ಆ್ಯಪ್ನಗರ

ಪತ್ರಿಕಾ ದಿನಾಚರಣೆಗೆ ನಿರ್ಧಾರ

ಗಜೇಂದ್ರಗಡ : ಸ್ಥಳೀಯ ಮೈಸೂರ ಮಠದಲ್ಲಿ ಗಜೇಂದ್ರಗಡ ತಾಲೂಕು ಪತ್ರಕರ್ತರು ಮತ್ತು ಪತ್ರಿಕಾ ವಿತರಕರು ಸಭೆ ನಡೆಸಿ ಅರ್ಥಪೂರ್ಣ ಪತ್ರಿಕಾ ದಿನಾಚರಣೆ ಆಚರಣೆಗೆ ನಿರ್ಧರಿಸಲಾಯಿತು.

Vijaya Karnataka 28 Jul 2019, 5:00 am
ಗಜೇಂದ್ರಗಡ : ಸ್ಥಳೀಯ ಮೈಸೂರ ಮಠದಲ್ಲಿ ಗಜೇಂದ್ರಗಡ ತಾಲೂಕು ಪತ್ರಕರ್ತರು ಮತ್ತು ಪತ್ರಿಕಾ ವಿತರಕರು ಸಭೆ ನಡೆಸಿ ಅರ್ಥಪೂರ್ಣ ಪತ್ರಿಕಾ ದಿನಾಚರಣೆ ಆಚರಣೆಗೆ ನಿರ್ಧರಿಸಲಾಯಿತು.
Vijaya Karnataka Web decision for press day
ಪತ್ರಿಕಾ ದಿನಾಚರಣೆಗೆ ನಿರ್ಧಾರ


ವಿತರಕರಾದ ನಾಗಪ್ಪ ಮ್ಯಾಗೇರಿ, ಸಿದ್ದಪ್ಪ ಚುರ್ಚಿಹಾಳ, ಮಲ್ಲಿಕಾರ್ಜುನ ಹಪಡದ, ಮಹಾಂತಯ್ಯಾ ಕಪ್ಪಲಿಮಠ, ಪತ್ರಕರ್ತರಾದ ಶಿಥಲ್‌ ಓಲೆಕಾರ, ಗುರು ಕಲ್ಮಂಗಿಮಠ, ದಾವಲಸಾಬ ತಾಳಿಕೋಟಿ, ಅಶೋಕ ಉಕ್ಕಿಸಲ, ಮುತ್ತು ಚವ್ವಾಣ, ಶಂಕರ್‌ ರಾಟೋಡ, ಪ್ರತಾಪಸಿಂಗ ರಾಠೋಡ ಮಾತನಾಡಿದರು. ಬೆಳಗ್ಗೆ ಚಳಿಯಲ್ಲಿ ಪತ್ರಿಕೆ ತಲುಪಿಸುವ ವಿತರಕರಿಗೆ ಮತ್ತು ಹುಡುಗರಿಗೆ ಗುಣಮಟ್ಟದ ಜಾಕೇಟ್‌ ಕೊಡುವದಾಗಿ ಡಾ. ಪ್ರಭು ಗಂಜಿಹಾಳ ಹೇಳಿದರು.

ಜು. 29 ರಂದು ಎಸ್‌.ಎಂ. ಭೂಮರೆಡ್ಡಿ ಕಾಲೇಜನಲ್ಲಿ ಗಜೇಂದ್ರಗಡ ತಾಲೂಕು ಪತ್ರಕರ್ತರು ಮತ್ತು ಪತ್ರಿಕಾ ವಿತರಕರ ವತಿಯಿಂದ ಪತ್ರಿಕಾ ದಿನಾಚರಣೆ ನಡೆಯಲಿದ್ದು ತಹಸೀಲ್ದಾರ ಗುರುಲಿಂಗಯ್ಯಾ ಹಿರೇಮಠ ಉದ್ಘಾಟಿಸುವರು. ಪ್ರಾ. ಎಸ್‌.ಟಿ. ಬೈರಪ್ಪನವರ ಯುವ ಬರಹಗಾರ ಕುರಿತು, ಎಸ್‌.ಕೆ. ಕಟ್ಟಿಮನಿ ಪತ್ರಿಕೋದ್ಯಮ ನಡೆದು ಬಂದ ದಾರಿ ಕುರಿತು ಉಪನ್ಯಾಸ ನೀಡುವರು. ಪ್ರಾ. ಜೆ.ಜಿ. ಕುದರಿ ಅಧ್ಯಕ್ಷ ತೆ ವಹಿಸುವರು. ಪಿಎಸ್‌ಐ ಆರ್‌.ವೈ. ಜಲಗೇರಿ, ಡಾ. ಪ್ರಭು ಗಂಜಿಹಾಳ, ಕಸಾಪ ಅಧ್ಯಕ್ಷ ಐ.ಎ. ರೇವಡಿ ಮತ್ತು ಗಜೇಂದ್ರಗಡ ತಾಲೂಕ ಪತ್ರಕರ್ತರು ಮತ್ತು ಪತ್ರಿಕಾ ವಿತರಕರು ಪಾಲ್ಗೋಳ್ಳುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ