ಆ್ಯಪ್ನಗರ

ಮುಂಡರಗಿ ಅನ್ನದಾನ ಶ್ರೀ ಗಳಿಂದ ಆಹಾರ ಬಟ್ಟೆ ವಿತರಣೆ

ನರಗುಂದ : ಎಷ್ಟೆ ಸಂಪತ್ತು ಗಳಿಸಿದರೂ ಪ್ರಕೃತಿ ಮುಂದೆ ನಶ್ವರ.ಪ್ರಕೃತಿಯನ್ನು ಹಿಡಿದುಕೊಳ್ಳಲು ಸಾಧ್ಯವಿಲ್ಲ. ಪ್ರಕೃತಿ ವಿಕೋಪಕ್ಕೆ ಸಿಲುಕಿದ ಸಂತ್ರಸ್ತರಿಗೆ ಆಥ್ಮಸ್ಥೈರ್ಯ ಹೇಳಲು ಬಂದಿರುವುದಾಗಿ ಎಂದು ಮುಂಡರಗಿ ಸಂಸ್ಥಾನಮಠದ ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

Vijaya Karnataka 19 Aug 2019, 5:00 am
ನರಗುಂದ : ಎಷ್ಟೆ ಸಂಪತ್ತು ಗಳಿಸಿದರೂ ಪ್ರಕೃತಿ ಮುಂದೆ ನಶ್ವರ.ಪ್ರಕೃತಿಯನ್ನು ಹಿಡಿದುಕೊಳ್ಳಲು ಸಾಧ್ಯವಿಲ್ಲ. ಪ್ರಕೃತಿ ವಿಕೋಪಕ್ಕೆ ಸಿಲುಕಿದ ಸಂತ್ರಸ್ತರಿಗೆ ಆಥ್ಮಸ್ಥೈರ್ಯ ಹೇಳಲು ಬಂದಿರುವುದಾಗಿ ಎಂದು ಮುಂಡರಗಿ ಸಂಸ್ಥಾನಮಠದ ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.
Vijaya Karnataka Web GDG-18NRD2


ಇಲ್ಲಿನ ಬಸವೇಶ್ವರ ಸಮುದಾಯ ಭವನದಲ್ಲಿ ಆಶ್ರಯ ಪಡೆದ ಬೂದಿಹಾಳ, ಕೊಣ್ಣೂರ ಗ್ರಾಮದ ನೆರೆ ಪೀಡಿತ ಸಂತ್ರಸ್ತರಿಗೆ ಆಹಾರ, ಮನೆ ವಸ್ತು, ಬಟ್ಟೆಗಳನ್ನು ವಿತರಣೆ ಹಾಗೂ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 2ಲಕ್ಷ ರೂ ಪರಿಹಾರ ಚೆಕ್‌ ವಿತರಿಸಿ ಮಾತನಾಡಿದರು.

ನಿತ್ಯ ಉಪಯೋಗಿಸುವ ವಸ್ತುಗಳನ್ನು ನೀಡಲಾಗುತ್ತಿದೆ. ಎಲ್ಲವನ್ನು ಸರಕಾರದಿಂದ ಕೊಡಲು ಸಾಧ್ಯವಿಲ್ಲ, ದಾನಿಗಳು ಸಹಾಯಕ್ಕೆ ಮುಂದೆ ಬಂದಾಗ ಹೊಸ ಬಾಳು ಕಟ್ಟಿಕೊಡಲು ಸಹಾಯ ಮಾಡಿದಂತಾಗುತ್ತದೆ ಎಂದರು. ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಮಳೆ, ಬೆಳೆ ಬಂದಾಗ ಮಠಗಳಿಗೆ ಭಕ್ತರು ದಾನ ಧರ್ಮ ಮಾಡಿ ಮಠವನ್ನು ಬೆಳೆಸುತ್ತೀರಿ. ಆದರೆ ಈಗ ಭಕ್ತರು ತೊಂದರೆಯಲ್ಲಿ ಸಿಲುಕಿದವರ ನೆರವಿಗೆ ಬರಬೇಕು ಎಂದರು.

ಮುಂಡರಗಿ ಮಠದ ಡಾ.ಬೆಳವಟಗಿಮಠ ಮಾತನಾಡಿದರು. ವಿರಕ್ತಮಠದ ಶಿವಕುಮಾರ ಸ್ವಾಮೀಜಿ, ಎಸ್‌.ಸಿ.ಗುಡ್ಡಾಪೂರಮಠ, ಯಲ್ಲಪ್ಪ ದೇಸಾಯಿ, ಬಿ.ಆರ್‌.ಕದಂ, ಬಸವರಾಜ ತೋಬರಿ, ಕುಮಾರ ಬನ್ನಿಕೊಪ್ಪ, ದೃವಕುಮಾರ ಹೂಗಾರ, ಕೃಷ್ಣ ಬಡಿಗೇರ, ರಾಜಭಕ್ಷಿ ಬೆಟಗೇರಿ, ಪವನಕುಮಾರ ಮೇಟಿ, ಆರ್‌.ಆರ್‌.ಹೆಗಡಾಳ, ಈರಣ್ಣ ಗಟ್ಟಿ, ವಿ.ಆರ್‌.ಹಿರೇಮಠ, ಸಂಗಪ್ಪ ಕಮದ್ಯಾಳ, ಅಜ್ಜಪ್ಪ ಇಟಗಿಮಠ ಪಾಲ್ಗೊಂಡಿದ್ದರು.

2ಸಾವಿರ ರೊಟ್ಟಿ, ಬಟ್ಟೆ ವಿತರಣೆ: ಮುಂಡರಗಿ ಮಠದಿಂದ ಬೂದಿಹಾಳ ಗ್ರಾಮದ ನೆರೆ ಸಂತ್ರಸ್ತರಿಗೆ 2ಸಾವಿರ ರೊಟ್ಟಿ, 55 ಕೆಜಿ ಶೇಂಗಾ ಚಟ್ನಿ, ಮಂಡಕ್ಕಿ ಚೀಲ,5 ಕ್ವಿಂಟಾಲ್‌ ಅಕ್ಕಿ, 279 ಸೀರೆ, 201 ಚಾದರ ಸೇರಿದಂತೆ ಟಾವೆಲ್‌, ಮಕ್ಕಳ ಬಟ್ಟೆಗಳು, ಚೂಡಿದಾರ, ದೋತರಗಳು,ರೆಡಿಮೇಡ್‌ ಶರ್ಟ್‌, ಚಾಪೆ,ಪಾತ್ರೆ,ಕೊಡ, ಬಕೀಟ್‌ಗಳನ್ನು ವಿತರಿಸಲಾಯಿತು.

ಮಠದಿಂದ ಅಪಾರ ನೆರವು :
ಮುಂಡರಗಿ :ಇಲ್ಲಿಯ ಜ.ಡಾ. ಅನ್ನದಾನೀಶ್ವರ ಸ್ವಾಮಿಗಳು ಮಠದಿಂದ ಆಹಾರಧಾನ್ಯ ಬಟ್ಟೆ ಪಾತ್ರೆ ಇತರ ವಸ್ತುಗಳನ್ನು ಸಂಗ್ರಹಿಸಿ ಕೊಣ್ಣೂರು ಗ್ರಾಮದ ನೆರೆ ಸಂತ್ರಸ್ತರಿಗೆ ಭಾನುವಾರ ತಲುಪಿಸಿದರು.

2 ಸಾವಿರ ರೊಟ್ಟಿ, 5 ಕ್ವಿಂಟಲ್‌ ಅಕ್ಕಿ, 2 ಮಂಡಕ್ಕಿ ಚೀಲ, 55 ಕೆಜಿ ಶೆಂಗಾ ಚಟ್ನಿ, 279 ಸೀರೆ, 201 ಚಾದರ, 137 ಜಂಪರ್‌ ಪೀಸ್‌, 25 ಟೆವೆಲ್‌,25 ಚಿಕ್ಕಮಕ್ಕಳ ಡ್ರೆಸ್‌, 27 ಚೂಡಿದಾರ , 25 ದೋತರ, 51 ರೆಡಿಮೇಡ್‌ ಶರ್ಟ್‌, 17 ಪ್ಯಾಂಟ್‌, ಶರ್ಟ್‌, 4 ಶಾಲು, 9 ಟಿ.ಶರ್ಟ್‌, 6 ಚಾಪೆ, 55 ಅಲ್ಯುನಿಯಂ ಪಾತ್ರೆಗಳು, 40 ಸ್ಟೀಲ್‌ ತಟ್ಟೆ, 41 ಸ್ಟೀಲ್‌ ಸಣ್ಣ ಬಿಂದಿಗೆ ಸಂಗ್ರಹಿಸಿ ನೆರೆ ಸಂತ್ರಸ್ತರಿಗೆ ಕಳಿಸಲಾಯಿತು.

ಜ.ಡಾ.ಅನ್ನದಾನೀಶ್ವರ ಸ್ವಾಮಿಗಳು ,ವಿ.ಎಸ್‌.ಘಟ್ಟಿ, ಪುರಸಭೆ ಸದಸ್ಯರಾದ ಪವನ ಮೇಟಿ, ರಾಜಾಭಾಕ್ಷಿ ಬೆಟಗೇರಿ, ರಾಮಸ್ವಾಮಿ ಹೆಗ್ಗಡಾಳ, ಡಾ.ಎಂ.ಬಿ.ಬೆಳವಟಗಿಮಠ, ಸಿ.ಎಸ್‌.ಅರಸನಾಳ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ