ಆ್ಯಪ್ನಗರ

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ

ಮುಂಡರಗಿ: ಇಲ್ಲಿಯ ರೋಟರಿ ಶಿಕ್ಷಣ ಸಂಸ್ಥೆಯ ವಿ.ಜಿ.ಲಿಂಬಿಕಾಯಿ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು.

Vijaya Karnataka 2 Mar 2020, 5:19 pm
ಮುಂಡರಗಿ: ಇಲ್ಲಿಯ ರೋಟರಿ ಶಿಕ್ಷಣ ಸಂಸ್ಥೆಯ ವಿ.ಜಿ.ಲಿಂಬಿಕಾಯಿ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು.
Vijaya Karnataka Web develop scientific attitude in children
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ


ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿಗೆ ಆಯ್ಕೆಯಾದ ಜಗದ್ಗುರು ಅನ್ನದಾನೀಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರೊ.ಎ.ವಿ.ಹಳ್ಳಿಕೇರಿ ಅವರನ್ನು ಸನ್ಮಾನಿಸಲಾಯಿತು. ನಂತರ ರಾಷ್ಟ್ರೀಯ ವಿಜ್ಞಾನ ದಿನಾಚಾರಣೆ ಮಹತ್ವ ಮತ್ತು ದೇಶ ಕಂಡ ಖ್ಯಾತ ವಿಜ್ಞಾನಿ ಸಂಶೋಧಕ ಸರ್‌.ಸಿ.ವಿ.ರಾಮನ್‌ ಅವರ ರಾಮನ್‌ ಎಪೆಕ್ಟ್ ಕುರಿತು ವಿವರಿಸಿದರು.

ರೋಟರಿ ಶಿಕ್ಷಣ ಸಂಸ್ಥೆಯ ಸದಸ್ಯ ಡಾ.ಅನ್ನದಾನಿ ಮೇಟಿ ಅಧ್ಯಕ್ಷತೆ ವಹಿಸಿ, ಮಕ್ಕಳಲ್ಲಿವೈಜ್ಞಾನಿಕ ಮನೋಭಾವ ಬೆಳೆಸಬೇಕು. ಇದರಿಂದ ಮೂಢನಂಬಿಕೆ ಕಡಿಮೆಯಾಗುತ್ತದೆ. ವಿಜ್ಞಾನದಲ್ಲಿಹೊಸ ಹೊಸ ಅವಿಷ್ಕಾರಗಳಾಗಿದ್ದು, ಇಂದಿನ ಯುವ ಪೀಳಿಗೆ ಒಳ್ಳೆಯ ಕೆಲಸಕ್ಕೆ ಸದ್ಬಳಕೆಯಾಗಬೇಕು. ಅಂದಾಗ ವಿಜ್ಞಾನಿಗಳ ಸಂಶೋಧನೆಗೆ ಮಹತ್ವ ಬರುತ್ತ ಎಂದರು.

ಇದೇ ಸಂದರ್ಭದಲ್ಲಿಮುಂಡರಗಿಯ ಜಗದ್ಗುರು ಡಾ.ಅನ್ನದಾನೀಶ್ವರ ಸ್ವಾಮೀಜಿಯವರು ವಿಜ್ಞಾನ ಭವನ ನಿರ್ಮಾಣಕ್ಕಾಗಿ ಭೂಮಿಯನ್ನು ದಾನವಾಗಿ ನೀಡಿದ್ದು ತಮ್ಮ ಅವಧಿಯಲ್ಲಿಉತ್ತಮ ಸುಸಜ್ಜಿತವಾದ ವಿಜ್ಞಾನ ಭವನ ನಿರ್ಮಾಣಕ್ಕೆ ಶ್ರಮವಹಿಸಿ, ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ರೋಟರಿ ಶಿಕ್ಷಣ ಸಂಸ್ಥೆಯ ಸದಸ್ಯ ಜೆ.ಎಸ್‌.ಅಳವಂಡಿ, ಮುಖ್ಯೋಪಾಧ್ಯಾಯ ಸಿ.ವಿ.ಪಾಟೀಲ, ಎಂ.ಬಿ.ನಾಗರಳ್ಳಿ ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ