ಆ್ಯಪ್ನಗರ

ಶಿವ ದೇವಸ್ಥಾನದಲ್ಲಿ ಗಂಗಾಜಲ ವಿತರಣೆ

ನರಗುಂದ: ಇಲ್ಲಿಯ ಶಂಕರಲಿಂಗ ದೇವಸ್ಥಾನ, ಈಶ್ವರ ದೇವಸ್ಥಾನ, ಗಂಗೇಶ್ವರ ದೇವಸ್ಥಾನ, ದಂಡೇಶ್ವರ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ ಸೇರಿದಂತೆ ಮುಂತಾದ ದೇವಸ್ಥಾನಗಳಲ್ಲಿಭಕ್ತರು ಗಂಗಾಜಲ ಸ್ವೀಕರಿಸಿದರು.

Vijaya Karnataka 23 Feb 2020, 5:00 am
ನರಗುಂದ: ಇಲ್ಲಿಯ ಶಂಕರಲಿಂಗ ದೇವಸ್ಥಾನ, ಈಶ್ವರ ದೇವಸ್ಥಾನ, ಗಂಗೇಶ್ವರ ದೇವಸ್ಥಾನ, ದಂಡೇಶ್ವರ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ ಸೇರಿದಂತೆ ಮುಂತಾದ ದೇವಸ್ಥಾನಗಳಲ್ಲಿಭಕ್ತರು ಗಂಗಾಜಲ ಸ್ವೀಕರಿಸಿದರು.
Vijaya Karnataka Web distribution of gangas water in the shiva temple
ಶಿವ ದೇವಸ್ಥಾನದಲ್ಲಿ ಗಂಗಾಜಲ ವಿತರಣೆ


ಶಿವರಾತ್ರಿ ಹಿನ್ನೆಲೆಯಲ್ಲಿಬೆಳಗ್ಗೆಯಿಂದ ಸಂಜೆವರೆಗೆ ಉಪವಾಸ ವೃತ ಆಚರಿಸಿದರು. ಬೆಳಗ್ಗೆ ಮತ್ತು ಸಂಜೆ ಶಿವನ ದೇವಸ್ಥಾನಗಳು ಭಕ್ತರಿಂದ ತುಂಬಿದ್ದವು. ಜತೆಗೆ ದೇವಸ್ಥಾನಗಳಲ್ಲಿಅಲಂಕಾರ ಮಾಡಿ ಭಕ್ತರಿಗೆ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳು, ವೃದ್ದರು, ಮಹಿಳೆಯರು ಎನ್ನದೆ ಕುಟುಂಬ ಸಮೇತ ದೇವರ ದರ್ಶನ ಪಡೆದು ನೈವೈದ್ಯ ಸಲ್ಲಿಸುವ ಮೂಲಕ ಉಪವಾಸ ಅಂತಿಮಗೊಳಿಸಿದರು. ಶಿವರಾತ್ರಿಗೆ ಬೇಕಾದ ಕರ್ಜುರ, ದ್ರಾಕ್ಷಿ, ಬಾಳೆ ಹಣ್ಣು ಹಾಗೂ ಸೆಂಗಾ ಮತ್ತು ಸಾಬೂದಾನಿಗಳ ಖರೀದಿಗೆ ಜನ ಮುಗಿ ಬಿದ್ದಿದ್ದು ವಿಶೇಷವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ