ಮುಂಡರಗಿ : ಇಲ್ಲಿಯ ಪುರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಹೇಮಾವತಿ ಶ್ರೀನಿವಾಸ ಅಬ್ಬಿಗೇರಿ ವಿರುದ್ಧ 23 ಸದಸ್ಯರಲ್ಲಿ ಒಟ್ಟು 16 ಸದಸ್ಯರು ಅವಿಶ್ವಾಸ ನಿರ್ಣಯದ ಪರ ಕೈ ಎತ್ತುವ ಮೂಲಕ ಒಮ್ಮತ ಸೂಚಿಸಿದರು. ಬೆಳಗ್ಗೆ 10.30ಕ್ಕೆ ಅವಿಶ್ವಾಸ ನಿರ್ಣಯ ಮಂಡನೆ ಸಭೆ ನಿಯಮಾನುಸಾರ ಉಪಾಧ್ಯಕ್ಷ ಬಸವರಾಜ ನರೇಗಲ್ ಅಧ್ಯಕ್ಷ ತೆಯಲ್ಲಿ ಆರಂಭವಾಯಿತು. 23 ಸದಸ್ಯರು ಹಾಜರಿದ್ದು ಕೋರಂ ಭರ್ತಿ ಇತ್ತು.
10.30ಕ್ಕೆ ಕೇವಲ 15 ಸದಸ್ಯರು ಹಾಜರಿದ್ದು ಇನ್ನೇನು ಸಭೆ ಆರಂಭಗೊಳ್ಳುತ್ತದೆ ಎನ್ನುವಷ್ಟರಲ್ಲಿ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ಸೇರಿದಂತೆ 8 ಸದಸ್ಯರು ಸಭೆಗೆ ಆಗಮಿಸಿದರು.
ಅವಿಶ್ವಾಸ ನಿರ್ಣಯದ ವಿಷಯಕ್ಕೆ ಸದಸ್ಯ ರಾಘು ಕುರಿಯವರ ಸೂಚಕರಾದರು. ಸದಸ್ಯ ಮುದುಕಪ್ಪ ಕುಂಬಾರ ಅನುಮೋದಿಸಿದರು. ಆಗ ಸಭೆಯಲ್ಲಿದ್ದ 16 ಸದಸ್ಯರು ಕೈ ಎತ್ತುವ ಮೂಲಕ ಅವಿಶ್ವಾಸ ನಿರ್ಣಯದ ಪರ ಬೆಂಬಲ ಸೂಚಿಸಿದರು.
ಸದಸ್ಯರ ಮೂರನೇ ಒಂದು ಭಾಗ ಹಾಜರಿದ್ದು ಅವಿಶ್ವಾಸ ನಿರ್ಣಯದ ಪರ 16 ಸದಸ್ಯರು ಬೆಂಬಲ ಸೂಚಿಸಿದ ಕಾರಣ ಅವಿಶ್ವಾಸ ನಿರ್ಣಯ ಸಿಂಧುವಾಗಿದೆ ಎಂದು ಮುಖ್ಯಾಧಿಕಾರಿ ಸಿದ್ದಲಿಂಗ ಪ್ರಭು ಇಬ್ರಂಡಿ ಪ್ರಕಟಿಸಿದರು.
ಅವಿಶ್ವಾಸ ನಿರ್ಣಯದ ನಂತರ ಪುರಸಭೆ ನಿಯಮಾನುಸಾರ ಉಪಾಧ್ಯಕ್ಷ ಬಸವರಾಜ ನರೇಗಲ್ ಅಧ್ಯಕ್ಷ ರಾಗಿ ಅಧಿಕಾರ ಸ್ವೀಕರಿಸಿದರು. ನಂತರ ಸದಸ್ಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಪ್ರಭು ಅಬ್ಬಿಗೇರಿ, ಕೊಟ್ರಮ್ಮ ಇಟಗಿ, ರಿಯಾನಬೇಗಂ ಕೆಲೂರ, ರೇಖಾ ದೇಸಾಯಿ, ಬಸವರಾಜ ದೇಸಾಯಿ, ಪ್ರೇಮಾ ಗಣದಿನ್ನಿ, ಪರಸುರಾಮ ಕರಡಿಕೊಳ್ಳ, ವಿರೇಶ ಸಜ್ಜನರ, ಸುರೇಶ ಮಾಳೆಕೊಪ್ಪ, ಶಂಕರಗೌಡ ಪಾಟೀಲ, ದಾನೇಶ್ವರಿ ಭಜಂತ್ರಿ, ಭಾರತಿ ಹಕ್ಕಿ ಪಾಲ್ಗೊಂಡಿದ್ದರು.
ಒಂದಂಕಿ ಆಟ
ಪುರಸಭೆ ಅಧ್ಯಕ್ಷ ರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಕಾಂಗ್ರೆಸ್, ಬಿಜೆಪಿ ಸೇರಿ ಒಟ್ಟು 15 ಸದಸ್ಯರು ಆರಂಭದಲ್ಲಿ ಒಂದು ಬಣವಾಗಿ ವ್ಯವಸ್ಥೆ ಮಾಡಿಕೊಂಡು ಕಾದಿದ್ದರು. 23 ಸದಸ್ಯರಲ್ಲಿ ಅವಿಶ್ವಾಸ ನಿರ್ಣಯಕ್ಕೆ 16 ಸದಸ್ಯರ ಅವಶ್ಯಕತೆ ಇತ್ತು. ಅಧ್ಯಕ್ಷ ರ ಜತೆಗೆ ಗುರ್ತಿಸಿಕೊಂಡ ಬಸವರಾಜ ರಾಮೇನಹಳ್ಳಿ, ಲಿಂಗರಾಜಗೌಡ ಪಾಟೀಲ, ಶಾಂತಾ ಬಳ್ಳಾರಿ, ಚಂದ್ರಶೇಖರ ಬಡಿಗೇರ, ಫಕ್ರುಸಾಬ ಹಾರೋಗೇರಿ, ಸೋಮನಗೌಡ ಗೌಡರ ಸಭೆಗೆ ತಡವಾಗಿ ಆಗಮಿಸಿದರು. 8 ಸದಸ್ಯರೂ ಸೇರಿ ಒಟ್ಟಿಗೇ ಬಂದಾಗ ಅವಿಶ್ವಾಸ ನಿರ್ಣಯವಾಗುವುದಿಲ್ಲ ಎಂಬ ಅನುಮಾನ ಶುರುವಾಯಿತು. ಆದರೆ ಅವಿಶ್ವಾಸ ನಿರ್ಣಯ ಪರವಾಗಿ ಕೈ ಎತ್ತುವಾಗ ಬಂದವರಲ್ಲೊಬ್ಬರು 15 ಸದಸ್ಯರ ಜತೆಗೆ ಕೈ ಎತ್ತಿದಾಗಲೇ ಅವಿಶ್ವಾಸ ನಿರ್ಣಯ ಸಿಂಧುವಾಯಿತು. ಹೀಗಾಗಿ ಒಂದಂಕಿ ಆಟ ಇಲ್ಲಿ ಪ್ರಮುಖ ಅಂಶವಾಗಿತ್ತು.
10.30ಕ್ಕೆ ಕೇವಲ 15 ಸದಸ್ಯರು ಹಾಜರಿದ್ದು ಇನ್ನೇನು ಸಭೆ ಆರಂಭಗೊಳ್ಳುತ್ತದೆ ಎನ್ನುವಷ್ಟರಲ್ಲಿ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ಸೇರಿದಂತೆ 8 ಸದಸ್ಯರು ಸಭೆಗೆ ಆಗಮಿಸಿದರು.
ಅವಿಶ್ವಾಸ ನಿರ್ಣಯದ ವಿಷಯಕ್ಕೆ ಸದಸ್ಯ ರಾಘು ಕುರಿಯವರ ಸೂಚಕರಾದರು. ಸದಸ್ಯ ಮುದುಕಪ್ಪ ಕುಂಬಾರ ಅನುಮೋದಿಸಿದರು. ಆಗ ಸಭೆಯಲ್ಲಿದ್ದ 16 ಸದಸ್ಯರು ಕೈ ಎತ್ತುವ ಮೂಲಕ ಅವಿಶ್ವಾಸ ನಿರ್ಣಯದ ಪರ ಬೆಂಬಲ ಸೂಚಿಸಿದರು.
ಸದಸ್ಯರ ಮೂರನೇ ಒಂದು ಭಾಗ ಹಾಜರಿದ್ದು ಅವಿಶ್ವಾಸ ನಿರ್ಣಯದ ಪರ 16 ಸದಸ್ಯರು ಬೆಂಬಲ ಸೂಚಿಸಿದ ಕಾರಣ ಅವಿಶ್ವಾಸ ನಿರ್ಣಯ ಸಿಂಧುವಾಗಿದೆ ಎಂದು ಮುಖ್ಯಾಧಿಕಾರಿ ಸಿದ್ದಲಿಂಗ ಪ್ರಭು ಇಬ್ರಂಡಿ ಪ್ರಕಟಿಸಿದರು.
ಅವಿಶ್ವಾಸ ನಿರ್ಣಯದ ನಂತರ ಪುರಸಭೆ ನಿಯಮಾನುಸಾರ ಉಪಾಧ್ಯಕ್ಷ ಬಸವರಾಜ ನರೇಗಲ್ ಅಧ್ಯಕ್ಷ ರಾಗಿ ಅಧಿಕಾರ ಸ್ವೀಕರಿಸಿದರು. ನಂತರ ಸದಸ್ಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಪ್ರಭು ಅಬ್ಬಿಗೇರಿ, ಕೊಟ್ರಮ್ಮ ಇಟಗಿ, ರಿಯಾನಬೇಗಂ ಕೆಲೂರ, ರೇಖಾ ದೇಸಾಯಿ, ಬಸವರಾಜ ದೇಸಾಯಿ, ಪ್ರೇಮಾ ಗಣದಿನ್ನಿ, ಪರಸುರಾಮ ಕರಡಿಕೊಳ್ಳ, ವಿರೇಶ ಸಜ್ಜನರ, ಸುರೇಶ ಮಾಳೆಕೊಪ್ಪ, ಶಂಕರಗೌಡ ಪಾಟೀಲ, ದಾನೇಶ್ವರಿ ಭಜಂತ್ರಿ, ಭಾರತಿ ಹಕ್ಕಿ ಪಾಲ್ಗೊಂಡಿದ್ದರು.
ಒಂದಂಕಿ ಆಟ
ಪುರಸಭೆ ಅಧ್ಯಕ್ಷ ರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಕಾಂಗ್ರೆಸ್, ಬಿಜೆಪಿ ಸೇರಿ ಒಟ್ಟು 15 ಸದಸ್ಯರು ಆರಂಭದಲ್ಲಿ ಒಂದು ಬಣವಾಗಿ ವ್ಯವಸ್ಥೆ ಮಾಡಿಕೊಂಡು ಕಾದಿದ್ದರು. 23 ಸದಸ್ಯರಲ್ಲಿ ಅವಿಶ್ವಾಸ ನಿರ್ಣಯಕ್ಕೆ 16 ಸದಸ್ಯರ ಅವಶ್ಯಕತೆ ಇತ್ತು. ಅಧ್ಯಕ್ಷ ರ ಜತೆಗೆ ಗುರ್ತಿಸಿಕೊಂಡ ಬಸವರಾಜ ರಾಮೇನಹಳ್ಳಿ, ಲಿಂಗರಾಜಗೌಡ ಪಾಟೀಲ, ಶಾಂತಾ ಬಳ್ಳಾರಿ, ಚಂದ್ರಶೇಖರ ಬಡಿಗೇರ, ಫಕ್ರುಸಾಬ ಹಾರೋಗೇರಿ, ಸೋಮನಗೌಡ ಗೌಡರ ಸಭೆಗೆ ತಡವಾಗಿ ಆಗಮಿಸಿದರು. 8 ಸದಸ್ಯರೂ ಸೇರಿ ಒಟ್ಟಿಗೇ ಬಂದಾಗ ಅವಿಶ್ವಾಸ ನಿರ್ಣಯವಾಗುವುದಿಲ್ಲ ಎಂಬ ಅನುಮಾನ ಶುರುವಾಯಿತು. ಆದರೆ ಅವಿಶ್ವಾಸ ನಿರ್ಣಯ ಪರವಾಗಿ ಕೈ ಎತ್ತುವಾಗ ಬಂದವರಲ್ಲೊಬ್ಬರು 15 ಸದಸ್ಯರ ಜತೆಗೆ ಕೈ ಎತ್ತಿದಾಗಲೇ ಅವಿಶ್ವಾಸ ನಿರ್ಣಯ ಸಿಂಧುವಾಯಿತು. ಹೀಗಾಗಿ ಒಂದಂಕಿ ಆಟ ಇಲ್ಲಿ ಪ್ರಮುಖ ಅಂಶವಾಗಿತ್ತು.