ಆ್ಯಪ್ನಗರ

ತುಂಗಭದ್ರ ನದಿಯಲ್ಲಿ ಭಕ್ತರ ಪುಣ್ಯಸ್ನಾನ

ಮುಂಡರಗಿ: ತಾಲೂಕಿನ ಸುಕ್ಷೇತ್ರದ ಶಿಂಗಟಾಲೂರು ಬಳಿಯ ತುಂಗಭದ್ರ ನದಿಯಲ್ಲಿಬೇರೆ ಬೇರೆ ಕಡೆಯಿಂದ ಆಗಮಿಸಿದ್ದ ಭಕ್ತರು ಬುಧವಾರ .ಸಂಕ್ರಮಣದ ಪುಣ್ಯಸ್ನಾನ ಮಾಡಿ ವೀರಭದ್ರೇಶ್ವರ ದೇವರ ದರ್ಶನ ಪಡೆದರು.

Vijaya Karnataka 16 Jan 2020, 5:00 am
ಮುಂಡರಗಿ: ತಾಲೂಕಿನ ಸುಕ್ಷೇತ್ರದ ಶಿಂಗಟಾಲೂರು ಬಳಿಯ ತುಂಗಭದ್ರ ನದಿಯಲ್ಲಿಬೇರೆ ಬೇರೆ ಕಡೆಯಿಂದ ಆಗಮಿಸಿದ್ದ ಭಕ್ತರು ಬುಧವಾರ .ಸಂಕ್ರಮಣದ ಪುಣ್ಯಸ್ನಾನ ಮಾಡಿ ವೀರಭದ್ರೇಶ್ವರ ದೇವರ ದರ್ಶನ ಪಡೆದರು.
Vijaya Karnataka Web 15MDR1 MAKAR SANKRANTI_25
ಮುಂಡರಗಿ ತಾಲೂಕಿನ ಸುಕ್ಷೇತ್ರ ಶಿಂಗಟಾಲೂರು ಬಳಿಯ ತುಂಗಭದ್ರ ನದಿಯಲ್ಲಿಬುಧವಾರ ಭಕ್ತರು ಪುಣ್ಯಸ್ನಾನ ಮಾಡಿದರು.


ಗದಗ ಜಿಲ್ಲೆಸೇರಿದಂತೆ ಕೊಪ್ಪಳ, ಹಡಗಲಿ, ಬಳ್ಳಾರಿ, ಹಾವೇರಿ, ಹುಬ್ಬಳ್ಳಿ ಧಾರವಾಡ, ದಾವಣಗೆರೆ ಹರಪನಹಳ್ಳಿ, ಇತರ ಕಡೆಯಿಂದ ತಾಲೂಕಿನ ಶಿಂಗಟಾಲೂರು ವೀರಭದ್ರೇಶ್ವರ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿಆಗಮಿಸಿ ತುಂಗಭದ್ರ ನದಿಯಲ್ಲಿಮಿಂದೆದ್ದರು.

ನಂತರ ಕೊರ್ಲಹಳ್ಳಿ ಬಳಿಯ ನದಿಯಲ್ಲೂಪುಣ್ಯಸ್ನಾನ ಮಾಡಿ ನದಿ ತೀರದಲ್ಲಿರುವ ಮದ್ಲಗಟ್ಟೆ ಆಂಜನೇಯನ ದರ್ಶನ ಪಡೆದರು. ಕುಟುಂಬದ ಸದಸ್ಯರು ಒಟ್ಟಾಗಿ ಕುಳಿತು ಭೋಜನ ಮಾಡಿದರು. ತಾಲೂಕಿನ ಐತಿಹಾಸಿಕ ಡಂಬಳ ದೊಡ್ಡಬಸವೇಶ್ವರ, ಸೋಮೇಶ್ವರ, ತೋಂಟದಾರ್ಯ ದೇವಸ್ಥಾನ, ಮರಳಸಿದ್ದೇಶ್ವರ ಗುಡ್ಡ ಮತ್ತು ಕಪ್ಪತಗುಡ್ಡ, ನಂದಿವೇರಿಮಠಕ್ಕೆ ಭಕ್ತರು ತಂಡೋಪತಂಡವಾಗಿ ಆಗಮಿಸಿದ್ದರು.

ಯುವಕರು ಬೈಕ್‌, ಟಂಟಂ, ಟ್ರಾತ್ರ್ಯಕ್ಸ್‌, ಕಾರು, ಟ್ರಾತ್ರ್ಯಕ್ಟರ್‌ನಲ್ಲಿಆಗಮಿಸಿದ್ದರು. ಪರಸ್ಪರ ಮಕರ ಸಂಕ್ರಮಣದ ಶುಭಾಶಯಗಳನ್ನು ಕೋರಿ ಹರ್ಷದಿಂದ ಮಕರ ಸಂಕ್ರಾಂತಿ ಅಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ