ಆ್ಯಪ್ನಗರ

ಎಟಿಎಂಗೆ ಕಾವಲುಗಾರರ ನೇಮಕಕ್ಕೆ ಆಗ್ರಹ

ಮುಳಗುಂದ : ಪಟ್ಟಣದ ಕರ್ನಾಟಕ ಬ್ಯಾಂಕಿನಲ್ಲಿ ಎಟಿಎಂ ಇದ್ದು, ಇಲ್ಲಿಯವರೆಗೆ ಅದರಲ್ಲಿ ಕಾವಲುಗಾರರಾಗಿ ಇಬ್ಬರನ್ನು ನೇಮಕ ಮಾಡಲಾಗಿತ್ತು. ಆದರೆ ಅವರಿಬ್ಬರನ್ನು ತೆಗೆದು ಹಾಕಿದ್ದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Vijaya Karnataka 7 Aug 2019, 5:00 am
ಮುಳಗುಂದ : ಪಟ್ಟಣದ ಕರ್ನಾಟಕ ಬ್ಯಾಂಕಿನಲ್ಲಿ ಎಟಿಎಂ ಇದ್ದು, ಇಲ್ಲಿಯವರೆಗೆ ಅದರಲ್ಲಿ ಕಾವಲುಗಾರರಾಗಿ ಇಬ್ಬರನ್ನು ನೇಮಕ ಮಾಡಲಾಗಿತ್ತು. ಆದರೆ ಅವರಿಬ್ಬರನ್ನು ತೆಗೆದು ಹಾಕಿದ್ದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Vijaya Karnataka Web GDG-6MUL1
ಮುಳಗುಂದದಲ್ಲಿ ಎಟಿಎಂ ಎದುರು ಗ್ರಾಹಕರು.


ಇಲ್ಲಿ ವ್ಯವಹರಿಸುವವರೆಲ್ಲ ಹೆಚ್ಚು ಕಡಿಮೆ ಅವಿದ್ಯಾವಂತರೇ, ಎಟಿಎಂನಲ್ಲಿ 100ರಿಂದ 49,000 ರೂ. ವರ್ಗಾವಣೆ, ಠೇವಣಿ, ಹಣ ಡ್ರಾ ಮಾಡುವುದು, ಮಿನಿ ಸ್ಟೇಟ್‌ಮೆಂಟ್‌, ಬ್ಯಾಲೆನ್ಸ್‌ ಎನ್‌ಕ್ವಾಯರಿ ಒಳಗೊಂಡಂತೆ ಇನ್ನಿತರ ಸೌಲಭ್ಯಗಳುಂಟು. ಇಲ್ಲಿ ಸ್ವಲ್ಪು ಯಾಮಾರಿದರೂ ಹಣ ಬೇರೆಯವರ ಖಾತೆಗೆ ಹೋಗುವ ಸಾಧ್ಯತೆಯಿ ಇದೆ. ಆದ್ದರಿಂದ ಕೂಡಲೇ ಇಲ್ಲಿ ಒಬ್ಬ ಕಾವಲುಗಾರನನ್ನು ನೇಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಕುರಿತು ಶಾಖಾ ವ್ಯವಸ್ಥಾಪಕ ಮಂಜುನಾಥ ಸಾಬೋಜಿ ಮಾತನಾಡಿಸಿದಾಗ, ಈಗಾಗಲೇ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸೆಕ್ಯೂರಿಟಿ ಏಜನ್ಸಿಯವರು ಸರಿಯಾಗಿ ಕೆಲಸ ನಿರ್ವಹಿಸದ ಕಾರಣ ದೇಶಾದ್ಯಂತ ತೆಗೆಯಲಾಗಿದೆ. ಈ ಬಗ್ಗೆ ಮತ್ತೆ ಸೆಕ್ಯೂರಿಟಿ ನೇಮಕ ಮಾಡುವಂತೆ ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ