ಆ್ಯಪ್ನಗರ

ಸಿದ್ದರಾಮಯ್ಯ ಬಂಗಾರದ ಮನೆ ಕಟ್ಟಿಕೊಟ್ಟಿದ್ದಾರಾ? ಕಾರಜೋಳ ಪ್ರಶ್ನೆ

ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹರಿಹಾಯ್ದಿದ್ದಾರೆ.

Vijaya Karnataka 21 Sep 2019, 9:19 am
ಗದಗ: ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಿದ್ದರು. ಆಗ ಅಹಿಂದ ವರ್ಗದವರಿಗೆ ಬಂಗಾರದ ಮನೆ ಕಟ್ಟಿಕೊಟ್ಟರಾ? ಎಷ್ಟು ಮನೆಗೆ ಬಂಗಾರದ ಕುಂಬಿ ಕಟ್ಟಿಕೊಟ್ಟಿದಾರೆ ಎಂಬುದರ ಪಟ್ಟಿ ಕೊಡಲಿ ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
Vijaya Karnataka Web Karjol


ಶುಕ್ರವಾರ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಬಿಜೆಪಿ ಸರಕಾರ ಅಹಿಂದ ವರ್ಗವನ್ನು ಕಡೆಗಣಿಸುತ್ತಿದೆ ಎನ್ನುವ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರಕಾರ ಎಲ್ಲ ವರ್ಗದವರಿಗೆ ಸೌಲಭ್ಯಗಳನ್ನು ಕಲ್ಪಿಸಲಿದೆ ಎಂದು ಹೇಳಿದರು.

ಕೇಂದ್ರ ಸರಕಾರದ ನಿರ್ದೇಶನದ ಪ್ರಕಾರ ನೆರೆ ಸಂತ್ರಸ್ತರಿಗೆ ಪ್ರಥಮ ಹಂತದಲ್ಲಿ3800 ರೂ. ಪರಿಹಾರ ಮಾತ್ರ ಕೊಡಬೇಕು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತುರ್ತಾಗಿ 10 ಸಾವಿರ ರೂ. ನೀಡಿದ್ದಾರೆ. ಈ ವಿಷಯದಲ್ಲಿಪ್ರತಿಪಕ್ಷದವರು ಮಾಡುವ ಟೀಕೆಗಳಲ್ಲಿಹುರುಳಿಲ್ಲಎಂದ ಡಿಸಿಎಂ ಕಾರಜೋಳ, ಕೇಂದ್ರ ಸರಕಾರ ನೆರೆ ಕುರಿತು ಸಮಗ್ರ ಮಾಹಿತಿ ತರಿಸಿಕೊಂಡಿದೆ. ದೇಶದ ನಾಲ್ಕೈದು ರಾಜ್ಯಗಳಲ್ಲಿಪ್ರವಾಹವಾಗಿದೆ. ಖಂಡಿತ ಪರಿಹಾರ ಬಿಡುಗಡೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪ ನೇತೃತ್ವದ ಸರಕಾರ ಮೂರ್ನಾಲ್ಕು ತಿಂಗಳಲ್ಲಿಪತನವಾಗುತ್ತದೆ ಎಂದಿರುವ ಕೋಡಿಮಠದ ಶ್ರೀಗಳ ಭವಿಷ್ಯವಾಣಿ ಕುರಿತು ಮಾತನಾಡಿದ ಡಿಸಿಎಂ, ನಾನು ಜ್ಯೋತಿಷಿಯಲ್ಲ. ಭವಿಷ್ಯಗಳು ಯಾರಾರ‍ಯರಿಗೆ ಹೇಗೆ ಬೇಕೋ ಹಾಗೆ ನುಡಿತಾರೆ, ನುಡಿಯಲಿ. ಕೋಡಿಮಠದ ಶ್ರೀಗಳ ಬಗ್ಗೆ ಅಪಾರ ಗೌರವವಿದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ