ಆ್ಯಪ್ನಗರ

ಸ್ವಚ್ಛತೆ ಇದ್ದರೆ ರೋಗಗಳು ದೂರ:ಡಾ.ಭಜಂತ್ರಿ

ರೋಣ : ನೂತನವಾಗಿ ಪುರಸಭೆಗೆ ಆಯ್ಕೆಯಾದ ಸದಸ್ಯರು ಜನಹಿತದ ಬಗ್ಗೆ ಇಟ್ಟುಕೊಂಡಿರುವ ದೃಷ್ಠಿಕೋನ ಮತ್ತು ಕಾಳಜಿ ಬಹು ಅನನ್ಯವಾದದ್ದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಎಸ್‌. ಭಜಂತ್ರಿ ಹೇಳಿದರು.

Vijaya Karnataka 22 Jul 2019, 5:00 am
ರೋಣ : ನೂತನವಾಗಿ ಪುರಸಭೆಗೆ ಆಯ್ಕೆಯಾದ ಸದಸ್ಯರು ಜನಹಿತದ ಬಗ್ಗೆ ಇಟ್ಟುಕೊಂಡಿರುವ ದೃಷ್ಠಿಕೋನ ಮತ್ತು ಕಾಳಜಿ ಬಹು ಅನನ್ಯವಾದದ್ದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಎಸ್‌. ಭಜಂತ್ರಿ ಹೇಳಿದರು.
Vijaya Karnataka Web diseases away if there is cleanliness dr bhajantri
ಸ್ವಚ್ಛತೆ ಇದ್ದರೆ ರೋಗಗಳು ದೂರ:ಡಾ.ಭಜಂತ್ರಿ


ಅವರು ಪಟ್ಟಣದ ಸರಕಾರಿ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ,ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಮಾಹಿತಿ ಶಿಕ್ಷ ಣ ಮತ್ತು ಸಂವಹನ ವಿಭಾಗ,ಗದಗ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಪುರಸಭೆ ಕಾರ್ಯಾಲಯ, ರೋಣ ಹಾಗೂ ಪಂ.ಭೀಮಸೇನಜೋಷಿ 100 ಹಾಸಿಗೆಗಳ ತಾಲೂಕು ಮಟ್ಟದಆಸ್ಪತ್ರೆ ಆಶ್ರಯದಲ್ಲಿ ನಡೆದ ನೂತನವಾಗಿ ಆಯ್ಕೆಯಾದ ಪುರಸಭೆ ಸದಸ್ಯರಿಗೆ ಡೆಂಗೆ ಮತ್ತು ಚಿಕುನ್‌ಗುನ್ಯಾ ರೋಗದ ಬಗ್ಗೆ ಜಾಗೃತಿ ಮೂಡಿಸುವ ತರಬೇತಿ ಕಾರ್ಯಾಕ್ರಮದ ನೇತೃತ್ವವಹಿಸಿ ಮಾತನಾಡಿದರು

ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ಹಿರಿಯ ಕೀಟಶಾಸ್ತ್ರಜ್ಞ ಲಿಂಗನಗೌಡ ಹಿರೇಗೌಡರ ಮಾತನಾಡಿ, ಡೆಂಗೆ ಮತ್ತು ಚಿಕುನ್‌ಗುನ್ಯಾ ರೋಗಗಳು ಈಡೀಸ್‌ ಇಜಿಪ್ಟೆ ಎಂಬ ಸೋಂಕಿತ ಹೆಣ್ಣು ಸೊಳ್ಳೆಗಳು ಕಚ್ಚುವುದರಿಂದ ಹರಡುತ್ತದೆ. ಸೊಳ್ಳೆಗಳು ಕಚ್ಚುವುದರಿಂದ ರಕ್ಷ ಣೆ ಪಡೆಯಬೇಕು. ಈಡೀಸ್‌ ಇಜಿಪ್ಟೆ ಹೆಣ್ಣು ಸೊಳ್ಳೆಗಳು ಸಂಗ್ರಹಿಸಿದ ನೀರಿನಲ್ಲಿ ಸೊಳ್ಳೆಗಳು ತಮ್ಮ ಸಂತಾನ ವೃದ್ಧಿ ಮಾಡುವುದರಿಂದ ಮನೆಯಲ್ಲಿ ನೀರು ಸಂಗ್ರಹಿಸುವ ನೀರಿನ ಪರಿಕರಗಳ ಬಗ್ಗೆ ಜಾಗೃತಿ ವಹಿಸುವುದು ಅವಶ್ಯ ಎಂದರು.

ಪುರಸಭೆ ಸದಸ್ಯ ಸಂತೋಷ ಕಡಿವಾಲ ಮಾತನಾಡಿ,ನೂತನವಾಗಿ ಆಯ್ಕೆಯಾದ ಎಲ್ಲ ಸದಸ್ಯರು ನಾವು ಜನಹಿತಕ್ಕಾಗಿ ಪುರಸಭೆ ಸಿಬ್ಬಂದಿಯೊಡಗೂಡಿ ಒಗ್ಗಟ್ಟಿನಿಂದ ಕಾರ್ಯಮಾಡಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತೇವೆ ಎಂದರು.

ಮುಖ್ಯಾಧಿಕಾರಿ ಎಂ.ಎ.ನೂರ್‌ ವುಲ್ಲಾಖಾನ್‌ ಮಾತನಾಡಿ, ನೂತನವಾಗಿ ಆಯ್ಕೆಯಾದ ಸದಸ್ಯರ ಸಹಕಾರದೊಂದಿಗೆ ರೋಣ ಪಟ್ಟಣವನ್ನು ಪ್ಲಾಸ್ಟೀಕ್‌ ಮುಕ್ತ, ಸ್ವಚ್ಛ ನಗರವಾಗಿ ಮಾಡಲು ಶ್ರಮಿಸಲಾಗುವುದು ಎಂದರು.

ವೇದಿಕೆಯಲ್ಲಿ ತಾಲೂಕು ಆರೋಗ್ಯ ಶಿಕ್ಷ ಣಾಧಿಕಾರಿ ಕೆ.ಎ. ಹಾದಿಮನಿ, ಬಿ.ಆರ್‌.ಪಾಟೀಲ್‌, ಎಸ್‌.ಎಂ.ನೂಲ್ವಿ, ರತ್ವಾ ಬನ್ನಪ್ಪನವರ್‌, ಕೆ.ಸಿ.ಬಿ. ಹಿರೇಮಠ, ಮುತ್ತಣ್ಣ ಗಡಗಿ, ಶಿವಕುಮಾರ ಇಲಾಳ, ಮಂಜುಳಾ, ಕಳಕಮ್ಮ, ವೈ.ವೈ. ಹಕ್ಕಿ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ