ಆ್ಯಪ್ನಗರ

ಮಕ್ಕಳಲ್ಲಿ ದೇಶಪ್ರೇಮ ಬೆಳೆಸಿ: ಸಿ.ಸಿ.ಪಾಟೀಲ

ನರಗುಂದ: ಮಕ್ಕಳಿಗೆ ಆಟ, ಪಾಟದ ಜೊತೆಗೆ ದೇಶಪ್ರೇಮ ಬೆಳೆಸುವಲ್ಲಿ ಶಿಕ್ಷ ಕರು ಶ್ರಮಿಸಬೇಕು. ನಾನು ಭಾರತೀಯ ಎಂಬ ಅಭಿಮಾನ ಬೆಳೆಸಬೇಕು, ದೇಶಭಕ್ತರಿದ್ದರೆ ಮಾತ್ರ ಭಾರತ ಸುಭದ್ರವಾಗಲು ಸಾಧ್ಯ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.

Vijaya Karnataka 6 Mar 2019, 5:00 am
ನರಗುಂದ: ಮಕ್ಕಳಿಗೆ ಆಟ, ಪಾಟದ ಜೊತೆಗೆ ದೇಶಪ್ರೇಮ ಬೆಳೆಸುವಲ್ಲಿ ಶಿಕ್ಷ ಕರು ಶ್ರಮಿಸಬೇಕು. ನಾನು ಭಾರತೀಯ ಎಂಬ ಅಭಿಮಾನ ಬೆಳೆಸಬೇಕು, ದೇಶಭಕ್ತರಿದ್ದರೆ ಮಾತ್ರ ಭಾರತ ಸುಭದ್ರವಾಗಲು ಸಾಧ್ಯ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
Vijaya Karnataka Web GDG-5NRD3
ನರಗುಂದ ಉರ್ದು ಪ್ರೌಢ ಶಾಲೆಯಲ್ಲಿ ಪ್ರಯೋಗಾಲಯ ಕಟ್ಟಡ ನಿರ್ಮಾಣ ಭೂಮಿಪೂಜೆ ಸಮಾರಂಭದಲ್ಲಿ ಶಾಸಕ ಸಿ.ಸಿ.ಪಾಟೀಲ ಮಾತನಾಡಿದರು.


ಇಲ್ಲಿನ ಉರ್ದು ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ನೂತನ ಪ್ರಯೋಗಾಲಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೇವಲ ಜಾತಿ, ಧರ್ಮ ಪ್ರೇಮ ತೋರದೆ, ಹಿಂದು, ಮುಸ್ಲಿಂ, ಕ್ರೈಸ್ತ ಎನ್ನದೆ ನಾವು ಭಾರತೀಯರು ಎಂಬುದನ್ನು ಮಕ್ಕಳಲ್ಲಿ ಬೆಳೆಸಬೇಕಾಗಿದೆ ಎಂದರು.

ಇಂದು ಪ್ರತಿ ಹಂತದಲ್ಲಿ ವಿಜ್ಞಾನ ಅವಶ್ಯಕವಾಗಿದೆ, ವಿಜ್ಞಾನ ಇಲ್ಲದೆ ಏನು ಮಾಡದ ಸ್ಥಿತಿಯಲ್ಲಿದ್ದೇವೆ. ಕಾರಣ ಮಕ್ಕಳು ವಿಜ್ಞಾನದಲ್ಲಿ ಆಸಕ್ತಿ ಹೊಂದಿ ಉತ್ತಮ ಅಂಕ ಪಡೆದುಕೊಳ್ಳಲು ಮುಂದಾಗಬೇಕು. ಪ್ರಯೋಗಾಲಯದ ಪ್ರಯೋಜನೆ ಪಡೆದು ವಿಜ್ಞಾನದಲ್ಲಿ ಹೆಚ್ಚಿನ ಪ್ರಗತಿ ಹೊಂದುವ ಮೂಲಕ ಉತ್ತಮ ಸಾಧನೆ ಮಾಡುವತ್ತ ಗುರಿ ಹೊಂದಬೇಕು ಸಲಹೆ ನೀಡಿದರು.

ಧರ್ಮ ಗುರು ಇಬ್ರಾಹಿಂ ಮಜಿದ್‌, ಬಿಇಓ ಗುರುಪ್ರಸಾದ, ಪುರಸಭೆ ಅಧ್ಯಕ್ಷ ಚಂದ್ರು ಪವಾರ, ಉಪಾಧ್ಯಕ್ಷೆ ಬಸವಣ್ಣೆವ್ವ ಪಿಡ್ನಾಯ್ಕರ, ಎಸ್‌ಡಿಎಂಸಿ ಅಧ್ಯಕ್ಷ ಎಂ.ಆರ್‌.ಜೋರಂ, ಎಂ.ಎಂ.ಖಾಜಿ, ಸುರೇಶ ಸವದತ್ತಿ, ಮೌಲಾಸಾಬ ಮುನವಳ್ಳಿ,ಬಸವರಾಜ ಹುಲಕುಂದ, ಅಲ್ಲಾಬಿ ಜಕಾತಿ, ಅಬ್ದುಲಸಾಬ ಪಠಾಣ, ದಸ್ತಿಗಿರಿಸಾಬ ನಾಲಬಂದ, ಬಿಜಲಿಖಾನ ಮುಂತಾದವರಿದ್ದರು. ಮಕ್ಕಳಿಂದ ಪ್ರಾರ್ಥನೆ, ಮುಖ್ಯ ಶಿಕ್ಷ ಕಿ ಪಿ.ಎಂ.ಹುಬ್ಬಳ್ಳಿ ಸ್ವಾಗತಿಸಿದರು. ಆರ್‌.ಎಂ.ಪಾಟೀಲ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ