ಗದಗ: ಬೆಟಗೇರಿ ತೆಂಗಿನಕಾಯಿ ಬಜಾರ್ನಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿಭಕ್ತಾದಿಗಳು ನಾನಾ ರೀತಿಯಲ್ಲಿಹರಕೆ ತೀರಿಸಿದರು.
ಇಲ್ಲಿನ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿನಡೆದ ಕಡುಬಿನ ಕಾಳಗದ ಅಂಗವಾಗಿ ಸುಮಾರು 10 ಅಡಿ ಉದ್ದದಷ್ಟು ಅಗ್ನಿಕುಂಡ ನಿರ್ಮಾಣ ಮಾಡಲಾಗಿತ್ತು. ಉದ್ಯೋಗ, ಸಂತಾನ, ಸಂಪತ್ತು ಹಾಗೂ ಆರೋಗ್ಯ ಸೇರಿದಂತೆ ಇನ್ನಿತರೆ ಇಷ್ಟಾರ್ಥ ಈಡೇರಿಸುವಂತೆ ಕೋರಿ ಭಕ್ತರು ಕೆಂಡದಿಂದ ತುಂಬಿದ್ದ ಅಗ್ನಿ ಕುಂಡ ಹಾಯುವ ಮೂಲಕ ಹರಕೆ ತೀರಿಸಿದರು.
ಈ ವೇಳೆ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸೇರಿದಂತೆ ಎಲ್ಲವಯೋಮಾನದವರು ಹರಹರ ಮಹಾದೇವ ಎಂಬ ಜಯ ಘೋಷದೊಂದಿಗೆ ಅಗ್ನಿ ಕುಂಡದಲ್ಲಿಹೆಜ್ಜೆ ಹಾಕುವ ಮೂಲಕ ತಮ್ಮ ಇಷ್ಟಾರ್ಥ ತೀರಿಸಿದರು. ಕೆಲವರು ಪುಟ್ಟ ಕಂದಮ್ಮಗಳನ್ನು ಎತ್ತಿಕೊಂಡು ಅಗ್ನಿಕುಂಡದಲ್ಲಿಸಾಗುವ ಮೂಲಕ ನೋಡುಗರನ್ನು ಗಮನ ಸೆಳೆದರು. ಇಷ್ಟಾರ್ಥ ನೆರವೇರಿದ ಸಂಭ್ರಮದಲ್ಲಿದ್ದ ಭಕ್ತರು ಪುರವಂತರ ನೇತೃತ್ವದಲ್ಲಿವಿಧಿವಿಧಾನದ ಮೂಲಕ ಹಿತ್ತಾಳೆ, ಕಬ್ಬಿಣದ ಸಲಾಕೆಗಳು, ದಾರ ಹಾಗೂ ಸೂಜಿಯಂತಹ ಶಸ್ತ್ರಗಳನ್ನು ಬಾಯಿ, ನಾಲಿಗೆಗೆ ಚುಚ್ಚಿಸಿಕೊಂಡು, ಭಕ್ತಿ ಪರಾವಶರಾದರು.
ಈ ವೇಳೆ ಸಕಲ ಮಂಗಳವಾದ್ಯಗಳು ಪುರವಂತರ ಸಮ್ಮಾಳ, ಭಕ್ತ ಸಮೂಹದ ಜಯ ಘೋಷಗಳು ಮುಗಿಲು ಮುಟ್ಟಿತ್ತು. ಜಾತ್ರಾ ಮಹೋತ್ಸವದ ಅಂಗವಾಗಿ ದೇವರ ದರ್ಶನ ಪಡೆದ ಭಕ್ತರು, ದೇವರಿಗೆ ಹಣ್ಣು ಕಾಯಿ ಹಾಗೂ ನೈವೇದ್ಯ ಸಮರ್ಪಿಸಿದರು.
ಪುರಂತರರಾದ ಬಸವರಾಜ ಬಣಗಾರ, ಶಂಕರಪ್ಪ ಬೂತಾ, ರಾಘು ಗಂಜಿ, ಬಸವರಾಜ ಸೊರಟೂರ, ಕುಮಾರಸ್ವಾಮಿ, ಬಾಬು ನಂದರಗಿ, ಪ್ರಭು ಗಂಟಿ, ಮಂಜು ಗಾಡಗೂಳಿ, ಶಂಕ್ರಪ್ಪ ಹತ್ತಿಕಾಳ, ಮಲ್ಲೇಶ ಬೆಲ್ಲದ, ಕಿರಣ ಬೂತಾನವರ, ಅರ್ಚಕ ವೀರಯ್ಯ ಗಣಾಚಾರಿ ನೇತೃತ್ವದಲ್ಲಿಭಕ್ತರು ಹರಕೆ ತೀರಿಸಿದರು.
ವೀರಭದ್ರ ದೇವರ ಜಾತ್ರಾ ಕಮಿಟಿ ಅಧ್ಯಕ್ಷ ವೀರಬಸಯ್ಯ ವಿರಕ್ತಮಠ, ಅಂದಾನಪ್ಪ ಪಟ್ಟಣಶೆಟ್ಟಿ, ರಂಗಪ್ಪ ಕಬಾಡಿ, ನಾಗಪ್ಪ ಮಳಗಲಿ, ಜಯರಾಮಪ್ಪ ಗಂಜಿ, ರಾಜು ಹರ್ಲಾಪೂರ, ನಾಗಪ್ಪ ಸುರಟೂರ, ಶಂಕ್ರಪ್ಪ ಹತ್ತಿಕಾಳ, ಈರಣ್ಣ ದಾನಿ, ಮಲ್ಲಿಕಾರ್ಜುನ ಬೆಲ್ಲದ, ಮಂಜುನಾಥ ಚನ್ನಪ್ಪನವರ, ವಸಂತ ಕೂಗಳ್ಳಿ, ಎಸ್. ಡಿ. ಮಲ್ಲಾಪೂರ, ತೋಟಪ್ಪ ಅಕ್ಕಿ, ಜಯರಾಮಪ್ಪ ಗಂಜಿ, ಶ್ರೀಶೈಲಪ್ಪ ಸೇರಿದಂತೆ ಬೆಟಗೇರಿ ಹಾಗೂ ಸುತ್ತಮುತ್ತಲಿನ ಊರುಗಳಿಂದ ಆಗಮಿಸಿದ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಇಲ್ಲಿನ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿನಡೆದ ಕಡುಬಿನ ಕಾಳಗದ ಅಂಗವಾಗಿ ಸುಮಾರು 10 ಅಡಿ ಉದ್ದದಷ್ಟು ಅಗ್ನಿಕುಂಡ ನಿರ್ಮಾಣ ಮಾಡಲಾಗಿತ್ತು. ಉದ್ಯೋಗ, ಸಂತಾನ, ಸಂಪತ್ತು ಹಾಗೂ ಆರೋಗ್ಯ ಸೇರಿದಂತೆ ಇನ್ನಿತರೆ ಇಷ್ಟಾರ್ಥ ಈಡೇರಿಸುವಂತೆ ಕೋರಿ ಭಕ್ತರು ಕೆಂಡದಿಂದ ತುಂಬಿದ್ದ ಅಗ್ನಿ ಕುಂಡ ಹಾಯುವ ಮೂಲಕ ಹರಕೆ ತೀರಿಸಿದರು.
ಈ ವೇಳೆ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸೇರಿದಂತೆ ಎಲ್ಲವಯೋಮಾನದವರು ಹರಹರ ಮಹಾದೇವ ಎಂಬ ಜಯ ಘೋಷದೊಂದಿಗೆ ಅಗ್ನಿ ಕುಂಡದಲ್ಲಿಹೆಜ್ಜೆ ಹಾಕುವ ಮೂಲಕ ತಮ್ಮ ಇಷ್ಟಾರ್ಥ ತೀರಿಸಿದರು. ಕೆಲವರು ಪುಟ್ಟ ಕಂದಮ್ಮಗಳನ್ನು ಎತ್ತಿಕೊಂಡು ಅಗ್ನಿಕುಂಡದಲ್ಲಿಸಾಗುವ ಮೂಲಕ ನೋಡುಗರನ್ನು ಗಮನ ಸೆಳೆದರು. ಇಷ್ಟಾರ್ಥ ನೆರವೇರಿದ ಸಂಭ್ರಮದಲ್ಲಿದ್ದ ಭಕ್ತರು ಪುರವಂತರ ನೇತೃತ್ವದಲ್ಲಿವಿಧಿವಿಧಾನದ ಮೂಲಕ ಹಿತ್ತಾಳೆ, ಕಬ್ಬಿಣದ ಸಲಾಕೆಗಳು, ದಾರ ಹಾಗೂ ಸೂಜಿಯಂತಹ ಶಸ್ತ್ರಗಳನ್ನು ಬಾಯಿ, ನಾಲಿಗೆಗೆ ಚುಚ್ಚಿಸಿಕೊಂಡು, ಭಕ್ತಿ ಪರಾವಶರಾದರು.
ಈ ವೇಳೆ ಸಕಲ ಮಂಗಳವಾದ್ಯಗಳು ಪುರವಂತರ ಸಮ್ಮಾಳ, ಭಕ್ತ ಸಮೂಹದ ಜಯ ಘೋಷಗಳು ಮುಗಿಲು ಮುಟ್ಟಿತ್ತು. ಜಾತ್ರಾ ಮಹೋತ್ಸವದ ಅಂಗವಾಗಿ ದೇವರ ದರ್ಶನ ಪಡೆದ ಭಕ್ತರು, ದೇವರಿಗೆ ಹಣ್ಣು ಕಾಯಿ ಹಾಗೂ ನೈವೇದ್ಯ ಸಮರ್ಪಿಸಿದರು.
ಪುರಂತರರಾದ ಬಸವರಾಜ ಬಣಗಾರ, ಶಂಕರಪ್ಪ ಬೂತಾ, ರಾಘು ಗಂಜಿ, ಬಸವರಾಜ ಸೊರಟೂರ, ಕುಮಾರಸ್ವಾಮಿ, ಬಾಬು ನಂದರಗಿ, ಪ್ರಭು ಗಂಟಿ, ಮಂಜು ಗಾಡಗೂಳಿ, ಶಂಕ್ರಪ್ಪ ಹತ್ತಿಕಾಳ, ಮಲ್ಲೇಶ ಬೆಲ್ಲದ, ಕಿರಣ ಬೂತಾನವರ, ಅರ್ಚಕ ವೀರಯ್ಯ ಗಣಾಚಾರಿ ನೇತೃತ್ವದಲ್ಲಿಭಕ್ತರು ಹರಕೆ ತೀರಿಸಿದರು.
ವೀರಭದ್ರ ದೇವರ ಜಾತ್ರಾ ಕಮಿಟಿ ಅಧ್ಯಕ್ಷ ವೀರಬಸಯ್ಯ ವಿರಕ್ತಮಠ, ಅಂದಾನಪ್ಪ ಪಟ್ಟಣಶೆಟ್ಟಿ, ರಂಗಪ್ಪ ಕಬಾಡಿ, ನಾಗಪ್ಪ ಮಳಗಲಿ, ಜಯರಾಮಪ್ಪ ಗಂಜಿ, ರಾಜು ಹರ್ಲಾಪೂರ, ನಾಗಪ್ಪ ಸುರಟೂರ, ಶಂಕ್ರಪ್ಪ ಹತ್ತಿಕಾಳ, ಈರಣ್ಣ ದಾನಿ, ಮಲ್ಲಿಕಾರ್ಜುನ ಬೆಲ್ಲದ, ಮಂಜುನಾಥ ಚನ್ನಪ್ಪನವರ, ವಸಂತ ಕೂಗಳ್ಳಿ, ಎಸ್. ಡಿ. ಮಲ್ಲಾಪೂರ, ತೋಟಪ್ಪ ಅಕ್ಕಿ, ಜಯರಾಮಪ್ಪ ಗಂಜಿ, ಶ್ರೀಶೈಲಪ್ಪ ಸೇರಿದಂತೆ ಬೆಟಗೇರಿ ಹಾಗೂ ಸುತ್ತಮುತ್ತಲಿನ ಊರುಗಳಿಂದ ಆಗಮಿಸಿದ ಸಾವಿರಾರು ಭಕ್ತರು ಭಾಗವಹಿಸಿದ್ದರು.