ಆ್ಯಪ್ನಗರ

ವಿದ್ಯಾಸಂತೆಯಿಂದ ಉದ್ಯಮಶೀಲತಾ ಕೌಶಲ ವೃದ್ಧಿ

ಗದಗ:ವಿದ್ಯಾಸಂತೆ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತಾ ಕೌಶಲ ಬೆಳೆಸಲು ಸಹಾಯಕಾರಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹೇಳಿದರು.

ವಿಕ ಸುದ್ದಿಲೋಕ 27 Mar 2016, 5:00 am
ಗದಗ:ವಿದ್ಯಾಸಂತೆ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತಾ ಕೌಶಲ ಬೆಳೆಸಲು ಸಹಾಯಕಾರಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹೇಳಿದರು.
Vijaya Karnataka Web developing entrepreneurial skills vidyasanteyinda
ವಿದ್ಯಾಸಂತೆಯಿಂದ ಉದ್ಯಮಶೀಲತಾ ಕೌಶಲ ವೃದ್ಧಿ


ಅವರು ಶುಕ್ರವಾರ ನಗರದ ಜೆ.ಟಿ.ಮಹಾವಿದ್ಯಾಲಯದಲ್ಲಿ ಕೆಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಿಲ್ಲಾ ಕೆಗಾರಿಕಾ ಕೇಂದ್ರ, ಕೆ.ಎಲ್.ಇ.ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯ ಹಾಗೂ ಕರ್ನಾಟಕ ಉದ್ಯಮಶೀಲತಾ ಅಭಿವದ್ಧಿ ಕೇಂದ್ರ ಸಿಡಾಕ್ ಸಹಯೋಗದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ವಿದ್ಯಾಸಂತೆ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಂದ ಹಾಕಲ್ಪಟ್ಟ ಎಲ್ಲ ಮಳಿಗೆಗಳಿಗೆ ಸಂದರ್ಶಿಸಿ ವಸ್ತುಗಳನ್ನು ಖರೀದಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.ಸಿಡಾಕ್ ಸಂಸ್ಥೆಯ ಕಾರ್ಯ ವೆಖರಿ ಶ್ಲಾಘಿಸಿದ ಅವರು, ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮ ಹೆಚ್ಚು ಆರಂಭಿಸಲು ಬೆಂಬಲಿಸುವುದಾಗಿ ಭರವಸೆ ನೀಡಿದರು.

ಜೆ.ಟಿ.ಮಹಾವಿದ್ಯಾಲಯದ ಸ್ಥಾನಿಕ ಆಡಳಿತ, ಮಂಡಳಿ ಕಾರ್ಯಾಧ್ಯಕ್ಷ ಡಾ.ವಿ.ಐ.ಕುರಗೋಡ,ರಾಜ್ಯ ಬಿಜೆಪಿ ಉಪಾಧ್ಯಕ್ಷ ನಾಗರಾಜ, ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಅಶೋಕ ನಿಲುಗಲ್, ವೀರೇಶ ಕೂಗು, ಸಿಡಾಕ್ ಸಂಸ್ಥೆಯ ಜಿಲ್ಲಾ ಉಪನಿರ್ದೇಶಕ ಸಿ.ಎಚ್.ಅಂಗಡಿ, ಧಾರವಾಡದ ಲಾಜಿಕ್ ಕಂಪ್ಯೂಟರ್ ಸೆಂಟರ ನಿರ್ದೇಶಕ ಮಹೇಶ ಭಟ್ಟ , ಪ್ರಾಚಾರ್ಯ ಸಿ.ಲಿಂಗಾರೆಡ್ಡಿ, ಪದವಿ ಪೂರ್ವ ಪ್ರಾ.ಎಂ.ಎಂ.ನರಗುಂದ, ಡಾ.ಎಂ.ಎಸ್.ಅಣ್ಣಿಗೇರಿ, ಪ್ರೊ.ಟಿ.ಬಿ.ದೇಸಾಯಿ, ಪ್ರೊ.ಎಸ್.ಜೆ.ಹಿರೇಮಠ, ಪ್ರೊ.ಎಂ.ಎಂ.ಹೊಳ್ಳಿಯವರ ಉಪಸ್ಥಿತರಿದ್ದರು.

ಈ ವಿದ್ಯಾಸಂತೆಯಲ್ಲಿ ವಾಣಿಜ್ಯ ವಿದ್ಯಾರ್ಥಿಗಳು ವಿವಿಧ ರೂಪದ ವ್ಯಾಪಾರಿ ಮಳಿಗೆಗಳನ್ನು ಹಾಕಿದ್ದರು. ಸ್ಟೇಷನ್‌ರ್ರೀ, ಕಾಸ್ಮೆಟಿಕ್ ಸ್ಟಾಲ್, ಗಾರ್ಮೆಂಟ್ಸ್ ಸಿರಾಮಿಕ್ ಮತ್ತು ಗ್ಲಾಸ್ ವೇರ್ಸ, ಫೋಟೋ ಸ್ಟುಡಿಯೋ ಆರ್ಟ್ ಗ್ಯಾಲರಿ, ಮಹೆಂದಿ ಶಾಲ್ ಜವಳಿ ಶಾಪ, ಫಾಸ್ಟಫುಡ್ ಸ್ಟಾಲ್, ತಂಪುಪಾನೀಯಗಳು, ಎಳನೀರು, ಹಣ್ಣು ಹಂಪಲ,ಮೊಬೆಲ್ ಉಪಸಾಮಗ್ರಿ,ಆಟೊಮೊಬೆಲ್ ಸ್ಟಾಲ್‌ಗಳಾದ ಟು ವೀಲರ್, ಮಿನಿ ಕಾರ್, ಲಾಂಗ್ ಚೆಸ್ಸಿ ಕಾರ್, ಸ್ಪೋಟ್ಸ ರ್ ಬೆಕ್ ಇಂಟಿರಿಯ್ ಡೆಕಾರೇಷನ ಐಟೆಮ್ ಇತರೆ ಮಳಿಗೆ ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡವು.

ವಿದ್ಯಾಸಂತೆ ಭಾನುವಾರ ಮುಂದುವರಿದಿದ್ದು,ವಿದ್ಯಾರ್ಥಿಗಳು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ