ್ನಾ ಆಗಿದ್ದು ಪ್ರಸ್ತುತ 32.10 ಲಕ್ಷ ರೂ.ಬೆಳೆ ಸಾಲ ವಿತರಣೆ ಮಾಡಲಾಗಿದೆ ಎಂದರು.
ಜಿಪಂ ಅಧ್ಯಕ್ಷ ಸಿದ್ದು ಪಾಟೀಲ ಸನ್ಮಾನ ಸ್ವೀಕರಿಸಿ, ತಮ್ಮೆಲ್ಲರ ಸಹಕಾರದಿಂದ ಜಿಪಂ ಅಧ್ಯಕ್ಷನಾಗಿ ಅಧಿಕಾರ ಪಡೆದುಕೊಂಡಿದ್ದೇನೆ. ರೈತರ ಮನೆತನದಲ್ಲಿಬೆಳೆದಿರುವ ನನಗೆ ರೈತರ ಅಭಿವೃದ್ಧಿಗೆ ಪೂರಕವಾಗಿರುವ ಸಹಕಾರ ಸಂಘಗಳ ಅಭಿವೃದ್ಧಿಗಾಗಿ ಸಹಕರಿಸುವುದಾಗಿ ಹೇಳಿದರು.
ಶತಮಾನೋತ್ಸವ ಆಚರಣೆ ಕುರಿತು ಚರ್ಚೆ ನಡೆಯಿತು.ಗ್ರಾಪಂ ಅಧ್ಯಕ್ಷ ಎಸ್.ಎಂ.ಬೂದಿಹಾಳ,ಸಂಘದ ಉಪಾಧ್ಯಕ್ಷ ಶಂಕ್ರಪ್ಪ ಪಾಪನಾಶಿ, ನಿರ್ದೆಶಕರಾದ ವೀರಪ್ಪ ಕಮತರ, ಮಲ್ಲನಗೌಡ ಪಾಟೀಲ, ಮಂಜುನಾಥ ಗದಗಿನ, ಮಾಣೇಕೇಶ್ವರ ಮುಸ್ಕಿನಬಾವಿ, ರುದ್ರಪ್ಪ ವಡ್ಡರ, ಮಂಜುನಾಥ ಕರಿಯಲ್ಲಪ್ಪನವರ, ಅನ್ನಪೂರ್ಣ ಹಡಗಲಿ, ನೀಲವ್ವ ರವದಿ, ಕೆಸಿಸಿ ಬ್ಯಾಂಕ್ ನೀರಿಕ್ಷಕ ಉಮೇಶ ಮುದಕಣ್ಣವರ ವೇದಿಕೆಯಲ್ಲಿದ್ದರು. ಮಂಜುನಾಥ ಗದಗಿನ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕ ಜಿ.ಬಿ.ಬೆಣಕಲ್ ನಿರೂಪಿಸಿದರು. ಅಜ್ಜಪ್ಪಗೌಡ ಪಾಟೀಲ ವಂದಿಸಿದರು.