ಆ್ಯಪ್ನಗರ

ರಾಸಾಯನಿಕ ಬಳಕೆಯಿಂದ ಮಣ್ಣಿನ ಆರೋಗ್ಯ ಹಾಳು

ನರಗುಂದ: ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆ ಅವೈಜ್ಞಾನಿಕ ಸಾಗುವಳಿಯಿಂದ ಮಣ್ಣಿನ ಆರೋಗ್ಯ ಹಾಳಾಗಿ ಕೃಷಿ ಜಮೀನಿನ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗಿ ಭೂಮಿ ಬರಡಾಗುತ್ತಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನಿ ಡಾ.ವಿಠಲ ಕುಲಗೋಡ ಕಳವಳ ವ್ಯಕ್ತಪಡಿಸಿದರು.

Vijaya Karnataka 8 Dec 2019, 7:37 pm
ನರಗುಂದ: ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆ ಅವೈಜ್ಞಾನಿಕ ಸಾಗುವಳಿಯಿಂದ ಮಣ್ಣಿನ ಆರೋಗ್ಯ ಹಾಳಾಗಿ ಕೃಷಿ ಜಮೀನಿನ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗಿ ಭೂಮಿ ಬರಡಾಗುತ್ತಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನಿ ಡಾ.ವಿಠಲ ಕುಲಗೋಡ ಕಳವಳ ವ್ಯಕ್ತಪಡಿಸಿದರು.
Vijaya Karnataka Web destroying soil health with chemical use
ರಾಸಾಯನಿಕ ಬಳಕೆಯಿಂದ ಮಣ್ಣಿನ ಆರೋಗ್ಯ ಹಾಳು


ತಾಲೂಕಿನ ಸುರಕೋಡ ಸಮುದಾಯ ಭವನದಲ್ಲಿವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಅಂಗವಾಗಿ ಆತ್ಮ ಯೋಜನೆಯಡಿ ಕಿಸಾನ ಗೋಷ್ಠಿಯಲ್ಲಿಮಾತನಾಡಿದರು. ಮಣ್ಣಿನ ಆರೋಗ್ಯ ಮತ್ತು ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಣ್ಣಿನ ರಾಸಾಯನಿಕ, ಭೌತಿಕ ಮತ್ತು ಜೈವಿಕ ಗುಣಧರ್ಮ ಸಂರಕ್ಷಿಸುವುದು ಅವಶ್ಯವಾಗಿದೆ. ರಾಸಾಯನಿಕ ಬದಲಾಗಿ ಸಾವಯವ ಪದ್ಧತಿ ಅನುಸರಿಸಿದರೆ ಜಮೀನು ಸಂರಕ್ಷಿಸಲು ಸಾಧ್ಯವಾಗುತ್ತದೆ ಎಂದರು.

ಸಾವಯವ ಕೃಷಿ ಪದ್ಧತಿ ಜತೆಗೆ ನಮ್ಮ ಸಾಗುವಳಿ ಪದ್ಧತಿ ಸಹಿತ ಮಣ್ಣಿನ ಸಂರಕ್ಷಣೆಯಲ್ಲಿಬಹಳ ಮುಖ್ಯಪಾತ್ರವಹಿಸುತ್ತದೆ. ಅಗತ್ಯಕ್ಕನುಗುಣವಾಗಿ ಹದವರಿತ ಬೆಳೆಗೆ ನೀರಾವರಿ ಒದಗಿಸುವುದರಿಂದ ಮಣ್ಣಿನ ಫಲವತ್ತತೆ ಕಾಪಾಡಬಹುದು. ನಮ್ಮ ಕೃಷಿ ಜಮೀನಿನಲ್ಲಿಡೇಂಚಾ, ಸಣಬಿನಂತಹ ಬೆಳೆ ಬೆಳೆದು ಮಣ್ಣಿನಲ್ಲಿಮುಗುಚುವುದರಿಂದ ಮಣ್ಣಿನ ಸಾವಯವ ಇಂಗಾಲದ ಪ್ರಮಾಣ ಹೆಚ್ಚಾಗಿ ಮಣ್ಣಿನ ಫಲವತ್ತತೆ ಸುಧಾರಿಸುತ್ತದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಅಧ್ಯಕ್ಷತೆವಹಿಸಿ, ಮಣ್ಣು ಕೃಷಿಯ ಜೀವಾಳ, ಮಣ್ಣಿನ ಸಂರಕ್ಷಣೆ ಮಾಡಿದಲ್ಲಿಮಾತ್ರ ಸುಸ್ಥಿರ ಕೃಷಿ ಮಾಡಲು ಸಾಧ್ಯ. ರೈತರು ತಮ್ಮ ಜಮೀನಿನಲ್ಲಿಚೌಕುಮಡಿ, ಬದು ನಿರ್ಮಾಣ ಮಾಡುವದರಿಂದ ಮಣ್ಣಿನ ಸವಕಳಿಯನ್ನು ತಡೆಯಲು ಸಾಧ್ಯವಾಗುತ್ತದೆ. ಸೂಕ್ತ ಬೇಸಾಯ ಕ್ರಮ ಅಳವಡಿಸಿಕೊಂಡು ಕೃಷಿಕರು ತಮ್ಮ ಜಮೀನಿನ ಫಲವತ್ತತೆ ಕಾಪಾಡಿಕೊಳ್ಳಲು ಸಲಹೆ ನೀಡಿದರು.

ಎಸ್‌.ಕೆ.ಪಾಟೀಲ ಮಾತನಾಡಿದರು. ರೈತರಿಗೆ ಮಣ್ಣು ಆರೋಗ್ಯ ಅಭಿಯಾನದ ಅಡಿ ಮಣ್ಣು ಆರೋಗ್ಯ ಚಿಟಿಗಳನ್ನು ವಿತರಿಸಲಾಯಿತು. ಸುರಕೋಡ ಗ್ರಾಪಂ ಚುನಾಯಿತ ಪ್ರತಿನಿಧಿಗಳು,ಪುಟ್ಟನಗೌಡ ಮುದಿಗೌಡ, ರುದ್ರಗೌಡ ಆಡಿನ, ಗುರಪ್ಪ ಚವಡಿ, ಕಲ್ಲನಗೌಡ ಪಾಟೀಲ, ಎಸ್‌.ಕೆ.ಪಾಟೀಲ, ಕೃಷಿ ಅಧಿಕಾರಿ ನವೀನಕುಮಾರ ಪಾಟೀಲ, ಆರ್‌.ಸಿ.ಚಾಕಲಬ್ಬಿ, ಎಸ್‌.ಎ.ಚಲವಾದಿ ಪಾಲ್ಗೊಂಡಿದ್ದರು. ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಶಿವಾನಂದ ಸಾಠೆ ನಿರೂಪಿಸಿದರು. ಬಸಲಿಂಗಪ್ಪ ಹಾಲವರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ