ಕೊರೊನಾಗೆ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಆಶ್ರಯ-ಶಿಕ್ಷಣದ ಭರವಸೆ ನೀಡಿದ ದಿಂಗಾಲೇಶ್ವರ ಶ್ರೀಗಳು!

Vijaya Karnataka Web 24 May 2021, 12:33 pm
ಗದಗ: ಕೊರೊನಾ ಆರ್ಭಟ ಹಿನ್ನೆಲೆ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ತಂದೆ ತಾಯಿಗಳನ್ನು ಕಳೆದುಕೊಂಡ ಅದೆಷ್ಟೋ ಮುಗ್ಧ ಮಕ್ಕಳು ಅನಾಥವಾಗಿವೆ. ಅನಾಥ ಮಕ್ಕಳಿಗೆ ನೆರವಿಗೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮಿಜಿಗಳು ಮುಂದಾಗಿದ್ದಾರೆ. ಹೌದು ತಮ್ಮ ಮಠದಲ್ಲಿ ಮಕ್ಕಳಿಗೆ ಆಶ್ರಯ, ಅನ್ನ, ಶಿಕ್ಷಣ‌ ನೀಡಲು ನಿರ್ಧಾರ ಮಾಡಿದ್ದಾರೆ.
ಸ್ಥಳೀಯರ ಸಹಕಾರದಿಂದ ಚನ್ನಗಿರಿಯ ಮೊರಾರ್ಜಿ ವಸತಿ ಶಾಲೆ ಕೋವಿಡ್ ಕೇರ್ ಸೆಂಟರ್‌ ಆಗಿ ಪರಿವರ್ತನೆ
ಒಂದನೇ ತರಗತಿಯಿಂದ ಪಿಯುಸಿ ಶಿಕ್ಷಣದವರೆಗೂ ಮಕ್ಕಳ ಜವಾಬ್ದಾರಿ ತೆಗೆದುಕೊಂಡಿದ್ದಾರೆ ದಿಂಗಾಲೇಶ್ವರ ಸ್ವಾಮೀಜಿಗಳು‌.ಮಠದಲ್ಲಿಯೇ ಅನಾಥ‌ ಮಕ್ಕಳಿಗೆ ಆಶ್ರಯ, ಅರಿವು, ಶಿಕ್ಷಣ ನೀಡುವ ಮೂಲಕ ದತ್ತು‌ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು ಕೊರೊನಾ ಸೋಂಕಿಗೆ ಸಾಕಷ್ಟು ಮಕ್ಕಳ ತಂದೆ ತಾಯಿಗಳು ಬಲಿಯಾಗಿದ್ದಾರೆ. ಅಂಥಹ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು‌ ಅನ್ನೋ ಹಿನ್ನೆಲೆ ನಿರ್ಧಾರ ಸ್ವಾಮೀಜಿಗಳು ಮಾಡಿದ್ದಾರೆ. ರಾಜ್ಯದ ಯಾವುದೇ ಭಾಗದಿಂದ ಮಕ್ಕಳನ್ನ ಕಳಿಸಿಕೊಡಬಹುದಾಗಿದೆ. ಸ್ವಾಮಿಜಿಗಳ ನಿರ್ಧಾರಕ್ಕೆ ಮಠದ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Loading ...