ಆ್ಯಪ್ನಗರ

ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ವಿತರಣೆ

ನರಗುಂದ: ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕ ಗದಗ,ದಲಿತ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ದಲಿತ ವಿಮೋಚನಾ ಕೇಂದ್ರ ಗದಗ ಇವರ ಆಶ್ರಯದಲ್ಲಿ ದೇಶದ ಮೊದಲ ಶಿಕ್ಷ ಕಿ ಸಾವಿತ್ರಿಬಾಯಿ ಫುಲೆಯವರ

Vijaya Karnataka 3 Jan 2019, 5:00 am
ನರಗುಂದ: ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕ ಗದಗ,ದಲಿತ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ದಲಿತ ವಿಮೋಚನಾ ಕೇಂದ್ರ ಗದಗ ಇವರ ಆಶ್ರಯದಲ್ಲಿ ದೇಶದ ಮೊದಲ ಶಿಕ್ಷ ಕಿ ಸಾವಿತ್ರಿಬಾಯಿ ಫುಲೆಯವರ 188ನೇ ಜಯಂತಿ ಆಚರಣೆ ಹಾಗೂ ಸಾವಿತ್ರಿಬಾಯಿ ಫುಲೆ ಶಿಕ್ಷ ಕಿ ಪ್ರಶಸ್ತಿ ಪ್ರಧಾನ ಸಮಾರಂಭ ಜ.3 ರಂದು ಸಂಜೆ 5-30ಕ್ಕೆ ಜರುಗಲಿದೆ.
Vijaya Karnataka Web distribution of savitribai poole award
ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ವಿತರಣೆ


ದೊರೆಸ್ವಾಮಿಮಠದ ಶ್ರೀ ಶಾಂತಲಿಂಗ ಸ್ವಾಮಿಗಳ ಸಾನ್ನಿಧ್ಯದಲ್ಲಿ ದಲಿತ ಸಾಹಿತ್ಯ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಅಧ್ಯಕ್ಷ ತೆಯಲ್ಲಿ ಸಾಹಿತಿ ಡಾ.ವೈ.ಎಂ.ಭಜಂತ್ರಿ, ರಾಜ್ಯ ಘಟಕದ ಕಾರ್ಯದರ್ಶಿ ಡಾ.ಎಚ್‌.ಬಿ.ಪೂಜಾರ, ಸಂಚಾಲಕ ಶಿವನಗೌಡರ, ಜಿಲ್ಲಾ ಅಧ್ಯಕ್ಷ ಈರಪ್ಪ ಮಾದರ ಆಗಮಿಸಲಿದ್ದಾರೆ. ಪ್ರಶಸ್ತಿ ಪುರಸ್ಕೃತರಾದ ರೋಣದ ಸರೋಜಾ ಹೊಸಮನಿ, ಎ.ಎಲ್‌.ಮೇಳನವರ, ಲಕ್ಷ್ಮೇಶ್ವರದ ಅನಿತಾ ನಿಂಗಮ್ಮನವರ, ಕಿರಟಗೇರಿಯ ಎಸ್‌.ಬಿ.ಕಲಾದಗಿ, ಹಿರೇವಡ್ಡಟ್ಟಿಯ ಶುಭಲಕ್ಷ್ಮೀ ಪೂಜಾರ ಅವರನ್ನು ಗೌರವಿಸಲಾಗುವುದು. ನಂತರ ನಡೆಯುವ ಕವಿಗೋಷ್ಠಿಯಲ್ಲಿ ಕವಿಗಳು ಭಾಗವಹಿಸುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ