ಆ್ಯಪ್ನಗರ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೆಹಲಿ ಚಲೋ

ಮುಂಡರಗಿ : ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಿನ ಕಾರ್ಯಕರ್ತರು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶನಿವಾರ ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

Vijaya Karnataka 9 Jun 2019, 5:00 am
ಮುಂಡರಗಿ : ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಿನ ಕಾರ್ಯಕರ್ತರು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶನಿವಾರ ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
Vijaya Karnataka Web GDG-8MDR1 RAIT IT
ಮುಂಡರಗಿಯಿಂದ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶನಿವಾರ ಹಮ್ಮಿಕೊಂಡ ದೆಹಲಿ ಚಲೋ ಕಾರ್ಯಕ್ರಮಕ್ಕೆ ಜ.ಡಾ.ಅನ್ನದಾನೀಶ್ವರ ಸ್ವಾಮಿಗಳು ಚಾಲನೆ ನೀಡಿದರು.


ಅನ್ನದಾನೀಶ್ವರ ಮಠದಲ್ಲಿ ಜ.ಡಾ.ಅನ್ನದಾನೀಶ್ವರ ಸ್ವಾಮಿಗಳು ದೆಹಲಿ ಚಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರೈತರ ಅನೇಕ ಸಮಸ್ಯೆಗಳಿಗೆ ಕೇಂದ್ರ ಸರಕಾರ ಪರಿಹಾರ ಸೂಚಿಸಬೇಕು. ರೈತರು ಹಾಗೂ ಮಹಿಳಾ ರೈತರು ನಿರಂತರ ತೊಂದರೆಯಲ್ಲಿಯೇ ಕೆಲಸ ಮಾಡಿ ಬೇಗನೆ ವೃದ್ಧರಾಗುತ್ತಾರೆ, ಹೀಗಾಗಿ ವಯಸ್ಸಾದ ಮೇಲೆ ಯಾರ ಮೇಲೂ ಅವಲಂಬನೆಯಾಗದಂತೆ ಸರಕಾರ ರೈತರಿಗೆ ಸೂಕ್ತ ಮಾಸಾಶನ ನೀಡುವಂತಾಗಬೇಕು ಎಂದರು.

ರೈತ ಮುಖಂಡ ಶಿವಾನಂದ ಇಟಗಿ ಮಾತನಾಡಿ, ದೆಹಲಿಯಲ್ಲಿ ರೈತರ ಸಮಸ್ಯೆ ಕುರಿತು ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಪ್ರಯತ್ನಿಸಲಾಗುವುದು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಫಸಲ ಬಿಮಾ ಯೋಜನೆಯ ಪ್ರೀಮಿಯಂ ಕಂತು ವಿಮಾ ಕಂಪನಿಗಳ ಬದಲು ಸರಕಾರವೇ ತುಂಬಿಸಿಕೊಳ್ಳಬೇಕು. ಮಹಿಳಾ ಸ್ವಸಹಾಯ ಗುಂಪುಗಳಿಗೆ 10 ಲಕ್ಷ ದವರೆಗೆ ಜಾಮೀನು ರಹಿತ ಮತ್ತು ಬಡ್ಡಿ ರಹಿತ ಸಾಲ ಕೊಡಬೇಕು. ಸಾಧು ಸಂತರ ಮಹಾತ್ಮರ ಜಯಂತಿಗಳನ್ನು ಒಂದೇ ವೇದಿಕೆಯಲ್ಲಿ ಸರಕಾರಿ ಸಕಲ ಗೌರವದೊಂದಿಗೆ ಆಚರಿಸುವಂತಾಗಬೇಕು. ಮಾಜಿ ಪ್ರಧಾನಿ ಅವರ ಕನಸಿನಂತೆ ನದಿಗಳ ಜೋಡಣೆಯಾಗಬೇಕು, ರೈತರಿಗೆ 58 ವರ್ಷ ತುಂಬಿದ ಮೇಲೆ ಪ್ರತಿ ತಿಂಗಳು ಮಾಸಾಶನ ಕೊಡಬೇಕು, ದೇಶದಲ್ಲಿ ಏಕ ರೂಪ ಕಾನೂನು ಜಾರಿಯಾಗಬೇಕು ಹೀಗೆ ಹಲವು ಬೇಡಿಕೆಗಳ ಮನವಿಯನ್ನು ಪ್ರಧಾನ ಮಂತ್ರಿಗೆ ಸಲ್ಲಿಸಲು ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.

ರೈತರಾದ ಹನುಮಂತಪ್ಪ ಕುರಿ, ರಾಮಣ್ಣ ಇಲಲೂರ, ಈರಪ್ಪ ಲದ್ದಿ, ಈರಣ್ಣ ಚವಡಾಳ, ದೇವಪ್ಪ ಗೋಣಿಸ್ವಾಮಿ, ಕಸ್ತೂರವ್ವ ಅರಕೇರಿ, ನಾಗರಾಜ ಬಡಿಗೇರ, ಹೇಮವ್ವಕಟಗಿ, ಸುವರ್ಣ ರೇವಡಿ, ಕಸ್ತೂರಿ ಬಂಗಾರಶೆಟ್ಟರ, ವೆಂಕಮ್ಮ ಪ್ಯಾಟಿ, ಶಿವಮ್ಮ ಗಡಗಿ, ದೀಪಾ ಪಾಟೀಲ, ಮಂಜುಳಾ ಪಾರಪ್ಪನವರ ಸೇರಿದಂತೆ 44 ರೈತರು ದೆಹಲಿ ಚಲೋದಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ