ಆ್ಯಪ್ನಗರ

ಅವೈಜ್ಞಾನಿಕ ಧೋರಣೆಯಿಂದ ಬೋಧನೆಗೆ ಅಡ್ಡಿ

ಗದಗ : ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷ ಣದೊಂದಿಗೆ ಫಲಿತಾಂಶ ಉತ್ತಮಪಡಿಸುವಲ್ಲಿ ಶಿಕ್ಷ ಕರಷ್ಟೇ ಪಾಲಕರೂ ಜವಾಬ್ದಾರರು. ಶಿಕ್ಷ ಕರಿಗೆ ನೀಡುವ ತರಬೇತಿಗಳು ತರಗತಿ ತಲುಪಬೇಕು ಎಂದು ಮಾಧ್ಯಮಿಕ ಶಾಲಾ ಶಿಕ್ಷ ಕರ ಸಂಘದ ಗೌರವ ಅಧ್ಯಕ್ಷ ಡಾ.ಬಸವರಾಜ ಧಾರವಾಡ ಹೇಳಿದರು.

Vijaya Karnataka 7 Dec 2018, 5:00 am
ಗದಗ : ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷ ಣದೊಂದಿಗೆ ಫಲಿತಾಂಶ ಉತ್ತಮಪಡಿಸುವಲ್ಲಿ ಶಿಕ್ಷ ಕರಷ್ಟೇ ಪಾಲಕರೂ ಜವಾಬ್ದಾರರು. ಶಿಕ್ಷ ಕರಿಗೆ ನೀಡುವ ತರಬೇತಿಗಳು ತರಗತಿ ತಲುಪಬೇಕು ಎಂದು ಮಾಧ್ಯಮಿಕ ಶಾಲಾ ಶಿಕ್ಷ ಕರ ಸಂಘದ ಗೌರವ ಅಧ್ಯಕ್ಷ ಡಾ.ಬಸವರಾಜ ಧಾರವಾಡ ಹೇಳಿದರು.
Vijaya Karnataka Web disruption of teaching from the psychological attitude
ಅವೈಜ್ಞಾನಿಕ ಧೋರಣೆಯಿಂದ ಬೋಧನೆಗೆ ಅಡ್ಡಿ


ಅವರು ಇಲ್ಲಿಯ ರಾಜೀವ ಗಾಂಧಿ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷ ಣ ಇಲಾಖೆ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಹಿಂದಿ ಭಾಷಾ ಸಹಶಿಕ್ಷ ಕರ ಸಂಘದ ಆಶ್ರಯದಲ್ಲಿ ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳ ಫಲಿತಾಂಶ ಉತ್ತಮ ಪಡಿಸಲು ಹಿಂದಿ ಭಾಷಾ ಮಾರ್ಗಸೂಚಿ ಹಾಗೂ ಕ್ರಿಯಾ ಯೋಜನೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಶಿಕ್ಷ ಕರು ಸಾಕಷ್ಟು ಸಮಸ್ಯೆ, ಆತಂಕ, ಒತ್ತಡಗಳ ಮಧ್ಯ ಕರ್ತವ್ಯ ನಿರ್ವಹಿಸುವ ವಾತಾವರಣವಿದೆ. ಸರಕಾರದ ಅವೈಜ್ಞಾನಿಕ ಧೋರಣೆಯಿಂದಾಗಿ ಹಾಗೂ ಶಿಕ್ಷ ಕರಿಗೆ ಪಾಠಗಿಂತ ಅನ್ಯ ಕಾರ್ಯಗಳಲ್ಲಿಯೇ ಹೆಚ್ಚು ತೊಡಗಿಸುವದರಿಂದಾಗಿ ಬೋಧನೆಗೆ ಅಡ್ಡಿಯಾಗಿದೆ. ಚುನಾವಣೆ, ಜನ-ದನ ಗಣತಿ, ತರಬೇತಿ, ಕಾಗದಪತ್ರಗಳನ್ನು ಸೃಷ್ಟಿಸುವದು ಬಡಾವಡೆ ಮಾಡುವುದು, ದಾಖಲೆಗಳನ್ನು ನೋಂದಾಯಿಸುವುದು, ಜಯಂತಿ, ಪುಣ್ಯತಿಥಿ, ಮುಷ್ಕರ, ಬಂದ್‌ಗಳ ಮಧ್ಯ ಪಾಠಗಳು ಹಿಂದೆ ಉಳಿಯುತ್ತಿವೆ. ಹೀಗಾಗಿ ಕಲಿಸುವಿಕೆಯಲ್ಲಿ ಫಲಿತಾಂಶದಲ್ಲಿ ಹಿನ್ನಡೆಯಾಗುತ್ತಿದೆ ಎಂದರು.

ಎಸ್‌.ಎಸ್‌.ಎಲ್‌.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಶಿಕ್ಷ ಕರಿಗೆ ಅಂಕ-ಕ್ರಮ ಜರುಗಿಸುವದು, ಫಲಿತಾಂಶ ಶೇ. 40ಕ್ಕಿಂತ ಕಡಿಮೆಯಾದರೆ ಅನುದಾನದಲ್ಲಿ ಕಡಿತಗೊಳಿಸುವದು ಅವೈಜ್ಞಾನಿಕ ಪದ್ಧತಿಯಾಗಿದೆ ಎಂದು ಹೇಳಿದರು.

ಹಿಂದಿ ಪ್ರಭಾವಿ ಭಾಷೆಯಾಗಿದೆ. ಈ ಭಾಷೆಯನ್ನು ಪರಿಣಾಮಕಾರಿಯಾಗಿ ಬೋಧಿಸುವ ಕಾರ್ಯ ಆಗಬೇಕಿದೆ ಎಂದರು.

ಮುಖ್ಯ ಅತಿಥಿ, ಮಾಧ್ಯಮಿಕ ಶಾಲಾ ಶಿಕ್ಷ ಕರ ಸಂಘದ ಅಧ್ಯಕ್ಷ ಎಸ್‌.ಎಂ.ಕೊಟಗಿ, ಕಾರ್ಯದರ್ಶಿ ಕೆ.ಬಿ.ಭಜಂತ್ರಿ ಮಾತನಾಡಿ, ಶಿಕ್ಷ ಣದ ಗುಣಮಟ್ಟ ಹಾಗೂ ಫಲಿತಾಂಶ ಸುಧಾರಣೆಗೆ ಹೊರತಂದಿರುವ ಹಿಂದಿ ಭಾಷಾ ಮಾರ್ಗಸೂಚಿ ಹಾಗೂ ಕ್ರಿಯಾ ಯೋಜನೆ ಮೌಲ್ಯಯುತವಾಗಿದ್ದು ಇದಕ್ಕಾಗಿ ಪರಿಶ್ರಮಿಸಿದವರೆಲ್ಲರೂ ಅಭಿನಂದನಾರ್ಹರು ಎಂದರು.

ಗದಗ ಜಿಲ್ಲಾ ಹಿಂದಿ ಶಿಕ್ಷ ಕರ ಸಂಘದ ಅಧ್ಯಕ್ಷ ಎ.ಎಲ್‌. ಬಿಜಾಪೂರ ಮಾತನಾಡಿ, ಸಾರ್ವಜನಿಕ ಶಿಕ್ಷ ಣ ಇಲಾಖೆ ಆದೇಶದಂತೆ ಕ್ರಿಯಾ ಯೋಜನೆ ಹಾಗೂ ಹಿಂದಿ ಭಾಷಾ ಮಾರ್ಗಸೂಚಿಯನ್ನು ಹಿರಿಯ ಮತ್ತು ಅನುಭವಿಕ ಸಂಪನ್ಮೂಲ ವ್ಯಕ್ತಿ, ಶಿಕ್ಷ ಕರ ಬಳಗ ಸೇರಿಕೊಂಡು ರಚಿಸಲಾಗಿದೆ. ಇದರಿಂದ ಗುಣಮಟ್ಟದ ಶಿಕ್ಷ ಣ ಹಾಗೂ ಉತ್ತಮ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಿದೆ ಎಂಬುದು ನಮ್ಮ ಆಶಾಭಾವನೆಯಾಗಿದೆ ಎಂದರು.

ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಸಹದೇವ ಕರಿ ಅಧ್ಯಕ್ಷ ತೆ ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ಬಿ.ಎಸ್‌.ಭಜಂತ್ರಿ, ಸಂಪನ್ಮೂಲ ವ್ಯಕ್ತಿ ಖ್ವಾಜಾಸಾಬ ಕರಡಿ, ಜೆ.ಎ.ಭಾವಿಕಟ್ಟಿ, ಎಸ್‌.ಎಸ್‌.ರಾಠೋಡ, ಎಸ್‌.ಎಸ್‌. ರಾಠೋಡ, ಎಂ.ಎಸ್‌.ಕುಚಬಾಳ, ಟಿ.ಎಸ್‌.ಬಂಡಿಹಾಳ, ಎ.ಎನ್‌.ನದಾಫ, ಸಿ.ಎಂ.ಪತ್ತಾರ, ಎಸ್‌.ಎಸ್‌.ಮುಧೋಳ, ಎಚ್‌.ಡಿ.ಬ್ಯಾಳಿ, ವ್ಹಿ.ಜಿ.ಕಾಂಬಳೇಕರ ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಯು.ಎಸ್‌.ನಿಪ್ಪಾಣಿ ಸ್ವಾಗತಿಸಿದರು, ಸಿ.ಬಿ.ಮುಧೋಳಮಠ ನಿರೂಪಿಸಿದರು. ಟಿ.ಎಂ. ಮಂಜುಳಾ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ