ಆ್ಯಪ್ನಗರ

ಮಣ್ಣಿನ ಪ್ರತಿ ಕಣದಲ್ಲೂ ಧರ್ಮ ಪರಂಪರೆ

ಲಕ್ಷ್ಮೇಶ್ವರ : ಭಾರತ ದೇಶವು ಪವಿತ್ರ ನದಿಗಳು, ಶಕ್ತಿ ಪೀಠಗಳು ಮತ್ತು ಪುಣ್ಯ ಸ್ಥಳಗಳನ್ನು ಹೊಂದಿರುವ ಸಾಂಸ್ಕೃತಿಕ ಮತ್ತು ಪರಂಪರೆ ನೆಲೆಗಟ್ಟಿನ ದೇಶವಾಗಿದೆ. ಈ ದೇಶದ ಪ್ರತಿ ಮಣ್ಣಿನ ಕಣದಲ್ಲೂ ಧರ್ಮ ಪರಂಪರೆ ಹಾಸುಹೊಕ್ಕಾಗಿದೆ ಎಂದು ಬೆಳ್ಳಟ್ಟಿ-ಕೊಕ್ಕರಗುಂದಿ-ನೀರಲಗಿ ರಾಮಲಿಂಗೇಶ್ವರ ದಾಸೋಹಿಮಠದ ಬಸವರಾಜ ಮಹಾಸ್ವಾಮಿಗಳು ಹೇಳಿದರು.

Vijaya Karnataka 18 Feb 2019, 5:00 am
ಲಕ್ಷ್ಮೇಶ್ವರ : ಭಾರತ ದೇಶವು ಪವಿತ್ರ ನದಿಗಳು, ಶಕ್ತಿ ಪೀಠಗಳು ಮತ್ತು ಪುಣ್ಯ ಸ್ಥಳಗಳನ್ನು ಹೊಂದಿರುವ ಸಾಂಸ್ಕೃತಿಕ ಮತ್ತು ಪರಂಪರೆ ನೆಲೆಗಟ್ಟಿನ ದೇಶವಾಗಿದೆ. ಈ ದೇಶದ ಪ್ರತಿ ಮಣ್ಣಿನ ಕಣದಲ್ಲೂ ಧರ್ಮ ಪರಂಪರೆ ಹಾಸುಹೊಕ್ಕಾಗಿದೆ ಎಂದು ಬೆಳ್ಳಟ್ಟಿ-ಕೊಕ್ಕರಗುಂದಿ-ನೀರಲಗಿ ರಾಮಲಿಂಗೇಶ್ವರ ದಾಸೋಹಿಮಠದ ಬಸವರಾಜ ಮಹಾಸ್ವಾಮಿಗಳು ಹೇಳಿದರು.
Vijaya Karnataka Web dharma tradition in every cell of the soil
ಮಣ್ಣಿನ ಪ್ರತಿ ಕಣದಲ್ಲೂ ಧರ್ಮ ಪರಂಪರೆ


ಪಟ್ಟಣದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷಧಾರಿಗಳ ಪಥ ಸಂಚಲನ ನಂತರ ತೋಟದ್ದೇವರಮಠದ ಆವರಣದಲ್ಲಿ ನಡೆದ ಸಾರ್ವಜನಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಆರ್‌ಎಸ್‌ಎಸ್‌ ಶತಮಾನದ ಇತಿಹಾಸ ಹೊಂದಿದ್ದು, ಹಿಂದೂ ಧರ್ಮದ ರಕ್ಷ ಣೆ, ಸಾರ್ವಜನಿಕ ಸೇವೆ ಈ ಸಂಘದ ಮೂಲ ಉದ್ದೇಶವಾಗಿದೆ. ಆರ್‌ಎಸ್‌ಎಸ್‌ನ್ನು ರಾಷ್ಟ್ರದ ಹಿತದೃಷ್ಟಿಯಿಂದ ಎಲ್ಲ ಪಕ್ಷ ಗಳು ಗೌರವಿಸಬೇಕು. ಇದೊಂದು ಶಿಸ್ತಿನ ಸಂಘವಾಗಿದ್ದು ದೇಶದಲ್ಲಿ ಏನೇ ಅವಘಡ ಸಂಭವಿಸಿದಾಗ ಮುಂಚೂಣಿಯಲ್ಲಿ ನಿಂತು ಪರಿಹಾರ ಕ್ರಮಕ್ಕೆ ಸ್ವಯಂ ಸೇವಕರು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ನಂತರ ಉತ್ತರ ಕರ್ನಾಟಕದ ಪ್ರಾಂತ ಸಂಯೋಜಕರಾದ ದಿಲೀಪ ವರ್ಣೇಕರ ಮಾತನಾಡಿ, ಹಿಂದೂ ಧರ್ಮದ ರಕ್ಷ ಣೆ, ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಿಕೊಳ್ಳಲು ಆರ್‌ಎಸ್‌ಎಸ್‌ ಯಾರಂದಿಗೂ ರಾಜೀ ಮಾಡಿಕೊಳ್ಳವುದಿಲ್ಲ. ಬಹುಸಂಖ್ಯಾತ ಹಿಂದೂಗಳಿರುವ ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಲು ರಾಜಕೀಯ ಪಕ್ಷ ಗಳು ಮೀನಾಮೇಷ ಮಾಡುತ್ತಿರುವುದು ದುದೈರ್‍ವದ ಸಂಗತಿ. ಆರ್‌ಎಸ್‌ಎಸ್‌ ಸಂಘಕ್ಕೆ ತನ್ನದೇ ಆದ ಇತಿಹಾಸವಿದ್ದು ಏನೇ ಗಲಭೆಗಳು ನಡೆದರೆ ಅದನ್ನು ಹಿಂದೂ ಸಂಘಟನೆಗಳ ತಲೆಗೆ ಕಟ್ಟಲು ಹುನ್ನಾರ ನಡೆದಿದೆ. ಆರ್‌ಎಸ್‌ಎಸ್‌ ಇದನ್ನು ಸಹಿಸುವುದಿಲ್ಲ ಎಂದು ಹೇಳಿದರು.

ಮೌನೇಶ ಬಡಿಗೇರ, ಈರಣ್ಣ ಗಾಣಗೇರ ಕಾರ್ಯಕ್ರಮ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ