ಆ್ಯಪ್ನಗರ

ಡೆಂಗೆ,ಚಿಕೂನ್‌ ಗುನ್ಯಾ ತಡೆ ಜಾಗೃತಿ

ಸೊರಟೂರ: ಮಳೆ ನೀರು ಸಂಗ್ರಹವಾಗಿ ಈಡಿಸ್‌ ಸೊಳ್ಳೆ ಉತ್ಪತ್ತಿಯಾಗುವ ಸಂಭವವಿದ್ದು, ಸಾರ್ವಜನಿಕರು ಡೆಂಗೆ ಮತ್ತು ಚಿಕನ್‌ಗುನ್ಯಾ ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಬೇಕೆಂದು ಸಾಯಿಪ್ರಕಾಶ ಆರ್‌.ಮಡಿವಾಳರ ಹೇಳಿದರು.

Vijaya Karnataka 29 May 2019, 5:00 am
ಸೊರಟೂರ: ಮಳೆ ನೀರು ಸಂಗ್ರಹವಾಗಿ ಈಡಿಸ್‌ ಸೊಳ್ಳೆ ಉತ್ಪತ್ತಿಯಾಗುವ ಸಂಭವವಿದ್ದು, ಸಾರ್ವಜನಿಕರು ಡೆಂಗೆ ಮತ್ತು ಚಿಕನ್‌ಗುನ್ಯಾ ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಬೇಕೆಂದು ಸಾಯಿಪ್ರಕಾಶ ಆರ್‌.ಮಡಿವಾಳರ ಹೇಳಿದರು.
Vijaya Karnataka Web GDG-28MUL1
ಸೊರಟೂರ ಗ್ರಾಮದ ಸರಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ನಡೆದ ಡೆಂಗೆ ಮತ್ತು ಚಿಕೂನ್‌ ಗುನ್ಯಾ ಜಾಗೃತಿ ಕಾರ್ಯಕ್ರಮದಲ್ಲಿ ಗದಗ ಎಪಿಎಂಸಿ ಸದಸ್ಯ ಪ್ರೇಮಾ ಹೊಸಮಠ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಸೊರಟೂರ ಗ್ರಾಮದ ಸರಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ನಡೆದ ಡೆಂಗೆ ಮತ್ತು ಚಿಕೂನ್‌ ಗುನ್ಯಾ ರೋಗಗಳ ತಡೆಗಟ್ಟುವಿಕೆ ಕುರಿತು ಜಾಗೃತಿ ಮತ್ತು ಉಚಿತ ಹೋಮಿಯೋಪತಿ ಔಷಧ ವಿತರಿಸಿ ಮಾತನಾಡಿದರು.

ಅಧ್ಯಕ್ಷ ತೆ ವಹಿಸಿದ್ದ ಗದಗ ಎಪಿಎಂಸಿ ಸದಸ್ಯ ಪ್ರೇಮಾ ಸಿ.ಹೊಸಮಠ ಮಾತನಾಡಿ, ಸರಕಾರಿ ಆಯುರ್ವೇದ ಚಿಕಿತ್ಸಾಲವು ಪ್ರತಿ ವರ್ಷವು ಡೆಂಗೆ ಮತ್ತು ಚಿಕೂನ್‌ ಗುನ್ಯಾ ಮುಂಜಾಗೃತ ಕಾರ್ಯದ ಜತೆಗೆ ಉಚಿತ ಔಷಧ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಡಾ.ಸಂಜೀವ ಎಂ.ನಾಗಪ್ಪನವರ, ಪರಶುರಾಮ ಹೂಗಾರ, ಶಿವಪುತ್ರಪ್ಪ ಹಂಪಿಹುಳಿ ಇದ್ದರು. ಇದೇ ಸಂದರ್ಭದಲ್ಲಿ
ಸುಮಾರು 200 ಜನರಿಗೆ ಉಚಿತ ಔಷಧ ವಿತರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ