ಆ್ಯಪ್ನಗರ

ಪೇದೆ ಮೇಲೆ ಕಾನೂನು ಕ್ರಮಕ್ಕೆ ಆಗ್ರಹ

ರೋಣ : ಗಜೇಂದ್ರಗಡ ಪೊಲೀಸ್‌ ಠಾಣೆಯಲ್ಲಿ ಪೇದೆಯೊಬ್ಬರು ದಲಿತ ಯುವಕನ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅಪಮಾನ ಮಾಡಿದ್ದು, ಈ ಕೂಡಲೇ ಪೇದೆ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಯವರು ತಹಸೀಲ್ದಾರಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

Vijaya Karnataka 15 May 2019, 5:00 am
ರೋಣ : ಗಜೇಂದ್ರಗಡ ಪೊಲೀಸ್‌ ಠಾಣೆಯಲ್ಲಿ ಪೇದೆಯೊಬ್ಬರು ದಲಿತ ಯುವಕನ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅಪಮಾನ ಮಾಡಿದ್ದು, ಈ ಕೂಡಲೇ ಪೇದೆ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಯವರು ತಹಸೀಲ್ದಾರಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
Vijaya Karnataka Web GDG-14 RON 1
ದಲಿತ ಯುವಕನ ಮೇಲೆ ಗಜೇಂದ್ರಗಡ ಠಾಣೆಯಲ್ಲಿ ಹಲ್ಲೆ ನಡೆಸಿದ ಪೇದೆ ಮೇಲೆ ಕ್ರಮ ಜರುಗಿಸಲು ಆಗ್ರಹಿಸಿ ರೋಣ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.


ಪ್ರಕಾಶ ಹೊಸಹಳ್ಳಿ ಮಾತನಾಡಿ, ಇಲಾಖೆಯ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಗಜೇಂದ್ರಗಡ ಠಾಣೆಯಲ್ಲಿ ದಲಿತ ಜನಾಂಗದ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಗೆ ದಲಿತ ಯುವಕ ಮೈಲಾರಪ್ಪ ಗುಡಿಮನಿ ಎಂಬವರು ಹಾಜರಾಗಿದ್ದರು. ಈ ಸಮಯದಲ್ಲಿ ಠಾಣೆಯ ಪೇದೆ ಕನಕಪ್ಪ ಜಮಾದಾರ ಎಂಬವರು ಠಾಣೆಗೆ ಲುಂಗಿ ಧರಿಸಿ ಬಂದಿದ್ದಿಯಾ ಎಂದು ಹಿಯಾಳಿಸುವ ಜತೆಗೆ ಮನ ಬಂದಂತೆ ಥಳಿಸಿ, ಜಾತಿ ನಿಂದನೆ ಮಾಡಿದ್ದು, ಖಂಡನೀಯ ತಕ್ಷ ಣ ಹಿರಿಯ ಅಧಿಕಾರಿಗಳು ಪೇದೆ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವೀರಪ್ಪ ತೆಗ್ಗಿನಮನಿ ಮಾತನಾಡಿ, ರಕ್ಷ ಣೆ ಮಾಡಬೇಕಿರುವ ಪೊಲೀಸ್‌ ಇಲಾಖೆಯವರು ದಲಿತರ ಮೇಲೆ ಹಲ್ಲೆಗೆ ಮುಂದಾದರೇ ನಮ್ಮನ್ನು ರಕ್ಷ ಣೆ ಮಾಡುವವರು ಯಾರು ? ಎಂದು ಪ್ರಶ್ನಿಸಿದರು.ಕ್ರಮ ಜರುಗಿಸದಿದ್ದರೆ ದಲಿತ ಸಂಘಟನೆಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಹಸೀಲ್ದಾರ ಶರಣಮ್ಮ ಕಾರಿ ಮನವಿ ಸ್ವೀಕರಿಸಿದರು.ಮಂಜುನಾಥ ಹಾಳಕೇರಿ,ಸಂಗಪ್ಪ ಹೊಸಮನಿ, ಮಜೂರಪ್ಪ ಶಾಂತಗೇರಿ, ಬಸವರಾಜ ಮಾದರ, ಮುತ್ತಪ್ಪ ಪೂಜಾರ, ಕರಿಯಪ್ಪ ಮಾದರ ತಾಲೂಕು ದಲಿತ ಸಂಘರ್ಷ ಸಮಿತಿ ಸದಸ್ಯರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ